Get Updates
Get notified of breaking news, exclusive insights, and must-see stories!

ಮಾಫಿಯಾ ಜೊತೆ ನಂಟು ಹೊಂದಿರುವವರನ್ನು ಎಂಎಲ್ಎ, ಎಂಪಿ ಮಾಡಿದ್ದು ಯಾರು..?: ಎಸ್‌ಪಿಗೆ ಸಿಎಂ ಯೋಗಿ ಪ್ರಶ್ನೆ!

ಸಮಾಜವಾದಿ ಪಕ್ಷದ ವಿರುದ್ಧ ಸಿಎಂ ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ವಾಗ್ದಾಳಿ ನಡೆಸಿದರು. ಪ್ರಯಾಗ್‌ರಾಜ್ ಗುಂಡಾಗಳಿಗೆ ಪ್ರೋತ್ಸಾಹ ನೀಡಿದವರು ಯಾರು ಎಂದು ಪ್ರಶ್ನೆ ಮಾಡಿದ್ದಾರೆ.

ಲಕ್ನೋ ಫೆಬ್ರವರಿ 27: ಪ್ರಯಾಗ್‌ರಾಜ್ ಗುಂಡಾಗಳಿಗೆ ಸಮಾಜವಾದಿ ಪಕ್ಷ ಸಹಾಯ ಮಾಡಿದೆ. ಆ ಗುಂಡಾಗಳನ್ನು ಸದೆ ಬಡಿಯುವವರೆಗೂ ನಾವು ಬಿಡುವುದಿಲ್ಲ ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅಖಿಲೇಶ್ ವಿರುದ್ಧ ಕಿಡಿ ಕಾರಿದ್ದಾರೆ.

ಸಮಾಜವಾದಿ ಪಕ್ಷದ ವಿರುದ್ಧ ಸಿಎಂ ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ವಾಗ್ದಾಳಿ ನಡೆಸಿದರು. ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ವೇಳೆ ಪ್ರತಿಪಕ್ಷ ನಾಯಕ ಅಖಿಲೇಶ್ ಯಾದವ್ ವಿರುದ್ಧ ಸಿಎಂ ಯೋಗಿ ಕಿಡಿ ಕಾರಿದ್ದಾರೆ. ವಿಪಕ್ಷಗಳ ವಿರುದ್ಧ ಆರೋಪಗಳ ಸುರುಮಳೆಗೈದಿದ್ದಾರೆ. ಹಲವಾರು ವಿಷಯಗಳ ಬಗ್ಗೆ ವಿಪಕ್ಷಗಳ ವಿರುದ್ಧ ಸಿಎಂ ಯೋಗಿ ಆಕ್ರೋಶ ಹೊರಹಾಕಿದರು.

Who made MLAs and MPs who have links with mafia?: CM Yogis question to SP!

ರಾಮಚರಿತಮಾನಸ ವಿವಾದಕ್ಕೆ ಸಿಎಂ ಯೋಗಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಪವಿತ್ರ ಗ್ರಂಥವನ್ನು ಹರಿದು ಸುಟ್ಟು ಹಾಕಲಾಗಿದೆ ಎಂದು ಅವರು ದೂರಿದ್ದಾರೆ. ಇದು ಸನಾತನ ಧರ್ಮಕ್ಕೆ ಮಾಡಿದ ಅವಮಾನ ಎಂದರು. ಇದೇ ವೇಳೆ ಅವರು ಜಾನುವಾರುಗಳ ಬಗ್ಗೆ ಮಾತನಾಡುವಾಗ ಭಾಷೆ ಸರಿಯಾಗಿರಬೇಕು ಎಂದು ಸಲಹೆ ನೀಡಿದರು.

ಅವಧಿಯಲ್ಲಿ ತುಳಸಿ ರಾಂದಾಸ್ ರಾಮಚರಿತಮಾನಗಳನ್ನು ಬರೆದಿರುವುದರ ಅರ್ಥ ಹಿಂದುಳಿದ ಸಮುದಾಯಗಳು ಎಂಬ ಪದದ ಅರ್ಥ ಅವರ ಬಗ್ಗೆ ಕಾಳಜಿ ವಹಿಸುವುದು ಎಂದು ಯೋಗಿ ಹೇಳಿದ್ದಾರೆ. ಅವರಿಗೆ ಸರಿಯಾದ ಶಿಕ್ಷಣ ಸಿಗುವಂತೆ ನೋಡಿಕೊಳ್ಳಬೇಕು ಎಂದರು. ಮೇಲಾಗಿ ಶೂದ್ರ ಎಂಬ ಪದಕ್ಕೆ ವರ್ಗ ಎಂಬ ಅರ್ಥವಿದೆ ಎಂದು ಹೇಳಲಾಗುತ್ತದೆ. ದಲಿತರನ್ನು ಶೂದ್ರ ಎಂದು ಕರೆಯಬಾರದು ಎಂದು ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಹೇಳಿರುವುದನ್ನು ಸಿಎಂ ಯೋಗಿ ನೆನಪಿಸಿದರು.

