Ukraine War: ರಷ್ಯಾ ದಾಳಿಯಲ್ಲಿ 13 ಉಕ್ರೇನ್ ಪ್ರಜೆಗಳು ಬಲಿ ಆರೋಪ
ಯುರೋಪ್ ನೆಮ್ಮದಿ ಕೆಡಿಸಿರುವ ರಷ್ಯಾ & ಉಕ್ರೇನ್ ವಾರ್ ಯಾವಾಗ ನಿಲ್ಲುತ್ತೆ? ಅಂತಾನೇ ಇದೀಗ ಕೋಟ್ಯಂತರ ಜನ ಕಾಯುತ್ತಿದ್ದಾರೆ. ಆದರೆ ಇಂತಹ ಸಮಯದಲ್ಲೂ ರಷ್ಯಾ & ಉಕ್ರೇನ್ ಮಧ್ಯೆ ಪರಸ್ಪರ ದಾಳಿ ಮುಂದುವರಿದಿದ್ದು, ಭೀಕರ ದಾಳಿಯಲ್ಲಿ ಇದೀಗ ಘೋರ ದುರಂತ ಕೂಡ ಸಂಭವಿಸುತ್ತಿದೆ. ಅದರಲ್ಲೂ ರಷ್ಯಾ ದಾಳಿಯಲ್ಲಿ ಇದೀಗ 13 ಉಕ್ರೇನ್ ಪ್ರಜೆಗಳು ಬಲಿ ಆಗಿದ್ದಾರೆ ಎಂದು ಆರೋಪ ಮಾಡಲಾಗಿದೆ.
ರಷ್ಯಾ ಸೇನೆ ಉಕ್ರೇನ್ ದೇಶದ ಹಲವು ಪ್ರದೇಶಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿ ಆಘಾತ ನೀಡುತ್ತಿದೆ. ಇದೇ ರೀತಿ ಕೆಲವೇ ಗಂಟೆಗಳಲ್ಲಿ ರಷ್ಯಾ ನಡೆಸಿರುವ ದಾಳಿಯಲ್ಲಿ ಈಗ ಉಕ್ರೇನ್ ಮೂಲದ ಸುಮಾರು 13 ಪ್ರಜೆಗಳು ಬಲಿಯಾಗಿದ್ದಾರೆ ಎಂಬ ಆರೋಪ ಮಾಡಲಾಗಿದೆ. ಈಗಾಗಲೇ ಯುದ್ಧ ನಿಲ್ಲಿಸಲು ರಷ್ಯಾ & ಉಕ್ರೇನ್ ಅಧಿಕಾರಿಗಳು ಹಾಗೂ ನಾಯಕರು ಚರ್ಚೆ ನಡೆಸುತ್ತಿದ್ದಾರೆ. ಹೀಗೆ ಒಂದು ಕಡೆ ಶಾಂತಿ ಮಾತುಕತೆ ನಡೆಯುವಾಗಲೇ ಇನ್ನೊಂದು ಕಡೆ ಯುದ್ಧದ ಹಿಂಸೆ ಕೂಡ ಮುಂದುವರಿದಿದೆ. ಈ ಬಗ್ಗೆ ಜಾಗತಿಕ ಮಟ್ಟದಲ್ಲೂ ಆಕ್ರೋಶ ಈಗ ಮೊಳಗಿದೆ.

ಉಕ್ರೇನ್ ಸ್ಥಿತಿ ಮತ್ತಷ್ಟು ಹೀನಾಯ...
ಕಳೆದ 3 ವರ್ಷಗಳಿಂದ ಉಕ್ರೇನ್ ನೆಲ ರಷ್ಯಾ ದಾಳಿಯ ಪರಿಣಾಮ ನಲುಗಿ ಹೋಗಿದೆ, ಈ ಮೂಲಕ ಅನ್ನ & ನೀರಿಗೂ ಅಲ್ಲಿನ ಜನರು ಪರದಾಡುತ್ತಿದ್ದಾರೆ. ಇಷ್ಟಾದರೂ ಯುದ್ಧವನ್ನ ನಿಲ್ಲಿಸುವ ಪ್ರಯತ್ನ ಆಗಿರಲಿಲ್ಲ. ಆದರೆ ಈಗ ಒಂದಷ್ಟು ಗಂಭೀರ ಮಾತುಕತೆ ಆರಂಭವಾಗಿ ಚರ್ಚೆ ನಡೆಯುತ್ತಿದೆ, ಇಂತಹ ಸಮಯದಲ್ಲೂ ದಾಳಿ ಮುಂದುವರಿದು ಚಿಂತೆ ಹೆಚ್ಚಿಸುತ್ತಿದೆ. ಈಗಾಗಲೇ ಈ ಭೀಕರ ಯುದ್ಧದಲ್ಲಿ ಲಕ್ಷಾಂತರ ಜನ ಬಲಿಯಾಗಿರುವ ಆರೋಪ ಮಾಡಿರುವ ಜಾಗತಿಕ ಸಂಸ್ಥೆಗಳು ವಿನಾಶದ ಮುನ್ಸೂಚನೆ ನೀಡಿವೆ.
ಯಾವುದೇ ಕ್ಷಣದಲ್ಲಿ ಕದನ ವಿರಾಮ?
ಕಳೆದ 1 ತಿಂಗಳಿಂದ ನಿರಂತರವಾಗಿ ಹೀಗೆ ರಷ್ಯಾ ಮಿಲಿಟರಿ ತನ್ನ ದಾಳಿ ನಡೆಸುತ್ತಿದ್ದು, ಉಕ್ರೇನ್ ಪ್ರಜೆಗಳು ಬೆಚ್ಚಿಬಿದ್ದು ನಲುಗಿ ಹೋಗಿದ್ದಾರೆ. ಅದೇ ರೀತಿ ಉಕ್ರೇನ್ ಶಕ್ತಿ ಘಟಕಗಳ ಮೇಲೆ ಕೂಡ ಭೀಕರ ದಾಳಿ ನಡೆಸಲಾಗಿದೆ. ಈ ಮೂಲಕ ಭಾರಿ ದೊಡ್ಡ ಎಡವಟ್ಟುಗಳೇ ನಡೆದು ಹೋಗಿದ್ದು, ಹಲವರ ಜೀವ ಬಲಿಯಾಗಿದ್ದರೆ ಹತ್ತಾರು ಜನರಿಗೆ ಸಾವು & ಬದುಕಿನ ಹೋರಾಟ ಶುರುವಾಗಿದೆ. ಇನ್ನೊಂದು ಕಡೆ ಅಮೆರಿಕದ ನೇತೃತ್ವದಲ್ಲಿ ಮಾತುಕತೆ ಕೂಡ ನಡೆಯುತ್ತಿದ್ದು, ಯಾವುದೇ ಕ್ಷಣದಲ್ಲಿ ತಾತ್ಕಾಲಿಕ ಕದನ ವಿರಾಮ ಘೋಷಣೆ ಆಗುವ ನಿರೀಕ್ಷೆ ಇದೆ.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ಬೇಸಿಗೆಯ ಸುಡು ಬಿಸಿಲಿನಿಂದ ಪಾರಾಗಲು ಭೇಟಿ ನೀಡಬಹುದಾದ ಭಾರತದ 10 ಪ್ರೇಕ್ಷಣೀಯ ಸ್ಥಳಗಳು












Click it and Unblock the Notifications