ಭಾರತದಲ್ಲಿ ಪತ್ತೆಯಾದ ಕೊರೊನಾವೈರಸ್ ರೂಪಾಂತರ ತಳಿಗೆ ಹೊಸ ಹೆಸರು!
ನವದೆಹಲಿ, ಜೂನ್ 01: ಭಾರತದಲ್ಲಿ ಕೊರೊನಾವೈರಸ್ ಸೋಂಕಿನ ಎರಡನೇ ಅಲೆಯ ಬೆನ್ನಲ್ಲೇ ಮೂರನೇ ಅಲೆಯು ಮಕ್ಕಳ ಮೇಲೆ ದಾಳಿ ನಡೆಸುವ ಆತಂಕ ಹೆಚ್ಚುತ್ತಿದೆ. ಇದರ ಮಧ್ಯೆ ದೇಶದಲ್ಲೇ ಮೊದಲು ಕಾಣಿಸಿಕೊಂಡ ಕೊವಿಡ್-19 ರೂಪಾಂತರ ತಳಿಯನ್ನು ವಿಶ್ವ ಆರೋಗ್ಯ ಸಂಸ್ಥೆಯು 'ಡೆಲ್ಟಾ' ಎಂದು ಕರೆದಿದೆ.
ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಹಲವು ತಳಿಯ ರೂಪಾಂತರ ವೈರಸ್ ಸೃಷ್ಟಿಯಾಗಿರುವುದನ್ನು ವಿಶ್ವಸಂಸ್ಥೆಯು ಗಮನಿಸಿದೆ. ವಿವಿಧ ರಾಷ್ಟ್ರಗಳಲ್ಲಿ ಹರಡುತ್ತಿರುವ ವಿಭಿನ್ನ ಗುಣಲಕ್ಷಣಗಳನ್ನು ಒಳಗೊಂಡಿರುವ ಕೊರೊನಾವೈರಸ್ ರೂಪಾಂತರ ತಳಿಗಳಿಗೆ ವಿಶ್ವ ಆರೋಗ್ಯ ಸಂಸ್ಥೆಯು ಸೋಮವಾರ ಹೆಸರನ್ನು ಘೋಷಿಸಿದೆ.
ಭಾರತದಲ್ಲಿ ಮೊದಲು ಪತ್ತೆಯಾಗಿರುವ ಕೊರೊನಾವೈರಸ್ ರೂಪಾಂತರವನ್ನು ಹೆಸರಿಸಲು ಗ್ರೀಕ್ ವರ್ಣಮಾಲೆಯನ್ನು ಬಳಸಿಕೊಳ್ಳಲಾಗಿದೆ. ಕೊವಿಡ್-19 ಸಂಬಂಧಿತ ರೂಪಾಂತರ ಮತ್ತು ಬಾಧ್ಯತೆ ಆಧಾರಿತ ರೂಪಾಂತ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಪ್ರಕಟಿಸಿರುವ ಬಗ್ಗೆ ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಭಾರತದ ಜೊತೆಗೆ ವಿವಿಧ ರಾಷ್ಟ್ರಗಳಲ್ಲಿ ಪತ್ತೆಯಾಗಿರುವ ಹೊಸ ರೂಪಾಂತರ ತಳಿಗಳನ್ನು ಹೆಸರಿಸಲಾಗಿದೆ. ಈ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ಓದಿ.

ಕೊರೊನಾವೈರಸ್ ಸೋಂಕಿನ ಎರಡು ರೂಪಾಂತರ ತಳಿ!
ದೇಶದಲ್ಲಿ ಮೊದಲು ಪತ್ತೆಯಾಗಿರುವ ಕೊರೊನಾವೈರಸ್ ಸೋಂಕಿನ ಎರಡು ರೂಪಾಂತರ ತಳಿಯ ವಿಚಾರದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಉಲ್ಲೇಖಿಸಿದೆ. ಕೊವಿಡ್-19 ಸೋಂಕಿನ B.1.617.1 ರೂಪಾಂತರ ತಳಿಯನ್ನು ಕಪ್ಪಾ ಎಂದು ಹೆಸರಿಸಲಾಗಿದ್ದು, ಇದರ ಮುಂದುವರಿದ ಭಾಗವಾಗಿ ರೂಪಾಂತರಗೊಂಡ B.1.617.2 ತಳಿಗೆ ವಿಶ್ವ ಆರೋಗ್ಯ ಸಂಸ್ಥೆಯು ಡೆಲ್ಟಾ ಎಂದು ಹೆಸರು ನೀಡಿದೆ.