ಮಾಫಿಯಾಗಳನ್ನು ಪ್ರೋತ್ಸಾಹಿಸಿದವರು ಯಾರು?

ಶನಿವಾರ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಉಮೇಶ್ ಪಾಲ್ ಹತ್ಯೆಯ ಬಗ್ಗೆ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಯೋಗಿ ಖಾರವಾಗಿ ಉತ್ತರ ನೀಡಿದ್ದಾರೆ. ಈ ದರೋಡೆಕೋರರು ಮತ್ತು ಮಾಫಿಯಾಗಳನ್ನು ಪ್ರೋತ್ಸಾಹಿಸಿದವರು ಯಾರು ಎಂದು ಯೋಗಿ ಅವರು ಕೇಳಿದರು.

Who made MLAs and MPs who have links with mafia?: CM Yogis question to SP!

ಉಮೇಶ್ ಪೌಲ್ ಅವರ ಕುಟುಂಬದವರು ಅತೀಕ್ ಅಹಮದ್ ಅವರೊಂದಿಗೆ ಪರಿಚಯ ಹೊಂದಿದ್ದರೇ ಎಂದು ಪ್ರಶ್ನಿಸಿದ್ದಾರೆ. ಮಾಫಿಯಾ ವಿರುದ್ಧ ತಮ್ಮ ಸರ್ಕಾರ ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ನೆನಪಿಸಿದ ಯೋಗಿ ಆದಿತ್ಯನಾಥ್, ಮಾಫಿಯಾ ಜೊತೆ ನಂಟು ಹೊಂದಿರುವವರನ್ನು ಎಂಎಲ್ ಎ, ಎಂಪಿ ಮಾಡಿದ್ದು ಯಾರು..? ಎಂದು ಪ್ರಶ್ನೆ ಮಾಡಿದ್ದಾರೆ.

ಪ್ರಯಾಗ್‌ರಾಜ್ ಗುಂಡಾಗಳಿಗೆ ಎಸ್‌ಪಿ ಸಹಾಯ-

ಅಧಿಕಾರಕ್ಕೆ ಬಂದ ಮೇಲೆ ಲೂಟಿ ಮಾಡುವುದೇ ಅಂತಿಮ ಗುರಿ ಅವರದ್ದು (ಸಮಾಜವಾದಿ ಪಕ್ಷ) ಎಂದು ಸಿಎಂ ವ್ಯಂಗ್ಯವಾಡಿದ್ದಾರೆ. ಸಮಾಜವಾದಿ ಪಕ್ಷ ಪ್ರಯಾಗ್‌ರಾಜ್ ಗುಂಡಾಗಳಿಗೆ ಸಹಾಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಮಾಫಿಯಾವನ್ನು ಮಟ್ಟ ಹಾಕುತ್ತೇವೆ ಎಂದು ಗಂಭೀರವಾಗಿ ಎಚ್ಚರಿಕೆ ನೀಡಿದ್ದಾರೆ.

ತಮ್ಮ ಸರ್ಕಾರ ಪ್ರಯಾಗ್‌ರಾಜ್ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದೆ. ಯಾರೇ ಆಗಲಿ ಯಾರನ್ನೂ ನಿರ್ಲಕ್ಷಿಸುವುದಿಲ್ಲ ಎಂದು ಯೋಗಿ ಆದಿತ್ಯನಾಥ್ ಸ್ಪಷ್ಟಪಡಿಸಿದ್ದಾರೆ. ಆದರೆ ಘಟನೆಯಲ್ಲಿ ಭಾಗಿಯಾದ ಕ್ರಿಮಿನಲ್ ಗಳಿಗೆ ಸಮಾಜವಾದಿ ಪಕ್ಷ ಸಹಾಯ ಮಾಡಿದ್ದು ನಿಜವೇ ಎಂದು ಪ್ರಶ್ನಿಸಿದರು.

Who made MLAs and MPs who have links with mafia?: CM Yogis question to SP!

ಇವರೆಲ್ಲಾ ವಿಧಾನಸೌಧವಾಗಿ ಮಾಫಿಯಾಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಸಿಎಂ ಕಿಡಿಕಾರಿದರು. ಪ್ರಯಾಗರಾಜ್ ಘಟನೆಯಲ್ಲಿ ಭಾಗಿಯಾದವರು ಓಡಿಹೋಗಲು ಬಿಡುವುದಿಲ್ಲ. ಅವರನ್ನು ಹಿಡಿದು ಸಾಯಿಸುತ್ತೇವೆ ಎಂದು ಸಿಎಂ ವಿವರಿಸಿದರು. ಮಾಫಿಯಾವನ್ನು ಕೊನೆಗೊಳಿಸುವುದೇ ತಮ್ಮ ಧ್ಯೇಯ ಎಂದು ಸಿಎಂ ಯೋಗಿ ಆದಿತ್ಯನಾಥ್ ವಿಧಾನಸಭೆಯಲ್ಲಿ ಬಹಿರಂಗಪಡಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+