ಲಕ್ಷಾಂತರ ಡಾಲರ್ ವಂಚನೆ: ಅಮೆರಿಕದಲ್ಲಿ 21 ಭಾರತೀಯರಿಗೆ ಜೈಲು ಶಿಕ್ಷೆ
ನ್ಯೂಯಾರ್ಕ್, ಜುಲೈ 21: ಅಮೆರಿಕದ ಸಾವಿರಾರು ನಾಗರಿಕರಿಗೆ ಲಕ್ಷಾಂತರ ಡಾಲರ್ ಪಂಗನಾಮ ಹಾಕಿದ ಭಾರತ ಮೂಲದ 21 ಆರೋಪಿಗಳಿಗೆ 4ರಿಂದ 20 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗಿದೆ.
ಈ 21 ಮಂದಿಯಲ್ಲಿ ಕೆಲವರು ತಮ್ಮ ಶಿಕ್ಷೆಯ ಅವಧಿ ಪೂರ್ಣಗೊಂಡ ಬಳಿಕ ಭಾರತಕ್ಕೆ ಗಡಿಪಾರಾಗಲಿದ್ದಾರೆ.
ಅಮೆರಿಕದ ಅತಿ ದೊಡ್ಡ ಕಾಲ್ ಸೆಂಟರ್ ಹಗರಣ ಇದಾಗಿದ್ದು, ಭಾರತದ ಮೂಲದ ವ್ಯಕ್ತಿಗಳು ಅಮೆರಿಕದ ಸಾವಿರಾರು ಜನರಿಗೆ ಲಕ್ಷಾಂತರ ಡಾಲರ್ ಹಣ ವಂಚಿಸಿದ್ದಾರೆ.
ವಿವಿಧ ದೂರವಾಣಿ ಸಂಪರ್ಕಗಳನ್ನು ಬಳಸಿಕೊಂಡು ಸುಳ್ಳು ಯೋಜನೆಗಳ ಹೆಸರಿನಲ್ಲಿ ಭಾರತದ ಕಾಲ್ ಸೆಂಟರ್ಗಳು ಅಮೆರಿಕದ ಹಿರಿಯರು ಹಾಗೂ ಕಾನೂನುಬದ್ಧ ವಲಸಿಗರು ಸೇರಿದಂತೆ ನೂರಾರು ಮಂದಿಗೆ ವಂಚಿಸಿವೆ.

2012-2016ರ ಅವಧಿಯಲ್ಲಿ ಅಹ್ಮದಾಬಾದ್ನಲ್ಲಿ ಇರುವ ಕಾಲ್ ಸೆಂಟರ್ನಿಂದ ಕರೆ ಮಾಡುತ್ತಿದ್ದ ವ್ಯಕ್ತಿಗಳು ಜನರಿಂದ ಹಣ ವರ್ಗಾಯಿಸಿಕೊಂಡು ಅವರನ್ನು ವಂಚಿಸುತ್ತಿದ್ದರು.
ಅಮೆರಿಕದಾದ್ಯಂತ ಜನರನ್ನು ವಂಚಿಸಲು ಆಂತರಿಕ ಕಂದಾಯ ಸೇವೆ ಅಥವಾ ಅಮೆರಿಕ ನಾಗರಿಕತ್ವ ಮತ್ತು ವಲಸೆ ಸೇವೆಯ ಅಧಿಕಾರಿಗಳ ಸೋಗಿನಲ್ಲಿ ಕರೆಮಾಡುತ್ತಿದ್ದರು.
ಡಾಟಾ ಬ್ರೋಕರ್ಗಳು ಮತ್ತು ಇತರೆ ಮೂಲಗಳಿಂದ ಅಮೆರಿಕದ ಜನರ ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದ ವಂಚಕರು, ಸರ್ಕಾರಕ್ಕೆ ಸಿಗಬೇಕಾದ ಹಣ ನೀಡದಿದ್ದರೆ ಬಂಧನ, ಜೈಲು ಶಿಕ್ಷೆ, ದಂಡ ಅಥವಾ ಗಡಿಪಾರಿಗೆ ಒಳಗಾಗಬೇಕಾಗುತ್ತದೆ ಎಂದು ಬೆದರಿಸುತ್ತಿದ್ದರು.
ಇದರಿಂದ ಭಯಗೊಳ್ಳುತ್ತಿದ್ದ ಜನರು ಸ್ಟೋರ್ಡ್ ವ್ಯಾಲ್ಯೂ ಕಾರ್ಡ್ ಸೇರಿದಂತೆ ವಂಚಕರು ಸೂಚಿಸಿದ ರೀತಿಯಲ್ಲಿ ಹಣವನ್ನು ಪಾವತಿ ಮಾಡುತ್ತಿದ್ದರು.
ಇವರಲ್ಲದೆ ಭಾರತ ಮೂಲದ ಇನ್ನೂ 32 ವ್ಯಕ್ತಿಗಳು ಹಾಗೂ ಐದು ಕಾಲ್ ಸೆಂಟರ್ಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇದಕ್ಕೂ ಮೊದಲು ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ಭಾಗಿಯಾದ ಮೂವರನ್ನು ಶಿಕ್ಷೆ ಗುರಿಪಡಿಸಲಾಗಿತ್ತು.
-
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
Viral Video: ಲಂಡನ್ ರಸ್ತೆಯಲ್ಲಿ ರಾರಾಜಿಸಿದ ಭಾರತದ ಆಟೋ ರಿಕ್ಷಾ: ವಿಡಿಯೋ ನೋಡಿ ದೆಹಲಿ ಎಂದ ನೆಟ್ಟಿಗರು -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ












Click it and Unblock the Notifications