Bihar Election 2025 Results: ಬಿಹಾರದಲ್ಲಿ ಎನ್ಡಿಎ ಕ್ಲೀನ್ ಸ್ವೀಪ್; ಭರ್ಜರಿ ಗೆಲುವಿಗೆ ಕಾರಣಗಳೇನು? ಇಲ್ಲಿದೆ ಪಟ್ಟಿ
ಪಾಟ್ನಾ, ನವೆಂಬರ್: ರಾಷ್ಟ್ರ ಮಟ್ಟದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಬಿಹಾರ ವಿಧಾನಸಭೆ ಚುನಾವಣಾ ಫಲಿತಾಂಶ ಬಹುತೇಕ ಮುಕ್ತಾಯಗೊಂಡಿದೆ. ಎನ್ಡಿಎ ಈಗಾಗಲೇ 200+ ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಪ್ರಚಂಡ ಬಹುಮತದತ್ತ ದಾಪುಗಾಲಿಟ್ಟಿದೆ. ಬಿಹಾರದ ಬಹುತೇಕ ಎಲ್ಲ ಪ್ರಾಂತ್ಯಗಳಲ್ಲಿ ಎನ್ಡಿಎ ಮೇಲುಗೈ ಸಾಧಿಸಿದೆ. ಮೋದಿ-ನಿತಿಶ್ ಕುಮಾರ್ ಡಬಲ್ ಇಂಜಿನ್ ಸರ್ಕಾರಕ್ಕೆ ಜನರು ಬಹುಪರಾಕ್ ಎಂದಿದ್ದಾರೆ. ಅಲ್ಲದೇ ಈ ಬಾರಿಯೂ ಮಹಿಳಾ ಮತದಾರರು ಎನ್ಡಿಎಗೆ ದೊಡ್ಡ ಪ್ರಮಾಣದ ಆರ್ಶಿವಾದ ಮಾಡಿದ್ದಾರೆ.
ಬಿಜೆಪಿ ಬಿಹಾರದಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಎನ್ಡಿಎ ಒಕ್ಕೂಟದಲ್ಲಿ ಬಿಜೆಪಿ 95, ಜೆಡಿಯು 82, ಎಲ್ಜೆಪಿ (ಆರ್ವಿ) 20, ಹೆಚ್ಎಎಮ್ (S) 5 ಹಾಗೂ ಆರ್ಎಲ್ಎಮ್ 4 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿವೆ. ಆದರೆ, ಮಹಾಘಟಬಂಧನ್ ಮೈತ್ರಿಕೂಟವೂ ತೀವ್ರ ಹಿನ್ನೆಡೆಯನ್ನ ಅನುಭವಿಸಿದೆ. ವಿರೋಧ ಪಕ್ಷದ ಇಂಡಿಯಾ ಬಣವು ಬಹಳ ಹಿಂದುಳಿದಿದ್ದರೂ, ಎನ್ಡಿಎ ಬಣವೂ ವಿಶ್ವಾಸವನ್ನು ವ್ಯಕ್ತಪಡಿಸಿದ್ದು, ಗ್ಯಾರಂಟಿ ಯೋಜನೆಗಳು, ಸಮರ್ಥ ನಾಯಕತ್ವದ ಅನುಕೂಲ ಮತ್ತು ವಿರೋಧ ಪಕ್ಷದ ತಪ್ಪು ಹೆಜ್ಜೆಗಳಿಂದಾಗಿ ಎನ್ಡಿಎ ಭರ್ಜರಿ ಗೆಲುವು ಸಾಧಿಸಿದೆ.

ಎನ್ಡಿಎ ಗೆಲುವಿಗೆ ಕಾರಣಗಳು ಇಲ್ಲಿವೆ
ನಿತೀಶ್ ಕುಮಾರ್ ನಾಯಕತ್ವ
ನಿತೀಶ್ ಅವರ 20 ವರ್ಷಗಳ ಆಡಳಿತದಲ್ಲಿ ಕಾನೂನು-ಸುವ್ಯವಸ್ಥೆ, ಮೂಲಸೌಕರ್ಯ (ರಸ್ತೆಗಳು, ಸೇತುವೆಗಳು) ಮತ್ತು ಅಭಿವೃದ್ಧಿ ಕಾರ್ಯಗಳು ಜನರ ಮೇಲೆ ಪರಿಣಾಮ ಬೀರಿವೆ. ಜೊತೆಗೆ ಮಹಿಳಾ ಪರ ಯೋಜನೆಗಳು ಸರ್ಕಾರದ ಕೈಹಿಡಿವೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ, 2025 ರ ಜನಾದೇಶವು ವಿಶೇಷವಾಗಿ ದಾಖಲೆಯ ಸಂಖ್ಯೆಯಲ್ಲಿ ಮತದಾನ ಮಾಡಿದ ಮಹಿಳೆಯರು ಮತ್ತು ಹಿರಿಯ ನಾಗರಿಕರಿಂದ ನಂಬಿಕೆಯ ಮರುದೃಢೀಕರಣವಾಗಿದೆ . ಅವರ ಪಕ್ಷದ ನಾಯಕರು ಈ ತೀರ್ಪು \ಅವರ ಆಡಳಿತದಲ್ಲಿ ಜನರ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
ಮಹಿಳೆಯರಿಗೆ 10,000 ರೂ. ಯೋಜನೆ
ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜ್ಯದ 1.3 ಕೋಟಿ ಮಹಿಳೆಯರಿಗೆ 10,000 ರೂ. ಗಳ ಯೋಜನೆ ಜಾರಿಗೆ ತಂದಿದ್ದರು. ಇದರಿಂದ ಮಹಿಳಾ ಮತದಾರರ ಬೆಂಬಲ ಅವರಿಗೆ ಸಿಕ್ಕಿದೆ. ಬಿಹಾರದಲ್ಲಿ ಮಹಿಳೆಯರಲ್ಲಿ ಅಭೂತಪೂರ್ವ 71% ಮತದಾನ ದಾಖಲಾಗಿದ್ದು, ಅನೇಕರು ಈ ಆರ್ಥಿಕ ಬೆಂಬಲವನ್ನು ತಮ್ಮ ದೈನಂದಿನ ಜೀವನದಲ್ಲಿ ಸ್ಪಷ್ಟವಾದ ಸುಧಾರಣೆ ಎಂದು ನೋಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆಯು ಸಂದೇಶವನ್ನು ಮತ್ತಷ್ಟು ಹೆಚ್ಚಿಸಿದೆ. ಗಮನಾರ್ಹ ಸಂಖ್ಯೆಯ ಮಹಿಳಾ ಮತದಾರರಿಗೆ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ, ಮೋದಿಯವರ ಆಕರ್ಷಣೆ ಮತ್ತು ನಿತೀಶ್ ಅವರ ಕಲ್ಯಾಣ ವಿತರಣೆಯ ಸಂಯೋಜನೆಯು ಎನ್ಡಿಎ ಗೆಲುವಿಗೆ ಕಾರಣವಾಗಿದೆ.
ಉಚಿತ ವಿದ್ಯುತ್
NDA ಪರವಾಗಿ ಮತ್ತೊಂದು ಮಹತ್ವದ ಅಂಶವೆಂದರೆ ಗೃಹಬಳಕೆಯ ಮನೆಗಳಿಗೆ 125 ಯೂನಿಟ್ಗಳವರೆಗೆ ಉಚಿತ ವಿದ್ಯುತ್ ನೀಡುವ ನಿರ್ಧಾರ. ಎನ್ಡಿಎ ನೇತೃತ್ವದ ಸರ್ಕಾರವು ಬಿಹಾರದಲ್ಲಿ ಎಲ್ಲಾ ಗೃಹ ಬಳಕೆದಾರರಿಗೆ 125 ಯೂನಿಟ್ಗಳವರೆಗೆ ಉಚಿತ ವಿದ್ಯುತ್ ನೀಡಿದೆ. ಇದು ಕೆಲವು ಹಳ್ಳಿಗಳ ಭವಿಷ್ಯವನ್ನೇ ಬದಲಾಯಿಸಿದೆ. ವಿದ್ಯುತ್ ಬಿಲ್ ಪಾವತಿಸಲು ಸರಿಯಾದ ವ್ಯವಸ್ಥೆಗಳಿಲ್ಲದೆ ಪರದಾಡುತ್ತಿದ್ದ ಹಳ್ಳಿಯ ಜನರಿಗೆ ಇದು ವರದಾನವಾಗಿದೆ.
ವೃದ್ಧಾಪ್ಯ ಪಿಂಚಣಿ
ರಾಜ್ಯದಲ್ಲಿ ಸುಮಾರು 1.2 ಕೋಟಿ ಹಿರಿಯ ನಾಗರಿಕರಿಗೆ ನಿತೀಶ್ ಕುಮಾರ್ ಸರ್ಕಾರವು ವೃದ್ಧಾಪ್ಯ ಪಿಂಚಣಿಯನ್ನು 400 ರೂ.ಗಳಿಂದ 1,100 ರೂ. ಗಳಿಗೆ ಹೆಚ್ಚಿಸಿದೆ. ಇದು ನಿತೀಶ್ ಕುಮಾರ್ ಅವರ ವರ್ಚಸ್ಸನ್ನು ಹೆಚ್ಚಿಸಿತ್ತು. ಕೆಲವು ದಿನಗಳ ಹಿಂದೆ ಅವರು ಮಾನಸಿಕವಾಗಿ ದುರ್ಬಲರಾಗಿದ್ದರೆ ಎನ್ನುತ್ತಿದ್ದ ಜನರು ಅವರನ್ನು ಬುದ್ಧಿವಂತ, ಹಿರಿಯ ನಾಯಕ ಎಂದು ಬಣ್ಣಿಸಲು ಪ್ರಾರಂಭಿಸಿದರು. ಇದು ಕೂಡ ಮತದಾರರನ್ನು ಸೆಳೆಯುವಲ್ಲಿ ಎನ್ಡಿಎಗೆ ಬಹುದೊಡ್ಡ ಯಶಸ್ಸು ತಂದುಕೊಟ್ಟಿತು.
ಹಲವು ಭರವಸೆಗಳು
ಚುನಾವಣಾ ಪ್ರಣಾಳಿಕೆಯಲ್ಲಿ 1 ಕೋಟಿ ಉದ್ಯೋಗ, 7 ಎಕ್ಸ್ಪ್ರೆಸ್ವೇಗಳು, ವೈದ್ಯಕೀಯ ಕಾಲೇಜು, ಉಚಿತ ವಿದ್ಯುತ್ (125 ಯೂನಿಟ್), 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ, ಮೀನುಗಾರರಿಗೆ ನಗದು ಇತ್ಯಾದಿ ಯೋಜನೆಗಳು ಗ್ರಾಮೀಣ ಭಾಗದ ಮತಗಳನ್ನ ಸೆಳೆಯುವಲ್ಲಿ ಯಶಸ್ವಿಯಾಗಿದೆ.
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications