ಯೋಗಿ ಆದಿತ್ಯನಾಥ್ ಅವರಿಗೆ ಮೋದಿ ಕೊಟ್ಟ 12 ಸಲಹೆಗಳು
ಉತ್ತರ ಪ್ರದೇಶದಲ್ಲಿ ನೂತನವಾಗಿ ಸರ್ಕಾರ ರಚನೆಗೆ ಮುಂದಾದ ಯೋಗಿ ಆದಿತ್ಯನಾಥ್ ಅವರಿಗೆ ಪ್ರಧಾನಿ 12 ಸಲಹೆಗಳನ್ನು ಕೊಟ್ಟಿದ್ದಾರೆ. ಆ ಹನ್ನೆರಡು ಸಲಹೆಗಳನ್ನೇ ಯೋಗಿ ಅವರು, ಅಧಿಕಾರ ಸ್ವೀಕರಿಸಿದ ಕ್ಷಣದಿಂದಲೇ ಜಾರಿಗೊಳಿಸಿದ್ದಾರೆ.
ನವದೆಹಲಿ, ಮಾರ್ಚ್ 21: ಉತ್ತರ ಪ್ರದೇಶವೆಂದರೆ ಅದು ಕಾನೂನು ಸುವ್ಯವಸ್ಥೆ ಹದಗೆಟ್ಟ ನಾಡು, ಮಹಿಳೆಯರಿಗೆ, ಅಬಲೆಯರಿಗೆ ಸುರಕ್ಷಣೆಯಿಲ್ಲದ ನಾಡು ಎಂಬಿತ್ಯಾದಿ ಟ್ಯಾಗ್ ಗಳನ್ನು ಹಾಕಿಕೊಂಡಿರುವ ಉತ್ತರ ಪ್ರದೇಶದಲ್ಲಿ ನೂತನವಾಗಿ ಸರ್ಕಾರ ರಚನೆಗೆ ಮುಂದಾದ ಯೋಗಿ ಆದಿತ್ಯನಾಥ್ ಅವರಿಗೆ ಪ್ರಧಾನಿ 12 ಸಲಹೆಗಳನ್ನು ಕೊಟ್ಟಿದ್ದಾರೆ.
ಆ ಹನ್ನೆರಡು ಸಲಹೆಗಳನ್ನೇ ಯೋಗಿ ಅವರು, ಅಧಿಕಾರ ಸ್ವೀಕರಿಸಿದ ಕ್ಷಣದಿಂದಲೇ ಜಾರಿಗೊಳ್ಳುವಲ್ಲಿ ಆದಿತ್ಯನಾಥ್ ಅವರು ಕಾಳಜಿ ತೋರಿದ್ದು, ಇದೇ ಈಗ ಉತ್ತರ ಪ್ರದೇಶದಲ್ಲಿ ಎಲ್ಲರೂ ಹುಬ್ಬೇರಿಸುವ ರೀತಿಯಲ್ಲಿ ಕ್ಷಿಪ್ರಗತಿಯಲ್ಲಿ ಬದಲಾವಣೆಗಳಾಗುತ್ತಿವೆ.[ರಾಮಮಂದಿರ ನಿರ್ಮಾಣ: ಸಿಎಂ ಯೋಗಿ ಕೈಲಿದೆ 'ಪವರ್' ಅಸ್ತ್ರ]
ಯೋಗಿ ಅಧಿಕಾರ ಸ್ವೀಕರಿಸಿದ ಮರುದಿನವೇ ಸರ್ಕಾರಿ ಅಧಿಕಾರಿಗಳಿಗೆ ತಮ್ಮ ಆಸ್ತಿ ವಿವರ ಘೋಷಿಸುವಂತೆ ಮುಖ್ಯಮಂತ್ರಿ ಕಚೇರಿಯಿಂದ ಹುಕುಂ ಹೋಗಿದೆ. ಅನಧಿಕೃತ ಕಸಾಯಿ ಖಾನೆಗಳಿಗೆ ಬೀಗ ಬಿದ್ದಿದೆ. ಇನ್ನು, ಯುಪಿಯ ಸರ್ಕಾರಿ ಕಚೇರಿಗಳಿಂದ ಪಾನ್ ಮಸಾಲಾ, ಗುಟ್ಕಾಗಳನ್ನು ನಿಷೇಧಿಸಲಾಗಿದೆ.
