ಮಣಿಪುರದ ಹೊಲದಲ್ಲಿ 2ನೇ ವಿಶ್ವ ಯುದ್ಧ ಕಾಲದ ಬಾಂಬ್ ಪತ್ತೆ!
ಮೊರೆಹ್(ಮಣಿಪುರ), ಜುಲೈ 17: ಎರಡನೇ ಮಹಾಯುದ್ಧದ ಕಾಲಕ್ಕೆ ಸಂಬಂಧಿಸಿದ ಸ್ಫೋಟಗೊಳ್ಳದ ಬಾಂಬ್, ಇನ್ನಿತರ ಶಸ್ತ್ರಾಸ್ತ್ರಗಳು ಮಣಿಪುರದ ಹೊಲವೊಂದರಲ್ಲಿ ಪತ್ತೆಯಾಗಿವೆ.
Recommended Video
ಗುರುವಾರದಂದು ಹೊಲವೊಂದರಲ್ಲಿ ಮಣ್ಣು ಸಮ ಮಾಡುತ್ತಿದ್ದ ವ್ಯಕ್ತಿಯೊಬ್ಬನಿಗೆ ಬಾಂಬ್, ಲೈವ್ ಕಾಟ್ರಿಜ್, ಶಸ್ತ್ರಾಸ್ತ್ರಗಳು ಕಾಣಿಸಿಕೊಂಡಿವೆ. ಮೊರೆಹ್ ಎಂಬಲ್ಲಿ ಈ ಘಟನೆ ನಡೆದಿದ್ದು, ಈ ಬಗ್ಗೆ ತಕ್ಷಣವೇ ಪೊಲೀಸರಿಗೆ ಸುದ್ದಿ ತಿಳಿದು ಬಂದಿದೆ. ಸ್ಫೋಟಗೊಳ್ಳದ ಬಾಂಬ್ ಗಳನ್ನು ವಸತಿ ಪ್ರದೇಶದಿಂದ ದೂರ ತೆಗೆದುಕೊಂಡು ಬಂದು ಸುರಕ್ಷಿತವಾಗಿರಿಸಲಾಗಿದೆ, ಈ ಬಗ್ಗೆ ತಪಾಸಣೆ ಮುಂದುವರೆದಿದೆ ಎಂದು ಎಎಸ್ ಪಿ ಸಂಗ್ ಬಾಯಿ ಗಾಂಗ್ಟೆ ಹೇಳಿದ್ದಾರೆ.
2ನೇ ವಿಶ್ವ ಯುದ್ಧದ ಕಾಲದ್ದು ಎನ್ನಲಾದ 27 ಬಾಂಬ್, 43 ಬಾಂಬ್ ಇಡುವ ಕೇಸ್, ಶಸ್ತ್ರಾಸ್ತ್ರ ಇಡುವ 15 ಪೆಟ್ಟಿಗೆ, ಲೈವ್ ಕಾಟ್ರಿಜ್ ಗಳನ್ನು ಲಾಂಗ್ ನೊವ್ ವೆಂಗ್ ಎಂಬ ಪ್ರದೇಶದಿಂದ ಹೊರಕ್ಕೆ ತೆಗೆಯಲಾಗಿದೆ.

2ನೇ ವಿಶ್ವ ಯುದ್ಧದ ಕಾಲದಲ್ಲಿ ಬ್ರಿಟಿಷರ ಆಡಳಿತವಿದ್ದ ಭಾರತ, ಅವರ ಪರವಾಗಿಯೇ ಯುದ್ಧದಲ್ಲಿ ಭಾಗವಹಿಸಿತ್ತು. ಭಾರತದ 13 ಲಕ್ಷ ಯೋಧರು ಭಾಗಿಯಾಗಿದ್ದರು ಆ ಯುದ್ಧದಲ್ಲಿ ಭಾಗವಹಿಸಿದ್ದರು ಹಾಗೂ 62 ಸಾವಿರ ಭಾರತೀಯ ಯೋಧರು ಮೃತಪಟ್ಟಿದ್ದರು.
