viral video: ನಾಯಿ ಓಡಿಸಲು ಹೋಗಿ ತಾನೇ ಮೂರನೇ ಮಹಡಿಯಿಂದ ಬಿದ್ದು ಸತ್ತ!
ಸಣ್ಣ ಸಣ್ಣ ವಿಷಯಗಳು ಮನುಷ್ಯನ ಸಾವಿಗೆ ಹೇಗೆ ಕಾರಣ ಆಗುತ್ತದೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾದಂತಿದೆ. ನಾಯಿ ಬಂತು ಎಂದು ಅದನ್ನು ಓಡಿಸಲು ಹೋಗಿ ಇಲ್ಲೊಬ್ಬ ವ್ಯಕ್ತಿ ತನ್ನ ಜೀವಕ್ಕೆ ಕುತ್ತು ತಂದುಕೊಂಡಿದ್ದಾನೆ. ನಾಯಿ ಓಡಿಸಲು ಹೋಗಿ ಆಗಬಾರದ್ದೇ ಆಗಿದೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಜನ ಇದಕ್ಕೆ ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ.
ಅವಸರ ಹಾಗೂ ಮುಂಜಾಗ್ರತೆ ಇಲ್ಲದೆ ಮಾಡುವ ಕೆಲಸಗಳು ಹೇಗೆ ಜೀವಕ್ಕೆ ಕುತ್ತು ತರಬಹುದು ಎನ್ನುವುದಕ್ಕೆ ತೆಲಂಗಾಣದ ರಾಜಧಾನಿ ಹೈದರಾಬಾದ್ನಲ್ಲಿ ನಡೆದಿರುವ ಘಟನೆಯೇ ಸಾಕ್ಷಿಯಾಗಿದೆ. ಗೆಳೆಯ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದವರು ಶಾಕ್ ಆಗಿದ್ದಾರೆ. ಗೆಳೆಯ ಹುಟ್ಟು ಹಬ್ಬಕ್ಕೆ ಸಾಕ್ಷಿಯಾಗಲು ಬಂದು ತನ್ನ ಸಾವನ್ನು ತಾನೇ ತಂದುಕೊಂಡಿದ್ದಾನೆ. ಹೈದರಾಬಾದ್ನ ಹೋಟೆಲ್ವೊಂದರಲ್ಲಿ ಉದಯ ಕುಮಾರ್ ಎನ್ನುವ ವ್ಯಕ್ತಿಯ ಗೆಳೆಯ ಜನ್ಮದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿತ್ತು.

ಈ ಪಾರ್ಟಿಗೆ ಬರ್ತಡೇ ಬಾಯ್ನ ಹಲವು ಗೆಳೆಯರು ಸಹ ಅಲ್ಲಿಗೆ ಬಂದಿದ್ದರು. ಹೋಟೆಲ್ವೊಂದರಲ್ಲಿ ಈ ಪಾರ್ಟಿ ನಡೆಯುತ್ತಿತ್ತು. ಆದರೆ, ಕಾರಿಡಾರ್ನಲ್ಲಿ ನಾಯಿ ಓಡಾಡುವುದನ್ನು ಉದಯ ಕುಮಾರ್ ನೋಡಿದ್ದಾನೆ. ಆ ನಾಯಿಯನ್ನು ಅಟ್ಟಾಡಿಸಿಕೊಂಡು ಓಡಿಸಲು ಹೋಗಿದ್ದಾನೆ. ಆದರೆ, ಅವನೇ ಆಯಾ ತಪ್ಪಿ ಮೂರನೇ ಮಹಡಿಯಿಂದ ಕೆಳಕ್ಕೆ ಬಿದಿದ್ದಾನೆ. ಇದರಿಂದ ಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಹೇಳಾಲಾಗಿದೆ.
ಘಟನೆಯ ಹಿನ್ನೆಲೆ ಏನು: ಹೈದರಾಬಾದ್ನಲ್ಲಿ ಪಾಲಿಟೆಕ್ನಿಕ್ನಲ್ಲಿ ಓದುತ್ತಿರುವ ಉದಯ್ಕುಮಾರ್ (24) ಇಲ್ಲಿನ ಚಂದಾನಗರದ ಖಾಸಗಿ ಹೋಟೆಲ್ವೊಂದರಲ್ಲಿ ಆಯೋಜಿಸಿದ್ದ ಸ್ನೇಹಿತ ಪಾರ್ಟಿಗೆ ಹೋಗಿದ್ದಾನೆ. ಇಲ್ಲಿ ಅದ್ಧೂರಿಯಾಗಿ ಪಾರ್ಟಿ ನಡಿತ್ತಿತ್ತು. ಈ ಬಿಲ್ಡಿಂಗ್ನ ಮೂರನೇ ಮಹಡಿಯಲ್ಲಿ ಪಾರ್ಟಿ ಆಯೋಜಿಸಲಾಗಿತ್ತು. ಆದರೆ, ಪಾರ್ಟಿ ನಡೆಯುವ ಸಮಯಕ್ಕೆ ಸರಿಯಾಗಿ ಅಲ್ಲಿಗೆ ನಾಯಿಯೊಂದು ಬಂದಿದೆ. ನಾಯಿಯನ್ನು ಹೊರಕ್ಕೆ ಓಡಿಸಲು ಹೋದ ಉದಯ್ ಕುಮಾರ್ ನಾಯಿ ಹಿಂದೇಯೇ ಜೋರಾಗಿ ಓಡಿದ್ದಾನೆ. ನಾಯಿಯನ್ನು ಅಟ್ಟಾಡಿಸಿಕೊಂಡು ಓಡುವಾಗ ಕಾಲು ಜಾರಿ, ತೆರೆದ ಕಿಟಕಿಯಿಂದ ರಸ್ತೆಯ ಕಡೆಗೆ ಬಿದ್ದಿದ್ದಾನೆ. ಈ ದೃಶ್ಯಗಳು ಹೋಟೆಲ್ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮೂರನೇ ಮಹಡಿಯಿಂದ ಗೆಳೆಯ ಏಕಾಏಕಿ ಕೆಳಗೆ ಬಿದ್ದಿದ್ದನ್ನು ನೋಡಿ ನೋಡಿ ಇತರ ಗೆಳೆಯರು ಕಂಗಾಲಾಗಿದ್ದಾರೆ. ಮೂರನೇ ಮಹಡಿಯಿಂದ ಅವಸರಲ್ಲಿ ಕೆಳಗೆ ಓಡಿ ಹೋಗಿ ನೋಡುವುದರಲ್ಲೇ ಉದಯ್ ಸಾವನ್ನಪ್ಪಿದ್ದಾನೆ. ಮೃತ ವ್ಯಕ್ತಿಯ ಶವವನ್ನು ತೆಲಂಗಾಣದ ಗಾಂಧಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ತೆಲಂಗಾಣ ಪೊಲೀಸರು ತಿಳಿಸಿದ್ದಾರೆ.
ಬರ್ತಡೇ ಪಾರ್ಟಿ ದಿನವೇ ದುರಂತ: ಇನ್ನು ಬರ್ತಡೇ ಪಾರ್ಟಿ ದಿನವೇ ದುರಂತವೊಂದು ನಡೆದು ಹೋಗಿದೆ. ಮೂರನೇ ಮಹಡಿಯಿಂದ ಉದಯ್ ಕೆಳಗೆ ಬೀಳುತ್ತಿರುವ ದೃಶ್ಯ ಭಯಾನಕವಾಗಿದೆ. ಮಹಡಿಯಲ್ಲಿನ ದೊಡ್ಡ ಕಿಟಕಿಯಿಂದ ಉದಯ್ ಕೆಳಕ್ಕೆ ಬಿದ್ದಿದ್ದಾನೆ. ನಾಯಿ ಓಡಿಸಲು ಜೋರಾಗಿ ಓಡಿ ಹೋಗಿದ್ದು, ನಿಯಂತ್ರಣ ಸಿಕ್ಕಿಲ್ಲ. ನಾಯಿ ಮಹಡಿಯಲ್ಲಿ ಬಲಕ್ಕೆ ತಿರುಗಿ ತಪ್ಪಿಸಿಕೊಂಡಿದೆ. ಉದಯ್ ಕೆಳಕ್ಕೆ ಬಿದಿದ್ದಾನೆ.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ












Click it and Unblock the Notifications