ಶನಿಸಿಂಗಣಾಪುರ: ಮತ್ತೆ ಆರಂಭವಾಯ್ತು ಪವಿತ್ರ-ಅಪವಿತ್ರ ಚರ್ಚೆ
ಅಹಮದ್ ನಗರ, ಜನವರಿ, 27: ಮಹಿಳೆಯರು, ದೇವರು, ಪವಿತ್ರ-ಅಪವಿತ್ರ ವಿವಾದಗಳಿಗೆ ಕೊನೆ ಇಲ್ಲದಂತಾಗಿದೆ. ಕೇರಳದ ಶಬರಿಮಲೆ ಪ್ರವೇಶಕ್ಕೆ ಮಹಿಳೆಯರ ನಿಷೇಧ ವಿವಾದ ಒಂದು ತಾರ್ಕಿಕ ಅಂತ್ಯ ಕಾಣುವ ಮುನ್ನವೇ ಮಹಾರಾಷ್ಟ್ರದ ಶನಿಸಿಂಗಣಾಪುರ ಸುದ್ದಿಯಲ್ಲಿದೆ.
400 ವರ್ಷಗಳಿಗೂ ಹಿಂದಿನ ಸಂಪ್ರದಾಯ ಮುರಿದು ಶನಿ ದೇಗುಲದ ಗರ್ಭಗುಡಿ ಮತ್ತು ಬಲಿ ಪೀಠಕ್ಕೆ ಪೂಜೆ ಸಲ್ಲಿಸಲು ಆಗಮಿಸಿದ್ದ 350 ಮಹಿಳೆಯರ ಯತ್ನಕ್ಕೆ ಪೊಲೀಸರು ತಡೆ ಹಾಕಿದ್ದಾರೆ.[ಶನಿದೇವರಿಗೆ ಪೂಜೆ ಮಾಡಿದ ಮಹಿಳೆ]

ದೇವಾಲಯಕ್ಕೆ ಮಹಿಳೆಯರು ಆಗಮಿಸುತ್ತಿರುವ ಸುದ್ದಿ ಗೊತ್ತಾಗಿದ್ದು 70 ಕಿ.ಮೀ. ದೂರದಲ್ಲಿಯೇ ಮಹಿಳೆಯರಿಗೆ ತಡೆ ಹಾಕಲಾಗಿದೆ. ಹೆಲಿಕಾಪ್ಟರ್ ಮೂಲಕ ಮೇಲಿಂದ ಕೆಳಗಿಳಿದು ಪೂಜೆ ಸಲ್ಲಿಸುತ್ತೇವೆ ಎಂದು ಮಹಿಳೆಯರು ಹೇಳಿದ್ದರು.[ಸಾಡೇಸಾತಿ : ಶನಿಕಾಟಕ್ಕೆ ಸುಲಭ ಪರಿಹಾರಗಳು]
ಭೂ ಮಾತಾ ಬ್ರಿಗೇಡ್ ಎಂಬ ಸಂಘಟನೆ ಹೆಸರಿನಲ್ಲಿ ಅಧ್ಯಕ್ಷೆ ತೃಪ್ತಿ ದೇಸಾಯಿ ನೇತೃತ್ವದಲ್ಲಿ ಆಗಮಿಸುತ್ತಿದ್ದ ಎಲ್ಲ ಮಹಿಳೆಯರನ್ನು ಪೊಲೀಸರು ಸೂಪಾ ಎಂಬಲ್ಲಿ ತಡೆದರು. ಈ ವೇಳೆ ಪ್ರತಿಭಟನೆಯೂ ನಡೆಯಿತು. ಮಹಿಳೆಯರು ಹೆದ್ದಾರಿ ತಡೆ ನಡೆಸಲು ಮುಂದಾಗಿದ್ದರು.[ಸಾಡೇಸಾತಿ : ಶನಿರಾಜನ ಪೂಜಿಸುವುದು ಹೀಗೆ]
ಕಳೆದ ನವೆಂಬರ್ ನಲ್ಲಿ ಮಹಿಳೆಯೊಬ್ಬರು ಶನಿ ಸಿಂಗಣಾಪುರ ದೇಗುಲದಲ್ಲಿ ದೇವರ ಮೂರ್ತಿಗೆ ಮಹಿಳೆಯೊಬ್ಬರು ಪೂಜೆ ಸಲ್ಲಿಸಿ ತೈಲಾಭಿಷೇಕ ಮಾಡಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ನಂತರ ದೇವಾಲಯದಲ್ಲಿ ಶುದ್ಧೀಕರಣ ಕುರಿತಾದ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾತ್ತು. ಇದು ಸಾಮಾಜಿಕ ಜಾಲತಾಣಗಳಲ್ಲೂ ಈ ಕುರಿತಾಗಿ ಪರ-ವಿರೋಧದ ಚರ್ಚೆ ಆರಂಭವಾಗುವಂತೆ ಮಾಡಿತ್ತು.












Click it and Unblock the Notifications