ಕೊರೊನಾ ಸ್ಫೋಟ: 3 ತಿಂಗಳಲ್ಲಿ 60% ಚೀನಾಗೆ ಕೊರೊನಾ ಸೋಂಕು, ತಜ್ಞರ ವರದಿ
ಬೀಜಿಂಗ್, ಡಿ. 20: ಕೋವಿಡ್ ನಿರ್ಬಂಧಗಳನ್ನು ಸಡಿಲಿಸಿದ ನಂತರ, ಚೀನಾದಲ್ಲಿ ಕೊರೊನಾವೈರಸ್ ಪ್ರಕರಣಗಳಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಚೀನಾದಲ್ಲಿ ಆಸ್ಪತ್ರೆಗಳು ಸಂಪೂರ್ಣವಾಗಿ ತುಂಬಿಹೋಗಿವೆ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಮತ್ತು ಆರೋಗ್ಯ ಅರ್ಥಶಾಸ್ತ್ರಜ್ಞ ಎರಿಕ್ ಫೀಗಲ್ ಡಿಂಗ್ ವರದಿ ಮಾಡಿದ್ದಾರೆ.
ಮುಂದಿನ 90 ದಿನಗಳಲ್ಲಿ ಚೀನಾದ ಶೇಕಡಾ 60 ಕ್ಕಿಂತ ಹೆಚ್ಚು ಮತ್ತು ವಿಶ್ವದ ಜನಸಂಖ್ಯೆಯ 10 ಪ್ರತಿಶತದಷ್ಟು ಜನರು ಸೋಂಕಿಗೆ ಒಳಗಾಗುವ ಸಾಧ್ಯತೆಯಿದೆ. ಇದರಿಂದ ಲಕ್ಷಾಂತರ ಜನರು ಸಾವನ್ನಪ್ಪುತ್ತಾರೆ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಅಂದಾಜಿಸಿದ್ದಾರೆ.
ಚೀನಾದ ರಾಜಧಾನಿಯಲ್ಲಿ ಕೊರೊನಾ ವ್ಯಾಪಿಸಿದ್ದು, ಕೋವಿಡ್ ರೋಗಿಗಳಿಗಾಗಿ ಬೀಜಿಂಗ್ನಲ್ಲಿ ಗೊತ್ತುಪಡಿಸಲಾಗಿರುವ ಸ್ಮಶಾನವು ಇತ್ತೀಚಿನ ದಿನಗಳಲ್ಲಿ ಮೃತದೇಹಗಳಿಂದ ತುಂಬಿದೆ. ಇದು ದೇಶದಲ್ಲಿ ಕೊರೊನಾ ಸಾಂಕ್ರಾಮಿಕ ನಿರ್ಬಂಧಗಳ ಹಠಾತ್ ಸಡಿಲಗೊಳಿಸುವಿಕೆ ನಿರ್ಧಾರದ ಪರಿಣಾಮ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.

ಮೃತದೇಹಗಳಿಂದ ತುಂಬುತ್ತಿರುವ ಸ್ಮಶಾನಗಳು
ನವೆಂಬರ್ 19 ಮತ್ತು 23 ರ ನಡುವೆ ಅಧಿಕಾರಿಗಳು ನಾಲ್ಕು ಸಾವುಗಳನ್ನು ಘೋಷಿಸಿದಾಗಿನಿಂದ ಚೀನಾ ಬೀಜಿಂಗ್ನಲ್ಲಿ ಯಾವುದೇ ಕೋವಿಡ್ ಸಾವುಗಳನ್ನು ವರದಿ ಮಾಡಿಲ್ಲ.
ಚೀನಾದ ರಾಜಧಾನಿಯ ಪೂರ್ವ ಅಂಚಿನಲ್ಲಿರುವ ಬೀಜಿಂಗ್ ಡೊಂಗ್ಜಿಯಾವೊ ಸ್ಮಶಾನವು ಶವಸಂಸ್ಕಾರ ಮತ್ತು ಇತರ ಅಂತ್ಯಕ್ರಿಯೆಯ ಸೇವೆಗಳಲ್ಲಿ ಹೆಚ್ಚಳವಾಗಿರುವುದನ್ನು ಕಂಡುಕೊಂಡಿದೆ. ಅಲ್ಲಿ ಕೆಲಸ ಮಾಡುವವರನ್ನು ಉಲ್ಲೇಖಿಸಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
"ಕೊರೊನಾ ಸೋಂಕು ಪುನರಾರಂಭವಾದಾಗಿನಿಂದ, ನಮಗೆ ಕೆಲಸದಿಂದ ಬಿಡುವು ದೊರೆತಿಲ್ಲ. ದಿನದ 24 ಗಂಟೆಗಳು ಕೆಲಸ ಮಾಡುತ್ತಿದ್ದೇವೆ" ಎಂದು ಸ್ಮಶಾನದಲ್ಲಿ ಕೆಲಸ ಮಾಡುವ ಮಹಿಳೆಯೊಬ್ಬರು ಹೇಳಿದ್ದಾರೆ.

