Ganga Vilas cruise: ವಿಶ್ವದ ಅತಿ ಉದ್ದದ ನದಿ ಕ್ರೂಸ್ ಗಂಗಾ ವಿಲಾಸ್ ಪ್ರಯಾಣ ವೆಚ್ಚ ನಿಜಕ್ಕೂ ಶಾಕ್ ನೀಡುತ್ತೆ!
ನವದೆಹಲಿ, ಜ. 09: ವಿಶ್ವದ ಅತಿ ಉದ್ದದ ನದಿ ವಿಹಾರ ಒದಗಿಸಲಿರುವ ಎಂವಿ ಗಂಗಾ ವಿಲಾಸ್ ಐಷಾರಾಮಿ ಹಡಗಿಗೆ ಜನವರಿ 13ಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಈ ಹಡಗಿನಲ್ಲಿ ಪ್ರಯಾಣಿಸಬೇಖು ಎಂದರೇ ಲಕ್ಷ ಲಕ್ಷ ಹಣ ಕೂಡ ಬೇಕು.
ಹೌದು, ಗಂಗಾ ವಿಲಾಸ್ ಹಡಗಿನ ಪ್ರಯಾಣ ದರವು ನಿಮ್ಮ ಮನಸ್ಸನ್ನು ಚಕಿತಗೊಳಿಸುತ್ತದೆ. ಒಮ್ಮೆ ಜೇಬು ಮುಟ್ಟಿ ನೋಡಿಕೊಂಡು ಆಮೇಲೆ ಯೋಚಿಸುವಂತೆ ಮಾಡುತ್ತದೆ. ವಾರಣಾಸಿಯಿಂದ ನೌಕಾಯಾನ ಆರಂಭವಾಗಿ ಅಸ್ಸಾಂನ ದಿಬ್ರುಗಢ್ನಲ್ಲಿ ಲಂಗರು ಹಾಕಲಿರುವ ಎಂವಿ ಗಂಗಾ ವಿಲಾಸ್ನಲ್ಲಿ ಪ್ರಯಾಣಿಸುವ ಪ್ರತಿ ವ್ಯಕ್ತಿಗೆ ಪ್ರತಿ ದಿನದ ಶುಲ್ಕ 300 ಡಾಲರ್ ಅಂದರೆ 2,4692.25 ರೂಪಾಯಿಗಳು.
ಒಂದು ದಿನಕ್ಕೆ 300 ಡಾಲರ್ ಎಂದು ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವ ಆಯುಷ್ ಸರ್ಬಾನಂದ ಸೋನೋವಾಲ್ ಸೋಮವಾರ ಗುವಾಹಟಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಇದರ ಜೊತೆಗೆ ಭಾರತೀಯರಿಗೆ ಮತ್ತು ವಿದೇಶಿಯರಿಗೆ ಪ್ರಯಾಣ ದರ ಒಂದೇ ಆಗಿರುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಜನವರಿ 13 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿರುವ ಈ ಗಂಗಾ ವಿಲಾಸ್ ಹಡಗು 51 ದಿನಗಳ ಕಾಲ 3,200 ಕಿ.ಮೀ ಗಿಂತಲೂ ಹೆಚ್ಚು ದೂರವನ್ನು ಕ್ರಮಿಸಿದ ನಂತರ ಅಸ್ಸಾಂನ ದಿಬ್ರುಗಢವನ್ನು ತಲುಪಲಿದೆ. ಒಟ್ಟು 51 ದಿನಗಳ ಕಾಲ ಹಡಗಿನಲ್ಲಿ ನದಿಯ ವಿಹಾರವನ್ನು ಆನಂದಿಸಬೇಕಿರುವವರು ಬರೋಬ್ಬರಿ 1,53,000 ಡಾಲರ್ಗಳನ್ನು ಪಾವತಿಸಬೇಕು. ಅಂದರೆ 12.59 ಲಕ್ಷ ರೂಪಾಯಿಗೂ ಅಧಿಕ ವೆಚ್ಚವಾಗಲಿದೆ.
ಈ ಗಂಗಾ ವಿಲಾಸ್ ಹಡಗು 62 ಮೀಟರ್ ಉದ್ದ ಮತ್ತು 12 ಮೀಟರ್ ಅಗಲವಿದೆ. ಮೂರು ಡೆಕ್ಗಳು, 36 ಪ್ರಯಾಣಿಕರ ಸಾಮರ್ಥ್ಯದ 18 ಸೂಟ್ಗಳು ಮತ್ತು ಐಷಾರಾಮಿ ಅನುಭವವನ್ನು ಒದಗಿಸುವ ಎಲ್ಲಾ ಸೌಕರ್ಯಗಳನ್ನು ಹೊಂದಿದೆ.
