ವೈಮಾನಿಕ ಪ್ರದರ್ಶನದಲ್ಲಿ ಮಿಲಿಟರಿ ವಿಮಾನಗಳ ಡಿಕ್ಕಿ: 6 ಮಂದಿ ಸಾವು
ನ್ಯೂಯಾರ್ಕ್, ನವೆಂಬರ್ 13: ಅಮೆರಿಕದ ಟೆಕ್ಸಾಸ್ನ ಡಲ್ಲಾಸ್ನಲ್ಲಿ ನಡೆದ ವೈಮಾನಿಕ ಪ್ರದರ್ಶನದ ವೇಳೆ ಬಿ 17 ಹೆವಿ ಬಾಂಬರ್ ಮಿಲಿಟರಿ ವಿಮಾನವು ಮತ್ತೊಂದು ವಿಮಾನಕ್ಕೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿದ್ದು, ಆರು ಜನರು ಸಾವನ್ನಪ್ಪಿದ್ದಾರೆ.
ಅಮೆರಿಕದ ಪ್ರೀಮಿಯರ್ ವರ್ಲ್ಡ್ ವಾರ್ 2 ಏರ್ಶೋ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದೆ. 40ಕ್ಕೂ ಹೆಚ್ಚು ಅತಿಥಿಗಳು ಎರಡನೇ ವಿಶ್ವ ಯುದ್ಧದ ಏರ್ ಶೋ ವಿಮಾನಗಳನ್ನು ನೋಡಬೇಕಿತ್ತು ಎಂದು ಏರ್ ಫೋರ್ಸ್ನ ವಕ್ತಾರರಾದ ಲೇಹ್ ಬ್ಲಾಕ್ ಹೇಳಿದ್ದಾರೆ.
ಸ್ಥಳದಲ್ಲಿದ್ದ ಜನರು ಹೇಳುವಂತೆ ದೊಡ್ಡ ಬಿ 17 ಬಾಂಬರ್ ವಿಮಾನವು ನೆಲದಿಂದ ತುಂಬಾ ಎತ್ತರವಾಗಿರದೆ ಸರಳ ರೇಖೆಯಲ್ಲಿ ಹಾರುತ್ತಿತ್ತು. ಆದರೆ ಚಿಕ್ಕ ವಿಮಾನ ಬೆಲ್ ಪಿ 63 ಕಿಂಗ್ಕೋಬ್ರಾ ವಿಮಾನವು ಎಡದಿಂದ ತನ್ನ ದಿಕ್ಕಿನಲ್ಲಿ ಚಲಿಸಿತು. ಚಿಕ್ಕ ವಿಮಾನವು ಎರಡನೇ ವಿಶ್ವ ಸಮರ ಯುಗದ ವಿಮಾನವಾದ ಬಿ 17ನ ಮೇಲೆ ಅಪ್ಪಳಿಸಿತು. ಆಗ ತಕ್ಷಣವೇ ಎರಡು ವಿಮಾನಗಳು ಡಿಕ್ಕಿ ಹೊಡೆದವು ಎಂದು ತಿಳಿಸಿದ್ದಾರೆ.

ವಿಮಾನಗಳು ಡಿಕ್ಕಿಯಾಗುವ ದೃಶ್ಯಗಳು ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ವಿಮಾನಗಳು ಡಿಕ್ಕಿಯಾಗಿ ಕೆಳಗೆ ಬೀಳುವ ಮೊದಲು ದೊಡ್ಡ ಬೆಂಕಿ ಮತ್ತು ಕಪ್ಪು ಹೊಗೆ ಕಂಡು ಬಂದಿದೆ.
ಮೇಯರ್ ಜಾನ್ಸನ್ ಟ್ವೀಟ್ ಮಾಡಿ, ನಿಮ್ಮಲ್ಲಿ ಅನೇಕರು ಈಗ ನೋಡುತ್ತಿರುವಂತೆ ಇಂದು ನಮ್ಮ ವೈಮಾನಿಕ ಪ್ರದರ್ಶನದ ಸಮಯದಲ್ಲಿ ಭೀಕರ ದುರಂತ ನಡೆದಿದೆ. ಈ ಸಮಯದಲ್ಲಿ ಹೆಚ್ಚಿನ ವಿವರಗಳು ತಿಳಿಯಲಿಲ್ಲ. ಇದರ ಬಗ್ಗೆ ಇನ್ನಷ್ಟು ಮಾಹಿತಿಗಳು ತನಿಖೆಯ ನಂತರ ಗೊತ್ತಾಗಬೇಕಿದೆ ಎಂದು ಬರೆದಿದ್ದಾರೆ.
ಬೋಯಿಂಗ್ ಬಿ 17 ಮತ್ತು ಬೆಲ್ ಪಿ 63 ನಡುವೆ ನಡೆದ ಘರ್ಷಣೆಯನ್ನು ತನಿಖೆ ಮಾಡಲು ಎನ್ಟಿಎಸ್ಬಿ ತಂಡವನ್ನು ಪ್ರಾರಂಭಿಸುತ್ತಿದೆ. ಸದಸ್ಯ ಮೈಕೆಲ್ ಗ್ರಹಾಂ ದೃಶ್ಯದಲ್ಲಿ ವಕ್ತಾರರಾಗಿ ಕಾರ್ಯನಿರ್ವಹಿಸಲಿದ್ದಾರೆ. ತಂಡ ನಾಳೆ ಬರುವ ನಿರೀಕ್ಷೆಯಿದೆ. ನವೀಕರಣಗಳಿಗಾಗಿ ಎನ್ಟಿಎಸ್ಬಿ ಟ್ವಿಟ್ಟರ್ ಖಾತೆಯನ್ನು ಪರಿಶೀಲಿಸಿ ಎಂದು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ (ಎನ್ಟಿಎಸ್ಬಿ) ನ್ಯೂಸ್ರೂಮ್ ಟ್ವೀಟ್ ಮಾಡಿದೆ.

ಬಿ 17 ಯುದ್ಧ ವಿಮಾನವು ದೊಡ್ಡದಾದ ನಾಲ್ಕು ಎಂಜಿನ್ ಬಾಂಬರ್ ವಿಮಾನವಾಗಿದೆ. ಎರಡನೇ ವಿಶ್ವ ಸಮರದ ಸಮಯದಲ್ಲಿ ಅಮೆರಿಕ ವಾಯು ಶಕ್ತಿಯ ಮೂಲಾಧಾರವಾಗಿತ್ತು ಎಂದು ಯುಎಸ್ ಮಾಧ್ಯಮ ವರದಿಗಳು ಹೇಳಿವೆ. ಬಹುಪಾಲು ಬಿ 17ಗಳು ಎರಡನೇ ವಿಶ್ವ ಸಮರದ ಕೊನೆಯಲ್ಲಿ ಗುಜರಿಗೆ ಹಾಕಲ್ಪಟ್ಟವು. ಈಗ ಬೆರಳೆಣಿಕೆಯಷ್ಟು ಮಾತ್ರ ಉಳಿದಿವೆ.
— Giancarlo (@GianKaizen) November 12, 2022
-
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ












Click it and Unblock the Notifications