2019ರಲ್ಲಿ ಜರ್ಮನಿಯ ಹಳ್ಳಿಯೊಂದರಲ್ಲಿ 2ನೇ ಮಹಾಯುದ್ಧ ಕಾಲದ ಬಾಂಬ್ ವೊಂದು ಸ್ಫೋಟಗೊಂಡಿತ್ತು. ಆ ಬಾಂಬ್ ಕೂಡಾ ಇದೇ ರೀತಿ ಭೂಮಿಯಲ್ಲಿ ಹುದುಗಿ ಹೋಗಿತ್ತು. ಆದರೆ, ಮಣಿಪುರದ ಬಳಿ ಈ ರೀತಿ ಬಾಂಬ್ ಪತ್ತೆಯಾಗಿದ್ದು ಹೇಗೆ ಎಂಬುದರ ಬಗ್ಗೆ ತನಿಖೆ ಮುಂದುವರೆದಿದೆ.\

2ನೇ ಜಾಗತಿಕ ಸಮರ:
1914ರ ಜುಲೈ 28ರಂದು ಆರಂಭವಾದ ಮೊದಲ ಮಹಾಯುದ್ದ 1918ರ ನವೆಂಬರ್ 11ರವರೆಗೆ ನಡೆದಿತ್ತು. ಬ್ರಿಟಿಷ್ ಒಕ್ಕೂಟ ಹಾಗೂ ಜರ್ಮನ್ ಒಕ್ಕೂಟ ನಡುವೆ ನಡೆದ ಮೊದಲ ವಿಶ್ವಯುದ್ದ, 4 ವರ್ಷಗಳ ಕಾಲ ನಡೆದಿತ್ತು. ಈ ಯುದ್ಧದಲ್ಲಿ ಒಟ್ಟು 6.5 ಕೋಟಿ ಸೈನಿಕರು ಭಾಗಿಯಾಗಿದ್ದರು. ಅದರಲ್ಲಿ 85 ಲಕ್ಷ ಮಂದಿ ಮೃತಪಟ್ಟು, 3.7 ಕೋಟಿ ಸೈನಿಕರು ಗಾಯಗೊಂಡಿದ್ದರು.
ಸೆಂಟ್ರಲ್ ಪವರ್ಸ್(ಜರ್ಮನಿ, ಆಸ್ಟ್ರೀಯಾ-ಹಂಗೇರಿ, ದಿ ಒಟ್ಟೊಮನ್ ರಾಜಮನೆತನ ಹಾಗೂ ಬಲ್ಗೇರಿಯಾ) ಹಾಗೂ ಮೈತ್ರಿಕೂಟ ಅಥವಾ ಟ್ರಿಪಲ್ ಎಂಟೆಂಟೆ(ಗ್ರೇಟ್ ಬ್ರಿಟನ್, ಫ್ರಾನ್ಸ್ ಹಾಗೂ ರಷ್ಯಾ) ನಡುವೆ ಮೊದಲ ಮಹಾಯುದ್ಧ ಸಂಭವಿಸಿತು. ಆರಂಭದಲ್ಲಿ ಸೆಂಟ್ರಲ್ ಪವರ್ಸ್ ಜತೆ ಇದ್ದ ಇಟಲಿ 1915ರ ನಂತರ ಬ್ರಿಟನ್ ಮೈತ್ರಿಕೂಟಕ್ಕೆ ಬೆಂಬಲ ವ್ಯಕ್ತಪಡಿಸಿತ್ತು. ನಂತರದ ದಿನಗಳಲ್ಲಿ ಮೈತ್ರಿಕೂಟಕ್ಕೆ ಜಪಾನ್, ಬೆಲ್ಜಿಯಂ, ಸರ್ಬಿಯಾ, ಗ್ರೀಸ್, ಮಾಂಟೆನೆಗ್ರೋ, ರೊಮಾನಿಯಾ, ಬ್ರೆಜಿಲ್ ಹಾಗೂ ಚೆಕೊಸ್ಲೋವಾಕ್ ಪ್ರಾಂತ್ಯಗಳು ಬೆಂಬಲ ವ್ಯಕ್ತಪಡಿಸಿದವು. 1917ರ ನಂತರ ಜರ್ಮನಿ ವಿರುದ್ಧವಾಗಿ ಯುಎಸ್ಎ ನಿಂತು ಕೊಂಡಿತು.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications