ಯೋಗಿಯಿಂದಾಗಿ ಗ್ರಾಮಸ್ಥರಿಗೆ ಸೋಪು ಶಾಂಪೂ ಭಾಗ್ಯ!
ಖುಷಿನಗರ್ (ಉತ್ತರಪ್ರದೇಶ), ಮೇ 27 : ಹಳ್ಳಿಗೆ ಮುಖ್ಯಮಂತ್ರಿ ಬರುತ್ತಾರೆಂದರೆ ಊರು ಇದ್ದಕ್ಕಿದ್ದಂತೆ ಶುಭ್ರವಾಗುತ್ತದೆ. ರಸ್ತೆಗಳಿಗೆ ಡಾಂಬರು ಬಳಿಯಲಾಗುತ್ತದೆ, ಕಿತ್ತುಹೋದ ಗೋಡೆಗಳು ಬಣ್ಣ ಕಾಣುತ್ತವೆ. ಆದರೆ, ಅವರನ್ನು ಭೇಟಿಯಾಗಲು ಬರುವ ಜನರು ಸ್ವಚ್ಛವಾಗಿರಲೆಂದು ಸೋಪು, ಶಾಂಪೂ ನೀಡಿದ್ದನ್ನು ಎಲ್ಲಾದರೂ ಕೇಳಿದ್ದೀರಾ?
ಹೌದು, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬರುವ ಮುನ್ನ, ಅವರನ್ನು ಭೇಟಿಯಾಗುವ ಜನರು ಸ್ವಚ್ಛವಾಗಿರಲೆಂದು ಮತ್ತು ಗಬ್ಬು ನಾರದಿರಲೆಂದು ಅವರಿಗೆಲ್ಲ ಸೋಪು ಮತ್ತು ಶಾಂಪೂ ಜಿಲ್ಲಾಡಳಿತ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.

ಮುಸಾಹರ್ ಜನಾಂಗದವರ ಮಕ್ಕಳಿಗೆ ಲಸಿಕೆ ಹಾಕುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅವರು ಹಳ್ಳಿಗೆ ಆಗಮಿಸುವ ಮೊದಲೇ ರಸ್ತೆಗಳು ಮಟ್ಟಸವಾದವು, ಶೌಚಾಲಯಗಳು ಲಕಲಕ ಅಂದವು, ಬೀದಿಗಳು ಝಗಮಗ ಅಂದವು. ಜೊತೆಗೆ ಅವರನ್ನು ಭೇಟಿಯಾಗುವ ಜನರೂ ಘಮಘಮಿಸುವಂತಾದರು.
ಹೀಗೆ ಮಾಡಿರುವುದು ಕೆಲವರ ಕೆಂಗಣ್ಣಿಗೆ ಗುರಿಯಾಗಿದೆ. ಗ್ರಾಮಸ್ಥರಿಗೆ ಸೋಪು, ಶಾಂಪೂ ನೀಡಿದ್ದಕ್ಕೆ ವಿವಾದದ ಬಣ್ಣ ಹಚ್ಚುತ್ತಿದ್ದಾರೆ. ಆದರೆ, ಯೋಗಿ ಬೆಂಬಲಿಗರು, ಇದರಲ್ಲಿ ತಪ್ಪೇನು, ಹಳ್ಳಿಗರು ಸ್ವಚ್ಛವಾಗಿ ಕಂಡರೆ ಯಾಕೆ ವಿವಾದ ಎಬ್ಬಿಸಬೇಕು ಎಂದು ವಿವಾದವನ್ನು ತಣ್ಣಗಾಗಿಸಲು ಯತ್ನಿಸುತ್ತಿದ್ದಾರೆ.
ಒಟ್ಟಿನಲ್ಲಿ ಯೋಗಿ ಏನು ಮಾಡಿದರೂ ಸುದ್ದಿಯೇ. ರೋಡ್ ರೋಮಿಯೋಗಳನ್ನು ಅಟ್ಟಿಸಿದರೂ ಸುದ್ದಿ, ಗೋಹತ್ಯೆ ನಿಲ್ಲಿಸಿದರೂ ಸುದ್ದಿ, ರೈತರ ಸಾಲ ಮನ್ನಾ ಮಾಡಿದರೂ ಸುದ್ದಿ, ಕರ್ನಾಟಕಕ್ಕೆ ಬರುತ್ತಾರೆಂದರೂ ಸುದ್ದಿಯೆ. ಇತ್ತೀಚೆಗೆ ಹತನಾದ ಬಿಎಸ್ಎಫ್ ಯೋಧನ ಮನೆಗೆ ಹೋದಾಗ ಆ ಮನೆಗೆ ಸೋಫಾ ತರಿಸಿದ್ದು ಕೂಡ ಭಾರೀ ಸುದ್ದಿಯಾಗಿತ್ತು.
-
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral












Click it and Unblock the Notifications