ಅದೃಷ್ಟ ಅಂದರೆ ಇದೆ: ಎರಡು ನಿಮಿಷ ತಡವಾಗಿದ್ದಕ್ಕೆ ಜೀವ ಉಳಿಯಿತು!
ಅಥೆನ್ಸ್, ಮಾರ್ಚ್ 11: ಯಾವುದೇ ಕೆಲಸಕ್ಕೆ ಆಗಲಿ, ಸ್ಥಳಕ್ಕೆ ಆಗಲಿ ತಡವಾಗಿ ಹೋಗುವುದು ಅಶಿಸ್ತು ಎನಿಸಿಕೊಳ್ಳುತ್ತದೆ. ತಡವಾಗಿ ಹೋಗುವುದರಿಂದ ಅವಕಾಶಗಳು ಕಳೆದುಕೊಳ್ಳಬೇಕಾಗುತ್ತದೆ. ಆದರೆ ಇಲ್ಲೊಬ್ಬ ವ್ಯಕ್ತಿ ತಡವಾಗಿ ಹೋಗಿದ್ದರಿಂದಲೇ ಇಂದು ಆತ ಜೀವಂತವಾಗಿದ್ದಾನೆ.
ಅಂಟೋನಿಸ್ ಮಾರ್ವೋಪೋಲೋ ಎಂಬ ವ್ಯಕ್ತಿ ನೈರೋಬಿಗೆ ಹೋಗಲೆಂದು ಮಾರ್ಚ್ 10ಕ್ಕೆ ವಿಮಾನ ಟಿಕೆಟ್ ಕಾಯ್ದಿರಿಸಿದ್ದರು. ವಿಮಾನ ಏರಲು ನಿಲ್ದಾಣಕ್ಕೆ ಬಂದರು ಆದರೆ ಎರಡು ನಿಮಿಷ ತಡವಾಗಿ. ಇದೇ ಇಂದು ಅವರ ಜೀವವನ್ನು ಉಳಿಸಿದೆ. ಅವರು ಹತ್ತಬೇಕಿದ್ದ ವಿಮಾನ ಪತನವಾಗಿ ಎಲ್ಲ ಪ್ರಯಾಣಿಕರು ಅಸುನೀಗಿದ್ದಾರೆ.
ಇಟಿ-302 ವಿಮಾನ ನಿನ್ನೆ ಅಡಿಸ್ ಅಬಾಬಾದಿಂದ ನೈರೋಬಿಗೆ ಹೊರಟಿತ್ತು. ವಿಮಾನ ನಿಲ್ದಾಣ ಬಿಟ್ಟ ಕೇವಲ 6 ನಿಮಿಷದಲ್ಲಿ ಅದು ವಿಮಾನ ನಿಲ್ದಾಣದೊಂದಿಗೆ ಸಂಪರ್ಕ ಕಡಿದುಕೊಂಡಿತು. ಆ ನಂತರ ಅದು ಪತನಗೊಂಡಿತು. 149 ಮಂದಿ ಪ್ರಯಾಣಿಕರು ಹಾಗೂ 8 ಸಿಬ್ಬಂದಿ ವಿಮಾನದಲ್ಲಿದ್ದರು. ಎಲ್ಲರೂ ಅಪಘಾತದಲ್ಲಿ ಮೃತಟ್ಟಿದ್ದಾರೆ.

ವಿಮಾನದ 150ನೇ ಪ್ರಯಾಣಿಕ ಅಂಟೋನಿಸ್ ಮಾರ್ವೋಪೋಲೋ ಆಗಿದ್ದರು ಆದರೆ ಅವರು ಕೇವಲ ಎರಡು ನಿಮಿಷ ತಡವಾಗಿ ಬಂದ ಕಾರಣ ಅವರು ವಿಮಾನ ಏರಲಾಗಲಿಲ್ಲ. ಈ ಬಗ್ಗೆ ಫೇಸ್ಬುಕ್ನಲ್ಲಿ ಬರೆದುಕೊಂಡಿರುವ ಅವರು, ಭದ್ರತಾ ತಪಾಸಣೆ ತಡವಾಯಿತು ಹಾಗಾಗಿ ನಾನು ವಿಮಾನ ಏರಲು ಆಗಲಿಲ್ಲ. ಆಗ ನಾನು ತಪಾಸಣೆ ಮಾಡುತ್ತಿದ್ದವರು ಮೇಲೆ ಕಿರುಚಾಡಿದೆ. ಆದರೆ ವಿಮಾನಕ್ಕೆ ಆದ ಗತಿ ಗೊತ್ತಾದ ಬಳಿಕ ನನಗೆ ನೆಲವೇ ಕುಸಿದ ಅನುಭವವಾಯಿತು ಎಂದಿದ್ದಾರೆ.

ಫೇಸ್ಬುಕ್ನಲ್ಲಿ ತಾವು ಖರೀದಿಸಿದ್ದ ಟಿಕೆಟ್ ನ ಚಿತ್ರ ಹಾಕಿರುವ ಅವರು ಇದು ನನ್ನ ಅತ್ಯಂತ ಅದೃಷ್ಟದ ದಿನ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ವಿಮಾನ ಅಪಘಾತದಲ್ಲಿ ಮೃತಪಟ್ಟವರೆಲ್ಲರಿಗೂ ಸಂತಾಪ ಸೂಚಿಸಿದ್ದಾರೆ.
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ











Click it and Unblock the Notifications