ಒಂದೇ ಬಾವಿಯಲ್ಲಿ ತುಂಡು-ತುಂಡಾದ 44 ಮೃತದೇಹ ಪತ್ತೆ
ಮೆಕ್ಸಿಕೋ, ಸೆಪ್ಟೆಂಬರ್ 17: ಒಂದೇ ಬಾವಿಯಲ್ಲಿ ಬರೋಬ್ಬರಿ 44 ಮೃತದೇಹಗಳು ಹಲವು ತುಂಡುಗಳಾಗಿ ಪತ್ತೆ ಆಗಿದ್ದು, ಮೆಕ್ಸಿಕೊ ಸಮೀಪ ನಡೆದಿರುವ ಈ ಘಟನೆ ತಲ್ಲಣ ಮೂಡಿಸಿದೆ.
ಮೆಕ್ಸಿಕೋದ ಉತ್ತರ ಭಾಗದಲ್ಲಿನ ಜಾಲಿಸ್ಕೋ ಎಂಬಲ್ಲಿ ಬಾವಿಯೊಂದರಲ್ಲಿ ಬರೋಬ್ಬರಿ 44 ಮೃತದೇಹಗಳು, 119 ಪ್ಲಾಸ್ಟಿಕ್ ಬ್ಯಾಗ್ಗಳಲ್ಲಿ ತುಂಡುಗಳಾಗಿ ಪತ್ತೆಯಾಗಿದೆ. ಜಾಲಿಸ್ಕೊ ಪ್ರದೇಶವು ಮೆಕ್ಸಿಕೋದ ಅತ್ಯಂತ ಹಿಂಸಾತ್ಮಕ ಪ್ರದೇಶ ಎಂದು ಹೆಸರಾಗಿದೆ.
ಮೃತದೇಹಗಳ ಗುರುತು ಪತ್ತೆ ಕಾರ್ಯ ನಡೆಯುತ್ತಿದ್ದು, ಡಿಎನ್ಎ ಮತ್ತು ಹಲ್ಲುಗಳ ಮೂಲಕ ಗುರುತು ಪತ್ತೆ ಹಚ್ಚುವ ಕಾರ್ಯವನ್ನು ತಜ್ಞರು ಮಾಡುತ್ತಿದ್ದಾರೆ. ಕಾಣೆಯಾದ ಬಗ್ಗೆ ನೀಡಲಾಗಿರುವ ದೂರುಗಳನ್ನು ಪರಿಶೀಲಿಸಲಾಗುತ್ತದೆ. ಅತ್ಯಂತ ಹಿಂಸೆ ನಡೆಯುವ ಪ್ರದೇಶ ಇದಾದ್ದರಿಂದ ಮಾಹಿತಿ ಗೊತ್ತಿದ್ದವರೂ ಸಹ ಮುಂದೆ ಬಂದು ಮಾಹಿತಿ ಹಂಚಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.

ಮೆಕ್ಸಿಕೋ ದಲ್ಲಿ ಮಾದಕ ದ್ರವ್ಯದ ವ್ಯವಹಾರ ಅತ್ಯಂತ ಉಚ್ರಾಯದಲ್ಲಿದೆ, ಮಾದಕ ದ್ರವ್ಯದ ವ್ಯವಹಾರದಿಂದಾಗಿ ಇಲ್ಲಿ ಹಿಂಸೆ ಅತ್ಯಂತ ಸಾಮಾನ್ಯ. ಮಾದಕ ದ್ರವ್ಯ ವ್ಯವಹಾರ ಸಂಭಾಳಿಸುವ ಗುಂಪುಗಳ ನಡುವೆ ಆಗಾಗ್ಗೆ ಘರ್ಷಣೆಗಳು ಆಗುತ್ತಲೇ ಇರುತ್ತವೆ, ಹಲವರು ಪ್ರಾಣ ಕಳೆದುಕೊಳ್ಳುತ್ತಲೇ ಇರುತ್ತಾರೆ. ಈಗ ಸಿಕ್ಕಿರುವ ದೇಹಗಳೂ ಸಹ ಮಾದಕ ದ್ರವ್ಯ ಮಾಫಿಯಾ ಗಲಾಟೆಗೆ ಸಂಬಂಧಿಸಿದ್ದವೇ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ ಪೊಲೀಸರು.
ಈ ಮೃತದೇಹಗಳನ್ನು ಸೆಪ್ಟೆಂಬರ್ 3 ರಂದೇ ಪತ್ತೆ ಮಾಡಲಾಗದೆ. ಆದರೆ ಗುರುತು ಪತ್ತೆ ಕಾರ್ಯ ಇನ್ನೂ ಮುಗಿದಿಲ್ಲ. ಮೆಕ್ಸಿಕೋದಲ್ಲಿ ಹಿಂಸಾಚಾರ ಸಾಮಾನ್ಯ ಎಂಬಂತಾಗಿದ್ದು, ಡ್ರಗ್ ಮಾಫಿಯಾದಿಂದಾಗಿ 40,000 ಕ್ಕೂ ಹೆಚ್ಚು ಜನ ಶಾಶ್ವತವಾಗಿ ನಾಪತ್ತೆಯಾಗಿದ್ದಾರೆ.
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications