ರಾಜಕೀಯ ಪಕ್ಷಗಳ ಉಚಿತ ಭರವಸೆ ತಡೆಯಲು ಸಾಧ್ಯವಿಲ್ಲ ಎಂದ ಸುಪ್ರೀಂಕೋರ್ಟ್
ನವದೆಹಲಿ, ಆಗಸ್ಟ್ 17: ಭಾರತದಲ್ಲಿ ಸಾರ್ವಜನಿಕರಿಗೆ ಉಚಿತ ಸೌಲಭ್ಯ ಘೋಷಿಸುವ ವಿಚಾರದಲ್ಲಿ ರಾಜಕೀಯ ಪಕ್ಷಗಳು ನೀಡುವ ಭರವಸೆಗಳನ್ನು ಸುಪ್ರೀಂ ಕೋರ್ಟ್ ಮೂಲಕ ತಡೆಯಲು ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅಭಿಪ್ರಾಯಪಟ್ಟಿದ್ದಾರೆ.
ತಮಿಳುನಾಡಿನ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸಲ್ಲಿಸಿರುವ ಅರ್ಜಿಯನ್ನು ಕೋರ್ಟ್ ವಿಚಾರಣೆ ನಡೆಸಿತು. ರಾಜಕೀಯ ಪಕ್ಷಗಳು ಭರವಸೆ ನೀಡುವುದನ್ನು ತಡೆಯಲು ನ್ಯಾಯಾಲಯದಿಂದ ಸಾಧ್ಯವಿಲ್ಲ ಎಂದ ಸಿಜೆಐ, ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಭರವಸೆ ನೀಡುವುದ ಸರ್ಕಾರದ ಕರ್ತವ್ಯ ಎಂದಿದ್ದಾರೆ.
ಸಾರ್ವಜನಿಕ ಹಣವನ್ನು ಖರ್ಚು ಮಾಡುವ ಸರಿಯಾದ ಮಾರ್ಗವೇ ಕಾಳಜಿ ಆಗಲಿದೆ. ಈ ವಿಷಯವು ತುಂಬಾ ಜಟಿಲವಾಗಿದ್ದು, ಸಮಸ್ಯೆಗಳನ್ನು ಪರಿಶೀಲಿಸಲು ನ್ಯಾಯಾಲಯವು ಸಮರ್ಥವಾಗಿದೆಯೇ ಎಂಬ ಪ್ರಶ್ನೆಯೂ ಮೂಡುತ್ತದೆ ಎಂದಿತು.

ಡಿಎಂಕೆ ಪಕ್ಷದ ವಾದವೇನು?
ಮಂಗಳವಾರ ಡಿಎಂಕೆಯು ಸುಪ್ರಿಂ ಕೋರ್ಟ್ನಲ್ಲಿ ಚುನಾವಣಾ ಮುಕ್ತಿ ವಿಚಾರವಾಗಿ ಅರ್ಜಿ ಸಲ್ಲಿಸಿತ್ತು. ರಾಜ್ಯ ಸರ್ಕಾರವು ಪರಿಚಯಿಸಿದ ಕಲ್ಯಾಣ ಯೋಜನೆಗಳನ್ನು ಉಚಿತ ಎಂದು ಕರೆಯಲಾಗುವುದಿಲ್ಲ ಮತ್ತು ಅವುಗಳು ವಿಶಾಲ ಮತ್ತು ಬಹು ಉದ್ದೇಶಗಳನ್ನು ಹೊಂದಿರಬಹುದು ಎಂದು ಪಕ್ಷ ವಾದಿಸಿತು.
ಗುರುವಾರ ಈ ಅರ್ಜಿ ವಿಚಾರಣೆ:
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, "ಸಿಬಲ್ ಮತ್ತು ವಿಕಾಸ್ ಸಿಂಗ್ ನೀಡಿದ ಸಲಹೆಗಳನ್ನು ಹೊಂದಿಲ್ಲದ ಕಾರಣ ಗುರುವಾರ ಈ ವಿಷಯವನ್ನು ಕೇಳಬಹುದು," ಎಂದು ಹೇಳಿದರು. ಈ ಸಂಬಂಧ ಅರ್ಜಿದಾರ ಹಂಸಾರಿಯಾ, ''ನ್ಯಾಯಾಲಯ ಸಲಹೆಗಳನ್ನು ಪರಿಗಣನೆಗೆ ತೆಗೆದುಕೊಂಡು ಸಮಿತಿ ರಚಿಸಬೇಕು,'' ಎಂದು ವಾದಿಸಿದರು.












Click it and Unblock the Notifications