ವ್ಯಕ್ತಿ ಚಿತ್ರ: ದಲಿತ ನಾಯಕ, ವಕೀಲ ರಾಮನಾಥ್ ಕೋವಿಂದ್
ನವದೆಹಲಿ, ಜೂನ್ 19: ಬಿಜೆಪಿ ನೇತೃತ್ವದ ಎನ್ಡಿಎ ತನ್ನ ರಾಷ್ಟ್ರಪತಿ ಅಭ್ಯರ್ಥಿಯನ್ನು ಸೋಮವಾರ (ಜೂನ್ 19) ಹೆಸರಿಸಿದೆ.ರಾಷ್ಟ್ರಪತಿ ಚುನಾವಣೆಯ ಹಿನ್ನೆಲೆಯಲ್ಲಿ ಸೋಮವಾರ ನಡೆದ ಬಿಜೆಪಿ ಸಂಸದೀಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಬಿಹಾರದ ಹಾಲಿ ರಾಜ್ಯಪಾಲ ರಾಮನಾಥ್ ಕೋವಿಂದ್ ಅವರು ಮಂದಿನ ರಾಷ್ಟ್ರಪತಿಯಾಗಲು ಸಜ್ಜಾಗುತ್ತಿದ್ದಾರೆ.
ಭಾರತದ ರಾಷ್ಟ್ರಪತಿ ಅಯ್ಕೆ ಹೇಗೆ? ಎಲೆಕ್ಟ್ರೋಲ್ ಕಾಲೇಜ್ ಹೇಗಿದೆ?
ಕಾನ್ಪುರ ಮೂಲದ ವಕೀಲ, ದಲಿತ ನಾಯಕ, ಹಾಲಿ ಬಿಹಾರ ರಾಜ್ಯಪಾಲ ರಾಮ್ ನಾಥ್ ಕೋವಿಂದ್ ಅವರ ಬಗ್ಗೆ ಸಂಕ್ಷಿಪ್ತ ವ್ಯಕ್ತಿಚಿತ್ರ ಇಲ್ಲಿದೆ.
ಜುಲೈ 17ರಂದು ಮುಂದಿನ ರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಇನ್ನು ರಾಷ್ಟ್ರಪತಿ ಚುನಾವಣೆಯ ಮತ ಎಣಿಕೆ ಜುಲೈ 20ರಂದು ನಡೆಯಲಿದೆ. ಜೂನ್ 23ರಂದು ಕೋವಿಂದ್ ಅವರು ನಾಮಪತ್ರ ಸಲ್ಲಿಸಲಿದ್ದಾರೆ.ಜುಲೈ 24ಕ್ಕೆ ಹಾಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವಧಿ ಅಂತ್ಯವಾಗಲಿದೆ.
ರಾಮ್ ನಾಥ್ ಕೋವಿಂದ್ : ಮೋದಿಯ ಮಾಸ್ಟರ್ ಸ್ಟ್ರೋಕ್
* ರಾಮನಾಥ್ ಕೋವಿಂದ್ ಅವರು ಅಕ್ಟೋಬರ್ 1, 1945ರಂದು ಉತ್ತರಪ್ರದೇಶದ ಕಾನ್ಪುರ ಜಿಲ್ಲೆಯ ದೇರಾಪುರ್ ದ ಪರೌಂಖ್ ಗ್ರಾಮದಲ್ಲಿ ಜನನ.
ಜುಲೈ 17ಕ್ಕೆ ರಾಷ್ಟ್ರಪತಿ ಚುನಾವಣೆ, 20 ರಂದು ಮತ ಎಣಿಕೆ
*
1994-2000
ಹಾಗೂ
2000-2006
ಎರಡು
ಅವಧಿಗೆ
ಉತ್ತರಪ್ರದೇಶದಿಂದ
ರಾಜ್ಯ
ಸಭೆಗೆ
ಆಯ್ಕೆಯಾಗಿದ್ದರು.
*
ವೃತ್ತಿಯಿಂದ
ವಕೀಲರಾದ
ರಾಮನಾಥ್
ಅವರು
ದೆಹಲಿಯಲ್ಲಿ
ವಕೀಲಿಕೆ
ಆರಂಭಿಸಿದ್ದರು.
* ಬಿಜೆಪಿ ದಲಿತ ಮೋರ್ಚಾದ ಮಾಜಿ ಅಧ್ಯಕ್ಷ(1998-2002) ಹಾಗೂ ಅಖಿಲ ಭಾರತ ಕೋಲಿ ಸಮಾಜದ ಅಧ್ಯಕ್ಷರಾಗಿದ್ದಾರೆ.
*
ಪಕ್ಷದ
ರಾಷ್ಟ್ರೀಯ
ವಕ್ತಾರರಾಗಿ
ಕೂಡಾ
ಕರ್ತವ್ಯ
ನಿರ್ವಹಿಸಿದ್ದಾರೆ.
*
ಆಗಸ್ಟ್
8,
2015ರಂದು
ಬಿಹಾರದ
ರಾಜ್ಯಪಾಲರಾಗಿ
ಕೋವಿಂದ್
ಅವರನ್ನು
ರಾಷ್ಟ್ರಪತಿ
ಪ್ರಣಬ್
ಮುಖರ್ಜಿ
ಅವರು
ನೇಮಿಸಿದರು.