ಯಾವುದೇ ಕಾರಣಕ್ಕೂ ಹೆಸರನ್ನು ಬದಲಾಯಿಸುವಂತಿಲ್ಲ
ಜಗತ್ತಿನ ಯಾವುದೇ ರಾಷ್ಟ್ರವು ವಿಶ್ವ ಆರೋಗ್ಯ ಸಂಸ್ಥೆಯು ಕೊರೊನಾವೈರಸ್ ರೂಪಾಂತರ ತಳಿಗೆ ನೀಡಿರುವ ವೈಜ್ಞಾನಿಕ ಹೆಸರುಗಳನ್ನು ಬದಲಾಯಿಸುವಂತಿಲ್ಲ. ಈ ಹೆಸರು ರೂಪಾಂತರ ರೋಗಾಣುವಿನ ವೈಜ್ಞಾನಿಕ ಮಾಹಿತಿಯನ್ನು ಒಳಗೊಂಡಿದ್ದು, ಸಂಶೋಧನೆಯಲ್ಲಿ ಬಳಸಲ್ಪಡುತ್ತದೆ. ರೂಪಾಂತರ ವೈರಸ್ ಪತ್ತೆ ಹಾಗೂ ವರದಿ ಮಾಡುವ ಸಂದರ್ಭದಲ್ಲಿ ಯಾವುದೇ ರಾಷ್ಟ್ರವನ್ನು ಕಳಂಕಿತವಾಗಿ ನೋಡುವಂತಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಕೊವಿಡ್-19 ತಾಂತ್ರಿಕ ಮುಖ್ಯಸ್ಥ ಡಾ.ಮಾರಿಯಾ ವ್ಯಾನ್ ಕರ್ಕೊವೆ ತಿಳಿಸಿದ್ದಾರೆ.
|
ಯಾವ ದೇಶದ ಕೊವಿಡ್ ರೂಪಾಂತರಕ್ಕೆ ಯಾವ ಹೆಸರು?
ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಪತ್ತೆಯಾಗಿರುವ ಕೊರೊನಾವೈರಸ್ ರೂಪಾಂತರ ತಳಿಗಳಿಗೆ ವಿಶ್ವ ಆರೋಗ್ಯ ಸಂಸ್ಥೆಯು ವಿವಿಧ ಹೆಸರುಗಳನ್ನು ನೀಡಿದೆ. ಈ ಕೊವಿಡ್-19 ರೂಪಾಂತರ ತಳಿಗಳ ಮೂಲ ವಂಶಾವಳಿ, ರಾಷ್ಟ್ರ, ರೂಪಾಂತರ ತಳಿ ಕಾಣಿಸಿಕೊಂಡ ವರ್ಷ ಹಾಗೂ ತಿಂಗಳ ಕುರಿತು ಮಾಹಿತಿ ಇಲ್ಲಿದೆ ನೋಡಿ.
| ಕೊರೊನಾವೈರಸ್ ತಳಿ ಹೆಸರು | ದೇಶ ಮತ್ತು ದಿನಾಂಕ | ರೋಗಾಣುವಿನ ವಂಶಾವಳಿ |
| ಆಲ್ಫಾ | ಯುನೈಟೆಡ್ ಕಿಂಗ್ ಡಮ್, ಸಪ್ಟೆಂಬರ್ 2020 | B.1.1.7 |
| ಬೇಟಾ | ದಕ್ಷಿಣ ಆಫ್ರಿಕಾ, ಮೇ 2020 | B.1.351 |
| ಗಮ್ಮಾ | ಬ್ರೆಜಿಲ್, ನವೆಂಬರ್ 2020 | P.1 |
| ಡೆಲ್ಟಾ | ಭಾರತ, ಅಕ್ಟೋಬರ್, 2020 | B.1.617.2 |
| ಎಪ್ಸಿಲೋನ್ | ಯುಎಸ್ಎ, ಮಾರ್ಚ್, 2020 | B.1.427/B.1.429 |
| ಜೇಟಾ | ಬ್ರೆಜಿಲ್, ಏಪ್ರಿಲ್ 2020 | P.2 |
| ಎಟಾ | ಹಲವು ರಾಷ್ಟ್ರಗಳಲ್ಲಿ, ಡಿಸೆಂಬರ್,2020 | B.1.525 |
| ಥೇಟಾ | ಫಿಲಿಫೈನ್ಸ್, ಜನವರಿ, 2021 | P.3 |
| ಲೋಟಾ | ಯುಎಸ್ಎ, ನವೆಂಬರ್,2020 | B.1.526 |
| ಕಪ್ಪಾ | ಭಾರತ, ಅಕ್ಟೋಬರ್, 2020 | B.1.617.1 |

ರೂಪಾಂತರದ ಜೊತೆ ದೇಶದ ಹೆಸರು ಸೇರ್ಪಡೆಗೆ ಆಕ್ಷೇಪ
ಕೊರೊನಾವೈರಸ್ ಸೋಂಕಿನ B.1.617.2 ರೂಪಾಂತರ ತಳಿಯನ್ನು ಭಾರತೀಯ ತಳಿ ಎಂದು ಕರೆಯದಂತೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಅಧಿಕೃತ ಮೂಲಗಳಿಂದ ದೃಢಪಡಿಸುವ ಹೊರತು ರೂಪಾಂತರ ತಳಿಯ ಜೊತೆಗೆ ದೇಶದ ಹೆಸರನ್ನು ಸೇರಿಸುವಂತಿಲ್ಲ ಎಂದು ಸರ್ಕಾರ ಸೂಚನೆ ನೀಡಿತ್ತು. ಅಲ್ಲದೇ, ಸಾಮಾಜಿಕ ಜಾಲತಾಣದಲ್ಲಿ ಭಾರತೀಯ ಮೂಲದ ತಳಿ ಎಂದು ಬಳಕೆ ಮಾಡಿರುವ ಎಲ್ಲ ದತ್ತಾಂಶವನ್ನು ತೆಗೆದು ಹಾಕುವಂತೆ ಸೂಚಿಸಲಾಗಿತ್ತು. ಇದಕ್ಕೂ ಮೊದಲು ಸಿಂಗಾಪುರ್ ನಲ್ಲಿ ಪತ್ತೆಯಾಗಿರುವ ರೂಪಾಂತರ ತಳಿಯನ್ನು ಸಿಂಗಾಪುರ್ ರೂಪಾಂತರ ಎಂದು ಕರೆಯಲಾಗುತ್ತಿತ್ತು. ಅಲ್ಲಿನ ಸರ್ಕಾರ ರೂಪಾಂತರವನ್ನು ಈ ರೀತಿ ಹೆಸರಿಸದಂತೆ ತಾಕೀತು ಮಾಡಿದ್ದು, ಸಂಬಂಧಿತ ಎಲ್ಲ ದತ್ತಾಂಶಗಳನ್ನು ಡಿಲೀಟ್ ಮಾಡುವಂತೆ ಖಡಕ್ ಆದೇಶ ನೀಡಿತ್ತು.

ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಮಾಹಿತಿ
ದೇಶದಲ್ಲಿ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆ ಆರಂಭವಾದ 50 ದಿನಗಳ ಬಳಿಕ ಮೊದಲ ಬಾರಿಗೆ ಸೋಂಕಿತರ ಸಂಖ್ಯೆಯಲ್ಲಿ ದಾಖಲೆ ಮಟ್ಟದ ಇಳಿಕೆ ಕಂಡು ಬಂದಿದೆ. ದೇಶದಲ್ಲಿ ಒಂದು ವಾರದ ಪಾಸಿಟಿವಿಟಿ ದರ ಶೇ.9.07ರಷ್ಟಿದೆ. ಕಳೆದ 24 ಗಂಟೆಗಳಲ್ಲಿ 1,52,734 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 2,38,022 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಂದೇ ದಿನ ಕೊರೊನಾವೈರಸ್ ಮಹಾಮಾರಿಗೆ 3,128 ಮಂದಿ ಪ್ರಾಣ ಬಿಟ್ಟಿದ್ದಾರೆ. ಒಟ್ಟು 2,80,47,534 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಇದುವರೆಗೂ 2,56,92,342 ಸೋಂಕಿತರು ಗುಣಮುಖರಾಗಿದ್ದು, ಮಹಾಮಾರಿಯಿಂದ ಒಟ್ಟು 3,29,100 ಜನರು ಪ್ರಾಣ ಬಿಟ್ಟಿದ್ದಾರೆ. ಇದರ ಹೊರತಾಗಿ 20,26,092 ಕೊರೊನಾವೈರಸ್ ಸಕ್ರಿಯ ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
-
Top 3 Job Sectors: 2026ರಲ್ಲಿ ಯಾವ ಕ್ಷೇತ್ರ ಆಯ್ಕೆ ಮಾಡಬೇಕು? ಟಾಪ್ 3 ಉದ್ಯೋಗ ವಲಯಗಳು -
ಬೆಂಗಳೂರಿನಲ್ಲಿ ದೇಶದ ಮೊದಲ ಮನೋರೋಗ ಅಧ್ಯಯನದ ಡಿಜಿಟಲ್ 'ಕಾಮ್-ಬ್ರೈನ್' ಲೋಕಾರ್ಪಣೆ -
ವಾಸ್ತು ಅನುಸರಿಸುವುದು ಏಕೆ ಮುಖ್ಯ? ತಿಳಿಯಿರಿ ಕಾರಣಗಳು -
ದಾವಣಗೆರೆ ಉಪಚುನಾವಣೆ: ಕಣದಿಂದ ಹಿಂದೆ ಸರಿದ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್, ಕಾಂಗ್ರೆಸ್ ಬೆಂಬಲಕ್ಕೆ ನಿರ್ಧಾರ -
SSLC Hindi Exam: ಮಾರ್ಚ್ 30ರ ಎಸ್ಎಸ್ಎಲ್ಸಿ ಹಿಂದಿ ಪರೀಕ್ಷೆಗೆ ಹೊಸ ಸಮಸ್ಯೆ: ಪರೀಕ್ಷಾ ಮಂಡಳಿ ಹೇಳಿದ್ದೇನು -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
IPL 2026: ಆರ್ಸಿಬಿ ಫ್ಯಾನ್ಸ್ ಗಮನಿಸಿ; ಮ್ಯಾಚ್ ದಿನ ನಮ್ಮ ಮೆಟ್ರೋ ತಡರಾತ್ರಿವರೆಗೂ ಸಂಚಾರ -
ವಂದೇ ಭಾರತ್ ರೈಲಿನ ಊಟದಲ್ಲಿ ಹುಳು: 'ಅದು ಕೇಸರಿ' ಎಂದ ಸಿಬ್ಬಂದಿ, IRCTCಗೆ 10 ಲಕ್ಷ ದಂಡ -
ಮುದ್ದೇನಹಳ್ಳಿಯಲ್ಲಿ ಪೋಷಕರ ಹರ್ಷ: 27 ಮಕ್ಕಳಿಗೆ ಹೊಸ ಬದುಕು ನೀಡಿದ ಉಚಿತ ಹೃದಯ ಚಿಕಿತ್ಸೆ ಶಿಬಿರ -
ಭಾರತದ ಸ್ಪೈಸ್ ಗಾರ್ಡನ್ ಕೇರಳ: ಇತಿಹಾಸ ಮತ್ತು ಪ್ರಕೃತಿಯ ಸುಂದರ ಕಥೆ










Click it and Unblock the Notifications