ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೇಟ್ಲಿ ಗುಜರಾತ್ ಜನತೆ ಮೇಲಿನ ಹೊರೆ : ಯಶವಂತ್ ಸಿನ್ಹಾ

By Sachhidananda Acharya
|
Google Oneindia Kannada News

ಅಹಮದಾಬಾದ್, ನವೆಂಬರ್ 14: ಮಂಗಳವಾರ ಹಿರಿಯ ಬಿಜೆಪಿ ನಾಯಕ ಯಶವಂತ್ ಸಿನ್ಹಾ ದೋಷಪೂರಿತವಾಗಿರುವ ಜಿಎಸ್ಟಿಯನ್ನು ಜಾರಿಗೊಳಿಸಿದ ಕೇಂದ್ರ ಸಚಿವ ಅರುಣ್ ಜೇಟ್ಲಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಗುಜರಾತ್ ನಲ್ಲಿ ಬಿಜೆಪಿ ವಿರುದ್ಧ ಯಶವಂತ್ ಸಿನ್ಹಾ ಪ್ರಚಾರ?ಗುಜರಾತ್ ನಲ್ಲಿ ಬಿಜೆಪಿ ವಿರುದ್ಧ ಯಶವಂತ್ ಸಿನ್ಹಾ ಪ್ರಚಾರ?

ಜನರು ತಾವು ಎದುರಿಸಿದ ಕಷ್ಟಗಳಿಗೆ ಸಂಬಂಧಿಸಿದಂತೆ ಅರುಣ್ ಜೇಟ್ಲಿ ರಾಜೀನಾಮೆಗೂ ಆಗ್ರಹಿಸಬಹುದು ಎಂದು ಸಿನ್ಹಾ ಇದೇ ವೇಳೆ ಅಭಿಪ್ರಾಯಪಟ್ಟಿದ್ದಾರೆ.

Yashwant Sinha calls Jaitley a 'burden on people of Gujarat'

ಗುಜರಾತ್ ನಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಅರುಣ್ ಜೇಟ್ಲಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಸಿನ್ಹಾ, ಜಿಎಸ್ಟಿ ಮತ್ತು ಅಪನಗದೀಕರಣದ ರೂಪದಲ್ಲಿ ಭಾರತ ಎರಡು ಅಘಾತಕ್ಕೆ ಗುರಿಯಾಯಿತು ಎಂದಿದ್ದಾರೆ.

ಜಿಎಸ್ ಟಿ ದರ ಮತ್ತಷ್ಟು ತಗ್ಗಿಸುವ ಸುಳಿವು ನೀಡಿದ ಜೇಟ್ಲಿ ಜಿಎಸ್ ಟಿ ದರ ಮತ್ತಷ್ಟು ತಗ್ಗಿಸುವ ಸುಳಿವು ನೀಡಿದ ಜೇಟ್ಲಿ

ವಿಧಾನಸಭೆ ಚುನಾವಣೆ ಎದುರಿಸಲಿರುವ ಗುಜರಾತ್ ನಲ್ಲಿ 'ಲೋಕಶಾಹಿ ಬಚಾವೋ ಆಂದೋಲನ್' ಟ್ರಸ್ಟ್ ಆಯೋಜಿಸಿದ್ದ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

ಅರುಣ್ ಜೇಟ್ಲಿ 'ಹೆಡ್ ಬಿದ್ದರೆ ನಾನು ಗೆದ್ದಂತೆ ಟೇಲ್ ಬಿದ್ದರೆ ನೀವು ಸೋತಂತೆ' ಎಂಬ ನಿಯಮವನ್ನು ನಂಬಿಕೊಂಡಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಸಿನ್ಹಾ ವ್ಯಂಗ್ಯವಾಡಿದ್ದಾರೆ.

English summary
Veteran BJP leader Yashwant Sinha on Tuesday lashed out at Arun Jaitley for imposing a "deeply flawed" Goods and Service Tax (GST) and said that people can demand the Finance Minister's resignation for hardships they have faced.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X