ಗೋರಖ್ ಪುರ ಹಾಗೂ ಸುತ್ತಲಿನ ಪ್ರಾಂತ್ಯಗಳಲ್ಲಿರುವ ಗೋ ಮಾಂಸ ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸಲಾಗಿದೆ. ಇದೆಲ್ಲದರ ಜತೆಗೆ, ಅತೀ ಅವಶ್ಯವಾದ ಮತ್ತೊಂದು ಕಾರ್ಯಾಚರಣೆಯೂ ಆಗಿದೆ. ಅದೇನೆಂದರೆ, ಉತ್ತರ ಪ್ರದೇಶದ ಹೆಣ್ಣು ಮಕ್ಕಳಿಗೆ ಕಂಟಕರಾಗಿದ್ದ ಬೀದಿ ಕಾಮಣ್ಣರನ್ನು ಬೆಂಡೆತ್ತುವ ಕಾರ್ಯಾಚರಣೆ.
ಹೌದು. ಮಾನವಂತ ಮನೆತನದ ಹೆಂಗಳೆಯರು, ಯುವತಿಯರು ರಸ್ತೆಯಲ್ಲಿ ಅಡ್ಡಾಡುವುದೇ ಕಷ್ಟಕರ ಎನ್ನುವಂತಿದ್ದ ಪರಿಸ್ಥಿತಿಯನ್ನು ಹತೋಟಿಗೆ ತರಲು ಈ ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ.[ಇವರೇ ಕಣ್ರಿ.. ಯೋಗಿ ಹೆಸರನ್ನು ಅಮಿತ್ ಶಾ, ಮೋದಿಗೆ ಸಜೆಸ್ಟ್ ಮಾಡಿದ್ದು!]
ಈ ಎಲ್ಲವನ್ನೂ ಮುಖ್ಯಮಂತ್ರಿಯವರು ಅಧಿಕಾರ ಕೈಯ್ಯಲ್ಲಿ ಹಿಡಿಯುತ್ತಲೇ ಏಕೆ ಆರಂಭಿಸಿದರು ಎನ್ನುವುದಕ್ಕೆ ಉತ್ತರ ಇಲ್ಲಿದೆ. ಅಧಿಕಾರ ಸ್ವೀಕರಿಸಿದ ಒಂದು ತಿಂಗಳಲ್ಲೇ ಉತ್ತರ ಪ್ರದೇಶದ ಪೀಡೆಯನ್ನು ಸಾಧ್ಯವಾದಷ್ಟೂ ಗುಡಿಸಿ ಸ್ವಚ್ಛ ಮಾಡಬೇಕು ಎಂದು ಖುದ್ದು ಮೋದಿಯವರೇ ಆದಿತ್ಯನಾಥ ಅವರಿಗೆ ಹೇಳಿದ್ದಾರೆ.
ಹಾಗಾಗಿಯೇ, ಮೋದಿ ಹೇಳಿರುವ 12 ಅಂಶಗಳನ್ನೇ ಅನುಷ್ಠಾನಗೊಳಿಸಲು ಟೊಂಕ ಕಟ್ಟಿನಿಂತಿದ್ದಾರೆ ಯೋಗಿ ಆದಿತ್ಯನಾಥ. ಹಾಗಾಗಿ, ಉತ್ತರ ಪ್ರದೇಶವನ್ನು ಅವರು ಹೇಗೆ ಸ್ವಚ್ಛ ಮಾಡುತ್ತಾರೆಂದು ಇಡೀ ಭಾರತವೇ ಅವರತ್ತ ಕುತೂಹಲದಿಂದ ನೋಡುವಂತಾಗಿದೆ.
ಈಗಾಗಾಗಲೇ, ಉತ್ತರ ಪ್ರದೇಶದ ಜಿಲ್ಲಾ ಮಟ್ಟದಲ್ಲಿರುವ ಎಲ್ಲಾ ಪೊಲೀಸ್ ಕಚೇರಿಗಳಿಗೂ ಫ್ಯಾಕ್ಸ್ ಮೂಲಕ ಮೋದಿ ತಿಳಿಸಿದ 12 ಅಂಶಗಳ ಗುರಿಯನ್ನೇ ಸಾಧಿಸಿ ತೋರುವಂತೆ ತಾಕೀತು ಮಾಡಲಾಗಿದೆ.
ಯೋಗಿಯವರಿಗೆ ಮೋದಿ ನೀಡಿರುವ ಹನ್ನೆರಡು ಸೂತ್ರಗಳ ಪಟ್ಟಿ ಇಲ್ಲಿದೆ:

ಗೂಂಡಾ ಕಾಯ್ದೆ ಹೇರಿಕೆ
- ಕಿಡ್ನಾಪ್, ಕಳ್ಳತನ, ಕೊಲೆ, ದರೋಡೆ ಮುಂತಾದ ಕೃತ್ಯಗಳಲ್ಲಿ ಭಾಗಿಯಾಗಿರುತ್ತಾರೋ, ಅವರೆಲ್ಲರ ಮೇಲೆ ಮುಲಾಜಿಲ್ಲದೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು.
- ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುವ ವ್ಯಕ್ತಿಗಳ ಮೇಲೂ ಗೂಂಡಾ ಕಾಯ್ದೆ ಹೇರಿಕೆ.

ಯೋಜನೆಗಳ ಅನುಷ್ಠಾನಕ್ಕೆ ಕ್ರಮ
- ಕಸಾಯಿ ಖಾನೆಗಳಿಗೆ ಬೀಗ ಜಡಿಯುವುದು. ಅದರಲ್ಲೂ ಗೋ ಮಾಂಸ ಮಾರಾಟಕ್ಕೆ ಸಂಪೂರ್ಣ ನಿಷೇಧ.
- ಸ್ವಚ್ಛ ಭಾರತ, ಪ್ರಜ್ವಲ್ ಸೇರಿದಂತೆ ಮೋದಿಯವರು ಜಾರಿಗೊಳಿಸಿರುವ ಎಲ್ಲಾ ಯೋಜನೆ, ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನಕ್ಕೆ ಕ್ರಮ[ಉ.ಪ್ರ: ಗೋಮಾಂಸ ಮಾರಾಟ ಅಂಗಡಿಗಳ ಮೇಲೆ ಪೊಲೀಸರ ದಾಳಿ]

ರೈತರಿಗೆ ವಿಮೆ
- ಉನ್ನತ ಹುದ್ದೆಗಳಿಗೆ ನಿಷ್ಠಾವಂತ ಹಾಗೂ ದಕ್ಷ ಅಧಿಕಾರಿಗಳನ್ನು ನೇಮಿಸುವುದು.
- ರೈತರಿಗಾಗಿ ವಿಶೇಷ ಬೆಳೆ ವಿಮೆ ಯೋಜನೆ; ಕಳೆದ ವರ್ಷ ಅಧಿಕಾರದಲ್ಲಿದ್ದ ಸಮಾಜವಾದಿ ಪಕ್ಷವು ರೈತರ ವಿಮೆ ಯೋಜನೆಗೆ ಬ್ರೇಕ್ ಹಾಕಿತ್ತು. ಈಗ, ಪುನಃ ಅದು ಅನುಷ್ಠಾನಕ್ಕೆ.

ರೈತರಿಗೆ ಮತ್ತಷ್ಟು ಅನುಕೂಲ
- ಕೇಂದ್ರದಿಂದ ಬಿಡುಗಡೆಯಾಗುವ ಎಲ್ಲಾ ನಿಧಿಗಳೂ ಆಯಾ ಇಲಾಖೆಗೆ ನಿರ್ದಿಷ್ಟವಾಗಿ ಬಳಕೆ.
- ರೈತರಿಗೆ ಅನುಕೂಲಕವಾದ ವಾತಾವರಣ, ಕೃಷಿ ಸಾಲ ಮನ್ನಾ ಸೇರಿದಂತೆ ಹಲವಾರು ಸೌಲಭ್ಯಗಳು[ಸಂಸದನಾಗಿ ಯೋಗಿ ಮಾಡಿದ ಕೊನೆಯ ಹೃದಯಂಗಮ ಭಾಷಣ]

ಮಾಧ್ಯಮಗಳ ಸಹಭಾಗಿತ್ವಕ್ಕೆ ಒತ್ತು
- ಮಾಲಿನ್ಯ ಮಕ್ತ ನಗರಗಳು ಹಾಗೂ ಗ್ರಾಮಗಳಿಗೆ ಆದ್ಯತೆ.
- ಸರ್ಕಾರದ ಎಲ್ಲಾ ಯೋಜನೆಗಳಲ್ಲಿ, ಕಾರ್ಯಕ್ರಮಗಳಲ್ಲಿ ಮಾಧ್ಯಮಗಳನ್ನು ಒಗ್ಗೂಡಿಸಿಕೊಳ್ಳುವಿಕೆ.

ಬಯಲು ಶೌಚ ಮುಕ್ತತೆಗಾಗಿ ಆಂದೋಲನ
- ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕ ಮಾಹಿತಿ ವ್ಯವಸ್ಥೆ; ಪ್ರತಿ ಇಲಾಖೆಗಳೂ ಸಾರ್ವಜನಿಕರೊಂದಿಗೆ ನೇರ ಸಂಪರ್ಕ ಉಂಟಾಗುವ ವ್ಯವಸ್ಥೆ
- ಬಯಲು ಶೌಚಾಲಯ ಉತ್ತರ ಪ್ರದೇಶದ ಗ್ರಾಮೀಣ ಭಾಗಗಳಲ್ಲಿರುವ ಪ್ರಮುಖ ಸಮಸ್ಯೆ; ಇದನ್ನು ನಿವಾರಿಸಲು ಈವರೆಗೆ ಕೈಗೊಂಡಿರುವ ಕ್ರಮಗಳು ಫಲ ಕೊಟ್ಟಿಲ್ಲ. ಶಾಮ್ಲಿ ಎಂಬ ಗ್ರಾಮವೊಂದದೇ ಬಯಲು ಶೌಚಾಲಯ ಮುಕ್ತ ಗ್ರಾಮ ಎಂದು ಹೆಸರಾಗಿದೆಯಷ್ಟೇ. ಯೋಗಿಯವರ ಸ್ವಕ್ಷೇತ್ರ ಗೋರಖ್ ಪುರ ಮಾತ್ರ ಉತ್ತರ ಪ್ರದೇಶದಲ್ಲೇ ಅತಿ ಹೆಚ್ಚು ಶೌಚಾಲಯಗಳನ್ನು ಹೊಂದಿರುವ ಜಿಲ್ಲೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅದೇ ರೀತಿ ಯುಪಿಯ ಎಲ್ಲಡೆಯೂ ಶೌಚಾಲಯಗಳನ್ನು ನಿರ್ಮಿಸಲು ಯೋಜಿಸಿದ್ದು, ಇದೇ ವರ್ಷ ಡಿಸೆಂಬರ್ ವೇಳೆಗೆ ಎಲ್ಲಾ ಜಿಲ್ಲೆಗಳನ್ನು ಬಯಲು ಶೌಚ ಮುಕ್ತವನ್ನಾಗಿಸಲು ಪಣ.[ಯುಪಿ ಸಿಎಂ ಆದಿತ್ಯನಾಥ್ ಪರಮಾಪ್ತ ಈ ಮುಸ್ಲಿಂ ಯುವಕ]
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
Udaan Yatri Cafe: ಏರ್ಪೋರ್ಟ್ನಲ್ಲಿ ದುಬಾರಿ ಊಟಕ್ಕೆ ಬ್ರೇಕ್: 17 ಕಡೆ ಉಡಾನ್ ಕೆಫೆ ಆರಂಭ












Click it and Unblock the Notifications