ಸ್ಮಶಾನಕ್ಕೆ ಪ್ರತಿ ದಿನ ಸುಮಾರು 200 ಮೃತ ದೇಹಗಳು
ಬೀಜಿಂಗ್ ಪುರಸಭೆಯಿಂದ ನಿರ್ವಹಿಸಲ್ಪಡುವ ಮತ್ತು ಕೋವಿಡ್ ರೋಗಿಗಳಿಗಾಗಿ ರಾಷ್ಟ್ರೀಯ ಆರೋಗ್ಯ ಆಯೋಗವು ಗೊತ್ತುಪಡಿಸಿದ ಡೊಂಗ್ಜಿಯಾವೊ ಸ್ಮಶಾನದಲ್ಲಿ ಮೃತದೇಹಗಳು ಬರುತ್ತಲೇ ಇವೆ. ಇಲ್ಲಿ ಮುಂಜಾನೆ ಮತ್ತು ಮಧ್ಯರಾತ್ರಿಯಲ್ಲಿ ಅಂತ್ಯಕ್ರಿಯೆಗಳನ್ನು ನಡೆಸಲಾಗುತ್ತಿದೆ ಎಂದು ಮಹಿಳೆ ಹೇಳಿದ್ದಾರೆ.
ಸ್ಮಶಾನಕ್ಕೆ ಪ್ರತಿ ದಿನ ಸುಮಾರು 200 ದೇಹಗಳು ಬರುತ್ತಿವೆ ಎಂದು ಅಂದಾಜಿಸಿದ್ದಾರೆ. ಒಂದು ಸಾಮಾನ್ಯ ದಿನದಲ್ಲಿ 30 ಅಥವಾ 40 ದೇಹಗಳು ಬರುತ್ತಿದ್ದವು. ಈಗ ಅದು ಹೆಚ್ಚಾಗಿದೆ. ಇನ್ನು,ಇಲ್ಲಿ ಕೆಲಸ ಮಾಡುವವರು ವೇಗವಾಗಿ ಹರಡುವ ವೈರಸ್ನಿಂದ ಸೋಂಕಿಗೆ ಒಳಗಾಗಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಶವಸಂಸ್ಕಾರದ ಸಭಾಂಗಣದ ಜೊತೆಗೆ ಉಡುಪುಗಳು, ಹೂವುಗಳು, ಪೆಟ್ಟಿಗೆಗಳು, ಚಿತಾಭಸ್ಮಗಳು ಮತ್ತು ಇತರ ಅಂತ್ಯಕ್ರಿಯೆಯ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳ ಸಣ್ಣ ಸಂಕೀರ್ಣವನ್ನು ಒಳಗೊಂಡಿರುವ ಕಾಂಪೌಂಡ್ನಲ್ಲಿ ಕೆಲಸ ಮಾಡುವವರು ಕೂಡ ಇತ್ತೀಚಿನ ದಿನಗಳಲ್ಲಿ ಶವಗಳ ಸಂಖ್ಯೆಯು ಗಮನಾರ್ಹವಾಗಿ ಏರಿದೆ ಎಂದು ಹೇಳಿದ್ದಾರೆ.

ಏಕಾಏಕಿ ಕೊರೊನಾ ನಿರ್ಬಂಧ ಸಡಿಲಗೊಳಿಸಿದ ಚೀನಾ ಸರ್ಕಾರ
ಚೀನಾದಲ್ಲಿ ಸೋಂಕು ದ್ವಿಗುಣಗೊಳ್ಳುವ ಸಮಯವನ್ನು ಬಹುಶಃ "ಗಂಟೆಗಳು" ಎಂದು ಕೆಲವು ತಜ್ಞರು ಹೇಳುತ್ತಾರೆ. ಇಷ್ಟು ವೇಗವಾಗಿ ಪರೀಕ್ಷಿಸುವುದು ಕಷ್ಟ. ಚೀನಾ ಮತ್ತು ವಿಶ್ವವು ಭಾರೀ ತೊಂದರೆಯಲ್ಲಿದೆ ಎಂದು ಫೀಗಲ್ ಡಿಂಗ್ ಆತಂಕ ವ್ಯಕ್ತಪಡಿಸಿದ್ದಾರೆ.
ಸಾಂಕ್ರಾಮಿಕ ರೋಗಶಾಸ್ತ್ರಜ್ಞರ ಪ್ರಕಾರ, ಬೀಜಿಂಗ್ನಲ್ಲಿ ಶವಸಂಸ್ಕಾರ ನಡೆಯುತ್ತಲೆ ಇದೆ. ದಿನದ 24 ಗಂಟೆಗಳು ಸ್ಮಶಾನದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಸಾಮಾನ್ಯವಾಗಿ, ಬೇರೆ ದಿನದ ಶವಗಳನ್ನು ಮಧ್ಯಾಹ್ನದ ವೇಳೆಗೆ ಸುಡಲಾಗುತ್ತದೆ. ಆದರೆ ಇತ್ತೀಚೆಗೆ ಶವಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ರಾತ್ರಿಯ ನಂತರ ಶವ ಸಂಸ್ಕಾರಗಳು ನಡೆಯುತ್ತಿವೆ.
ಈ ತಿಂಗಳ ಹಠಾತ್ ಸಾವುಗಳು, ಪ್ರಕರಣಕ್ಕೆ ಚೀನಾದ ಹಠಾತ್ ನಿರ್ಧಾರ ಕಾರಣ ಎನ್ನಲಾಗಿದೆ. ವೈರಸ್ ನಿಗ್ರಹಿಸಲು ಕಳೆದ ಮೂರು ವರ್ಷಗಳಿಂದ ತನ್ನ 'ಝೀರೋ ಕೋವಿಡ್' ವಿಧಾನವಾಗಿದ್ದ ಲಾಕ್ಡೌನ್, ಪರೀಕ್ಷೆ ಮತ್ತು ಸಂಪರ್ಕತಡೆಯನ್ನು ಕಟ್ಟುನಿಟ್ಟಾಗಿ ಒಂದೇ ಬಾರಿಗೆ ಕಿತ್ತುಹಾಕಿತು.

ದಿನಕ್ಕೆ ಸರಾಸರಿ 5,000 ರಿಂದ 30,000 ಕ್ಕೆ ಏರಿದ ಬೆಡ್ ಬೇಡಿಕೆ
ಈ ತಿಂಗಳ ಆರಂಭದಲ್ಲಿ, ಬೀಜಿಂಗ್ ಎಮರ್ಜೆನ್ಸಿ ಮೆಡಿಕಲ್ ಸೆಂಟರ್ ಆಂಬ್ಯುಲೆನ್ಸ್ಗೆ ಕರೆ ಮಾಡಲು ತೀವ್ರವಾಗಿ ಅಸ್ವಸ್ಥರಾಗಿರುವ ರೋಗಿಗಳನ್ನು ಮಾತ್ರ ಅವಕಾಶ ನೀಡಲಾಗಿದೆ. ಈ ತುರ್ತು ವಿನಂತಿ ಕರೆಗಳು ದಿನಕ್ಕೆ ಸರಾಸರಿ 5,000 ರಿಂದ 30,000 ಕ್ಕೆ ಏರಿದೆ. ಇದರಿಂದ ಸಿಬ್ಬಂದಿಗೆ ಪ್ರತಿಕ್ರಿಯಿಸುವ ಸಾಮರ್ಥ್ಯ ಕೂಡ ಇಲ್ಲದಂತಾಗಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
ರಾಷ್ಟ್ರೀಯ ಆರೋಗ್ಯ ಆಯೋಗದ ನಿಯಮಗಳ ಪ್ರಕಾರ, ಕೋವಿಡ್ ಪಾಸಿಟಿವ್ ಎಂದು ಗುರುತಿಸಲಾದ ಅಥವಾ ಕೊರೊನಾ ಸೋಂಕಿತರು ಎಂದು ಶಂಕಿಸಲಾದ ಶವಗಳನ್ನು ವಿಶೇಷವಾಗಿ ಗೊತ್ತುಪಡಿಸಿದ ವಿದ್ಯುತ್ ಚಿತಾಗಾರದಲ್ಲಿ ತಕ್ಷಣವೇ ಶವಸಂಸ್ಕಾರ ಮಾಡಬೇಕು. ಆದರೆ, ಸೀಮಿತ ಮಾನ್ಯತೆ, ಕಡಿಮೆ ವ್ಯಾಕ್ಸಿನೇಷನ್ ದರಗಳು ಮತ್ತು ತುರ್ತು ಆರೈಕೆಯಲ್ಲಿ ಕಳಪೆ ಹೂಡಿಕೆಯಿಂದಾಗಿ ಚೀನಾದ 1.4 ಶತಕೋಟಿ ಜನರು ವೈರಸ್ಗೆ ಗುರಿಯಾಗುತ್ತಾರೆ ಎಂದು ವರದಿಯಾಗಿದೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications