ಜೇಟ್ಲಿ ಗುಜರಾತ್ ಜನತೆ ಮೇಲಿನ ಹೊರೆ : ಯಶವಂತ್ ಸಿನ್ಹಾ
ಅಹಮದಾಬಾದ್, ನವೆಂಬರ್ 14: ಮಂಗಳವಾರ ಹಿರಿಯ ಬಿಜೆಪಿ ನಾಯಕ ಯಶವಂತ್ ಸಿನ್ಹಾ ದೋಷಪೂರಿತವಾಗಿರುವ ಜಿಎಸ್ಟಿಯನ್ನು ಜಾರಿಗೊಳಿಸಿದ ಕೇಂದ್ರ ಸಚಿವ ಅರುಣ್ ಜೇಟ್ಲಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಗುಜರಾತ್ ನಲ್ಲಿ ಬಿಜೆಪಿ ವಿರುದ್ಧ ಯಶವಂತ್ ಸಿನ್ಹಾ ಪ್ರಚಾರ?
ಜನರು ತಾವು ಎದುರಿಸಿದ ಕಷ್ಟಗಳಿಗೆ ಸಂಬಂಧಿಸಿದಂತೆ ಅರುಣ್ ಜೇಟ್ಲಿ ರಾಜೀನಾಮೆಗೂ ಆಗ್ರಹಿಸಬಹುದು ಎಂದು ಸಿನ್ಹಾ ಇದೇ ವೇಳೆ ಅಭಿಪ್ರಾಯಪಟ್ಟಿದ್ದಾರೆ.
ಗುಜರಾತ್ ನಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಅರುಣ್ ಜೇಟ್ಲಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಸಿನ್ಹಾ, ಜಿಎಸ್ಟಿ ಮತ್ತು ಅಪನಗದೀಕರಣದ ರೂಪದಲ್ಲಿ ಭಾರತ ಎರಡು ಅಘಾತಕ್ಕೆ ಗುರಿಯಾಯಿತು ಎಂದಿದ್ದಾರೆ.
ಜಿಎಸ್ ಟಿ ದರ ಮತ್ತಷ್ಟು ತಗ್ಗಿಸುವ ಸುಳಿವು ನೀಡಿದ ಜೇಟ್ಲಿ
ವಿಧಾನಸಭೆ ಚುನಾವಣೆ ಎದುರಿಸಲಿರುವ ಗುಜರಾತ್ ನಲ್ಲಿ 'ಲೋಕಶಾಹಿ ಬಚಾವೋ ಆಂದೋಲನ್' ಟ್ರಸ್ಟ್ ಆಯೋಜಿಸಿದ್ದ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ಅರುಣ್ ಜೇಟ್ಲಿ 'ಹೆಡ್ ಬಿದ್ದರೆ ನಾನು ಗೆದ್ದಂತೆ ಟೇಲ್ ಬಿದ್ದರೆ ನೀವು ಸೋತಂತೆ' ಎಂಬ ನಿಯಮವನ್ನು ನಂಬಿಕೊಂಡಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಸಿನ್ಹಾ ವ್ಯಂಗ್ಯವಾಡಿದ್ದಾರೆ.