ಕೇರಳ ಆರ್ ಎಸ್ ಎಸ್ ಕಾರ್ಯಕರ್ತನ ಸಾವಿಗೆ ರಾಜನಾಥ್ ಸಂತಾಪ
ತಿರುವನಂತಪುರಂ, ಜುಲೈ 30: ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಜುಲೈ 29 ರಂದು ಹತ್ಯೆಗೊಳಗಾದ ಕೇರಳದ ಆರ್ ಎಸ್ ಎಸ್ ಕಾರ್ಯಕರ್ತ ರಾಜೇಶ್ ಸಾವಿನ ಕುರಿತು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಸಂತಾಪ ವ್ಯಕ್ತಪಡಿಸಿದರು.
ಕೇರಳದಲ್ಲಿ ಮತ್ತೊಬ್ಬ ಆರೆಸ್ಸೆಸ್ ಕಾರ್ಯಕತನ ಭೀಕರ ಹತ್ಯೆ
"ಈ ಕುರಿತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೊಂದಿಗೆ ಮಾತನಾಡಿದ್ದೇನೆ. ಶಾಂತಿ-ಸುವ್ಯವಸ್ಥೆಯ ಕುರಿತು ಅವರೊಂದಿಗೆ ಚರ್ಚೆ ನಡೆಸಿದ್ದೇನೆ. ರಾಜಕೀಯ ಪ್ರೇರಿತ ಹಿಂಸೆ ಎಂಬುದು ಪ್ರಜಾಪ್ರಭುತ್ವದಲ್ಲಿ ಕ್ಷಮಿಸುವ ವಿಷಯವಲ್ಲ. ಕೇರಳದಲ್ಲಿ ಇಂಥ ಹಿಂಸೆ ನಿಲ್ಲುತ್ತದೆ ಮತ್ತು ಈ ಘಟನೆಗೆ ಸಂಬಂಧಿಸಿದಂತೆ ಅಪರಾಧಿಗಳಿಗೆ ಶಿಕ್ಷೆಯಾಗುತ್ತದೆಂದು ನಾನು ನಿರೀಕ್ಷಿಸುತ್ತೇನೆ" ಎಂದು ರಾಜನಾಥ್ ಸೀಂಗ್ ಟ್ವೀಟ್ ಮಾಡಿದ್ದಾರೆ.
Spoke to Kerala CM Shri Pinrayi Vijayan today regarding the recent incidents of political violence in the state. 1/3
— Rajnath Singh (@rajnathsingh) July 30, 2017
ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆ ಮುಗಿಸಿಕೊಂಡು ಹಿಂದಿರುಗುತ್ತಿದ್ದ ಅರೆಸ್ಸೆಸ್ ಕಾರ್ಯಕರ್ತ ರಾಜೇಶ್ ಎಡವಕೊಡೆ ಎಂಬುವವರ ಮೇಲೆ ತಿರವನಂತಪುರಂನ ಶ್ರೀಕಾರ್ಯಂ ಎಂಬಲ್ಲಿ ಜುಲೈ 29, ಶನಿವಾರ ಸಂಜೆ ಮಾರಾಕಾಸ್ತ್ರಗಳಿಂದ ದಾಳಿನಡೆಸಲಾಗಿತ್ತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಅಸುನೀಗಿದ್ದರು.
ಹತ್ಯೆಗೆ ಸಿಪಿಎಂ ಕಾರ್ಯಕರ್ತರೇ ಕಾರಣ ಎಂದು ಆರೋಪಿಸಿ ಕೇರಳ ಬಿಜೆಪಿ ನಾಯಕರು, ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು.
I have expressed my concern with the law and order situation in the state of Kerala. Political violence is unacceptable in a democracy. 2/3
— Rajnath Singh (@rajnathsingh) July 30, 2017