"ಈ ಹಡಗು ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಬಾಂಗ್ಲಾದೇಶ ಮತ್ತು ಅಸ್ಸಾಂ ಮೂಲಕ ಹಾದುಹೋಗುಲಿದ್ದು, ಇದು ಭಾರತದ ಈ ರಾಜ್ಯಗಳು ಮತ್ತು ಬಾಂಗ್ಲಾದೇಶದ 50 ಸ್ಥಳಗಳಲ್ಲಿ ನಿಲುಗಡೆ ನೀಡಲಿದೆ. ಪ್ರವಾಸಿಗರು ನಿಲುಗಡೆ ಸಮಯದಲ್ಲಿ ಸ್ಥಳೀಯ ಸಾಂಸ್ಕೃತಿಕ ಮತ್ತು ಪಾರಂಪರಿಕ ತಾಣಗಳಿಗೆ ಭೇಟಿ ನೀಡುತ್ತಾರೆ" ಎಂದು ಸಚಿವ ಸೋನೊವಾಲ್ ತಿಳಿಸಿದ್ದಾರೆ.

ಅಸ್ಸಾಂನ ದಿಬ್ರುಗಢದಲ್ಲಿ ಪ್ರಯಾಣ ಕೊನೆಗೊಳ್ಳುವ ಮೊದಲು ಧುಬ್ರಿ, ಜೋಗಿಘೋಪಾ, ಗುವಾಹಟಿಯ ಪಾಂಡು, ಕಾಜಿರಂಗ, ನಿಮತಿ ಮತ್ತು ಮಜುಲಿಯಲ್ಲಿ ನಿಲುಗಡೆ ನೀಡಲಾಗಿದೆ.
ಇನ್ನು, ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡುವ ದಿನ ಈ ಐಷಾರಾಮಿ ಹಡಗಿನ್ಲಲಿ ಪ್ರಯಾಣ ಬೆಳೆಸುವವರು ಎಲ್ಲಾ 36 ಸ್ವಿಸ್ ಪ್ರಜೆಗಳು ಎಂದು ಸಚಿವ ಆಯುಷ್ ಸರ್ಬಾನಂದ ಸೋನೊವಾಲ್ ಮಾಹಿತಿ ನೀಡಿದ್ದಾರೆ. ಈ ಅವರಲ್ಲಿ 36 ಮಂದಿಯಲ್ಲಿ ಹದಿನಾಲ್ಕು ಮಂದಿ ಕೋಲ್ಕತ್ತಾದಲ್ಲಿ ಇಳಿಯಲಿದ್ದಾರೆ. ಜೊತೆಗೆ ಇನ್ನೂ 14 ಮಂದಿ ಅಲ್ಲಿಂದ ಹಡಗನ್ನು ಹತ್ತಲಿದ್ದಾರೆ ಎಂದು ತಿಳಿಸಿದ್ದಾರೆ.
"ಗಂಗಾ ವಿಲಾಸ್ ದೇಶದಲ್ಲಿ ಪ್ರವಾಸೋದ್ಯಮಕ್ಕೆ ಹೊಸ ಉತ್ತೇಜನ ತೆರೆಯುತ್ತದೆ. ಪ್ರಧಾನಿ ಮೋದಿಜಿಯವರ ಅಡಿಯಲ್ಲಿ ಒಳನಾಡಿನ ಜಲಮಾರ್ಗಗಳಿಗೆ ಉತ್ತೇಜನ ಸಿಕ್ಕಿದೆ. ಸರಕು ಮತ್ತು ಪ್ರಯಾಣಿಕ ಹಡಗುಗಳಷ್ಟೇ ಅಲ್ಲ, ಕ್ರೂಸ್ಗಳು ಕೂಡ ಇರಬೇಕು. ಇದರಿಂದ ವಿದೇಶಿ ಪ್ರವಾಸಿಗರು ಭಾರತದ ಸಂಸ್ಕೃತಿಗಳು, ನಾಗರಿಕತೆಗಳು ಮತ್ತು ಗಂಗಾ ಮತ್ತು ಬ್ರಹ್ಮಪುತ್ರದ ದಡದಲ್ಲಿರುವ ಸಂಸ್ಕೃತಿಯನ್ನು ನೋಡಬಹುದು" ಎಂದು ಸಚಿವರು ಹೇಳಿದ್ದಾರೆ.
-
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications