ಗಬ್ಬರ್ ಸಿಂಗ್ ಟ್ಯಾಕ್ಸ್ 'ಹೆರಿಗೆ' ನೋವಿಗೆ ದನಿಯಾದರೆ ರಾಹುಲ್ ಗಾಂಧಿ?
ದೇಶದ ಸಾರ್ವಜನಿಕರಿಗೆ ಮಣಭಾರವಾಗಿ ಪರಿಣಮಿಸಿದ್ದ ಸರಕು ಮತ್ತು ಸೇವಾ ತೆರಿಗೆಯಲ್ಲಿ (GST) ಗಣನೀಯ ಬದಲಾವಣೆ ಮಾಡಿ ಕೇಂದ್ರ ಸರಕಾರ, ಜನರು ಸ್ವಲ್ಪ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ. ಇದಕ್ಕೆ ಕಾರಣವಾದ ಅಂಶಗಳು ಯಾವುದು?
ದೇಶದ ಆರ್ಥಿಕ ಪರಿಸ್ಥಿತಿಯನ್ನು ಮೇಲೆತ್ತುವ ಉದ್ದೇಶವೋ, ಗುಜರಾತ್ ಚುನಾವಣೆಯೋ ಅಥವಾ ರಾಹುಲ್ ಗಾಂಧಿಯೋ? ಯಾರೇ ಇರಲಿ, ಒಟ್ಟಿನಲ್ಲಿ ಜನರ ತೆರಿಗೆ ಬೇನೆಗೆ ಸ್ಪಂದಿಸಿದ ಇವರು ಅಭಿನಂದನೆಗೆ ಅರ್ಹರು. ಅದು ಮೋದಿಯೇ ಆಗಿರಲಿ, ರಾಹುಲ್ ಗಾಂಧಿಯೇ ಆಗಿರಲಿ.
ಕಳೆದ ಸುಮಾರು ಒಂದು ತಿಂಗಳಿನಿಂದ ಗಮನಿಸುವುದಾದರೆ, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ವರ್ಕಿಂಗ್ ಸ್ಟೈಲ್ ದಿನದಿಂದ ದಿನಕ್ಕೆ ಬದಲಾಗುತ್ತಿದೆ, ರಾಜಕೀಯವಾಗಿ ಪ್ರಬುದ್ದತೆಯನ್ನು ಅವರಲ್ಲಿ ಕಾಣಬಹುದಾಗಿದೆ. ಅವರ ಭಾಷಣಗಳಲ್ಲಿ ಹೋಂ ವರ್ಕ ಮಾಡಿಕೊಂಡು ಬರುತ್ತಿರುವುದನ್ನೂ ನೋಡಬಹುದಾಗಿದೆ.
ಜಿಎಸ್ಟಿಯನ್ನು 'ಗಬ್ಬರ್ ಸಿಂಗ್ ಟ್ಯಾಕ್ಸ್' ಎಂದು ಲೇವಡಿ ಮಾಡಿದ್ದ ರಾಹುಲ್, ಶುಕ್ರವಾರದ (ನ 10) ತೆರಿಗೆ ಇಳಿಯ ನಿರ್ಧಾರದ ನಂತರ ಕೇಂದ್ರ ಸರಕಾರದ ನಿರ್ಧಾರವನ್ನು ಸ್ವಾಗತಿಸುವುದರ ಜೊತೆಗೆ, GST ಇಳಿಕೆಗೆ ನಮ್ಮ ಹೋರಾಟವೇ ಕಾರಣ ಎನ್ನುವ ರೀತಿಯಲ್ಲಿ ಬಿಂಬಿಸಲಾರಂಭಿಸಿದ್ದಾರೆ.
ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಜಿಎಸ್ಟಿಯಲ್ಲಿ ಇಳಿಕೆ ಪ್ರಕಟಿಸುತ್ತಿದ್ದಂತೇ, 'ನಿಮ್ಮ ಅಸಮರ್ಥತತೆಯನ್ನು ಒಪ್ಪಿಕೊಂಡು, ಸೊಕ್ಕನ್ನು ಕಮ್ಮಿ ಮಾಡಿಕೊಳ್ಳಿ' ಎಂದು ರಾಹುಲ್ ಗಾಂಧಿ ಮಾಡಿರುವ ಟ್ವೀಟಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ದೇಶದ ಜನರಿಗೆ ಹೆಚ್ಚಿನ ತೆರಿಗೆ ಭಾರ ಹೊರಿಸಲು ಬಿಡುವುದಿಲ್ಲ
ದೇಶದ ಜನರಿಗೆ ಹೆಚ್ಚಿನ ತೆರಿಗೆ ಭಾರ ಹೊರಿಸಲು ಬಿಡುವುದಿಲ್ಲ ಎಂದು ಪ್ರತಿಭಟಿಸುತ್ತಲೇ ಬರುತ್ತಿದ್ದ ಕಾಂಗ್ರೆಸ್ ಮುಖಂಡರು, ಈಗ ನಾವು ಜನರ ಪರವಾಗಿ ಮಾಡಿದ ಹೋರಾಟಕ್ಕೆ ಕೇಂದ್ರ ಸರಕಾರ ತಲೆಬಾಗಿದೆ ಎನ್ನುವ ರೀತಿಯಲ್ಲಿ ಹೇಳಿಕೆಗಳನ್ನು ನೀಡಲಾರಂಭಿಸಿದ್ದಾರೆ. #RahulGSTimpact ಹ್ಯಾಷ್ ಟ್ಯಾಗ್ ಕೂಡಾ ಟ್ರೆಂಡಿಂಗ್ ನಲ್ಲಿದೆ.
|
ದೇಶದ ನಾಗರೀಕರ ಕೂಗಿಗೆ ಧ್ವನಿಯಾಗಿ ಎಂದು ರಾಹುಲ್ ಸಲಹೆ
ಅರುಣ್ ಜೇಟ್ಲಿಯವರನ್ನು ಸಂಭೋದಿಸುತ್ತಾ ಕೇಂದ್ರ ಸರಕಾರಕ್ಕೆ ರಾಹುಲ್ ಗಾಂಧಿ ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ. ಜಿಎಸ್ಟಿಯಲ್ಲಿರುವ ಮೂಲಭೂತ ನ್ಯೂನತೆಗಳನ್ನು ಸರಿಪಡಿಸಿ ದೇಶಕ್ಕೆ ಒಂದು ಸರಳ ತೆರಿಗೆ ಪದ್ದತಿಯನ್ನು ಜಾರಿಗೆ ತನ್ನಿ. ದೇಶದ ಅಮೂಲ್ಯ ಸಮಯವನ್ನು ನಿಮ್ಮ ಮಾತಿನಿಂದ ಹಾಳು ಮಾಡಬೇಡಿ, ನಿಮ್ಮ ಅಸಮರ್ಥತತೆಯನ್ನು ಒಪ್ಪಿಕೊಂಡು, ಸೊಕ್ಕನ್ನು ಬದಿಗಿಟ್ಟು, ದೇಶದ ನಾಗರೀಕರ ಕೂಗಿಗೆ ಧ್ವನಿಯಾಗಿ ಎಂದು ರಾಹುಲ್ ಸಲಹೆ ನೀಡಿದ್ದಾರೆ.

ಸಣ್ಣ ಮತ್ತು ಮಧ್ಯಮವರ್ಗದ ವ್ಯಾಪಾರಸ್ಥರು
ಜೇಟ್ಲಿ ಜಿಎಸ್ಟಿ ತೆರಿಗೆ ಇಳಿಕೆ ಪ್ರಕಟಣೆ ಹೊರಡಿಸುವ ಸ್ವಲ್ಪಹೊತ್ತಿಗೆ ಮುನ್ನ, " ಗಬ್ಬರ್ ಸಿಂಗ್ ಟ್ಯಾಕ್ಸ್ ಹೇರಲು ನಾವು ಬಿಡುವುದಿಲ್ಲ. ಜಿಎಸ್ಟಿ ಅನ್ನೋದು "Genuine Simple Tax" ಆಗಿರಲಿ. ನಿಮ್ಮ ತೆರಿಗೆ ಪದ್ದತಿಯಿಂದ ಸಣ್ಣ ಮತ್ತು ಮಧ್ಯಮವರ್ಗದ ವ್ಯಾಪಾರಸ್ಥರು ನಷ್ಟ ಅನುಭವಿಸುವುದನ್ನು ನೋಡಲು ನಾನು ತಯಾರಿಲ್ಲ' ಎಂದು ರಾಹುಲ್ ಹೇಳಿದ್ದರು.

ಮೂರುದಿನದ ಗುಜರಾತ್ ಪ್ರವಾಸದಲ್ಲಿರುವ ರಾಹುಲ್
ಜಿಎಸ್ಟಿ ಸಂಬಂಧ ರಾಹುಲ್ ಗಾಂಧಿ ಮಾಡಿರುವ ಎಲ್ಲಾ ಟ್ವೀಟ್ ಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇಂದಿನಿಂದ (ನ11) ಮತ್ತೆ ಮೂರುದಿನದ ಗುಜರಾತ್ ಪ್ರವಾಸದಲ್ಲಿರುವ ರಾಹುಲ್ ಗಾಂಧಿ, ಚುನಾವಣಾ ಈ ಹೊಸ್ತಿಲಲ್ಲಿ, ಕಾಂಗ್ರೆಸ್ ಪಕ್ಷದ ಹೋರಾಟದಿಂದಲೇ ಜಿಎಸ್ಟಿ ಇಳಿಕೆಯಾಯಿತು ಎಂದು ಮೈಲೇಜ್ ತೆಗೆದುಕೊಳ್ಳುವುದರಲ್ಲಿ ಸಂಶಯವೇ ಇಲ್ಲ.

ಯಾರು ಎಷ್ಟೇ ಅವಮಾನಿಸಿದರೂ, ಜಿಎಸ್ಟಿ ಇಳಿಕೆಗೆ ರಾಹುಲ್ ಕಾರಣ
ಈ ಭಾರೀ ಟ್ಯಾಕ್ಸ್ ಪದ್ದತಿಯನ್ನು ರಾಹುಲ್ ಗಾಂಧಿ ಮೊದಲಿನಿಂದಲೂ ಪ್ರತಿಭಟಿಸುತ್ತಲೇ ಬರುತ್ತಿದ್ದಾರೆ. ರಾಹುಲ್ ಗಾಂಧಿಯನ್ನು ಯಾರು ಎಷ್ಟೇ ಅವಮಾನಿಸಿದರೂ, ಜಿಎಸ್ಟಿ ಇಳಿಕೆಗೆ ಕಾರಣ... ಹೀಗೆ, ರಾಹುಲ್ ಬೆಂಬಲಿಸುವ ಟ್ವೀಟುಗಳು.
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು












Click it and Unblock the Notifications