ಕಾಶಿ, ಮಥುರಾ ದೇವಸ್ಥಾನಗಳನ್ನು ಹಿಂದೂಗಳ ವಶಕ್ಕೆ ಪಡೆದುಕೊಳ್ಳುತ್ತೇವೆ: ವಿಎಚ್ಪಿ
ವಿಎಚ್ಪಿ ಕಾಶಿ, ಮಥುರಾ ಪುರಾತನ ದೇವಸ್ಥಾನಗಳನ್ನು ಹಿಂದೂಗಳ ವಶಕ್ಕೆ ಪಡೆದುಕೊಳ್ಳುತ್ತೇವೆ ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಹೇಳಿದ್ದಾರೆ. ಕಾಶಿ ವಿಶ್ವನಾಥ ದೇವಸ್ಥಾನದ ಮೂಲ ಸ್ಥಳಗಳು ಮತ್ತು ಮಥುರಾದ ಶ್ರೀಕೃಷ್ಣನ ಜನ್ಮಸ್ಥಳವನ್ನು ಕಾನೂನು ಮತ್ತು ಸಂವಿಧಾನದ ಚೌಕಟ್ಟಿನೊಳಗೆ ಶಾಂತಿಯುತ ಮಾರ್ಗಗಳ ಮೂಲಕ ಹಿಂಪಡೆಯಲು ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಶ್ರಮಿಸಲಿದೆ ಎಂದು ಅದರ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಶನಿವಾರ ಹೇಳಿದ್ದಾರೆ.
ಮಥುರಾದಲ್ಲಿ ಕೃಷ್ಣಜನ್ಮಸ್ಥಾನ ದೇವಲಯಕ್ಕೆ ಹೊಂದಿಕೊಂಡಂತೆ ಮಸೀದಿ ನಿರ್ಮಿಸಲಾಗಿದೆ. ಕಾಶಿ ವಿಶ್ವನಾಥ ದೇವಾಲಯಕ್ಕೆ ಹೊಂದಿಕೊಂಡಂತೆ ಮಸೀದಿ ನಿರ್ಮಿಸಲಾಗಿದೆ. ರಾಮ ಮಂದಿರ ಹೋರಾಟದಂತೆಯೇ, ಮಥುರಾ ಮತ್ತು ಕಾಶಿ ದೇವಸ್ಥಾನಗಳನ್ನು ಶಾಂತಿಯುತವಾಗಿ ಹಿಂದೂಗಳ ವಶಕ್ಕೆ ಪಡೆಯಲಾಗುತ್ತದೆ ಎಂದು ವಿಎಚ್ಪಿ ಹೇಳಿದೆ.
ಆದರೆ, ಪ್ರಕರಣಗಳು ನ್ಯಾಯಾಲಯದಲ್ಲಿರುವುದರಿಂದ ಎರಡೂ ಕಡೆಯವರು ನ್ಯಾಯಾಲಯದ ತೀರ್ಪಿಗಾಗಿ ಕಾಯುವುದು ಸೂಕ್ತ ಎಂದು ಅವರು ಹೇಳಿದರು. ಕಾಂಚೀಪುರಂನಲ್ಲಿ ನಡೆಯುತ್ತಿರುವ ವಿಎಚ್ಪಿ ಕೇಂದ್ರೀಯ ಆಡಳಿತ ಮಂಡಳಿ ಸಭೆಯ ಸ್ಥಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರ್, ಇತ್ತೀಚೆಗೆ ಭಾರತದಾದ್ಯಂತ "ಧಾರ್ಮಿಕ ಮತಾಂಧರು" ಎಸೆದಿರುವ ಹಿಂಸಾಚಾರ ಮತ್ತು ಆಸ್ತಿಗಳ ನಾಶ ಮತ್ತು ಪೊಲೀಸರ ಮೇಲೆ ದಾಳಿಯನ್ನು ವಿಹೆಚ್ಪಿ ಖಂಡಿಸುತ್ತದೆ ಎಂದು ಹೇಳಿದರು. ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ಅವರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ದೇಶ ವಿರೋಧಿ ಗುಂಪುಗಳಿಂದ ಹಿಂಸಾಚಾರ
"ಅವರು (ನೂಪುರ್ ಶರ್ಮಾ ಹೇಳಿಕೆಗೆ ಪ್ರತಿಯಾಗಿ) ತಲೆಗಳನ್ನು ಕತ್ತರಿಸುವುದಾಗಿ ಬೆದರಿಕೆ ಹಾಕಿದರು. ಕಣ್ಣುಗಳನ್ನು ಕಿತ್ತುಹಾಕುವುದಾಗಿ ಹೇಳಿದರು ಮತ್ತು ಹಿಂದೂಗಳ ಆಸ್ತಿಯನ್ನು ಹಾನಿಗೊಳಿಸಿದರು. ಶತ್ರು ದೇಶದ ಪರ ಪ್ರಚಾರ ಮತ್ತು ಕೆಲವು ದೇಶ ವಿರೋಧಿ ಗುಂಪುಗಳಿಂದ ಹಿಂಸಾಚಾರ ಮಾಡಿದರು" ಎಂದು ವಿಎಚ್ಪಿ ಕಾರ್ಯಾಧ್ಯಕ್ಷರು ಹೇಳಿದ್ದಾರೆ. "ವಿಶ್ವ ಹಿಂದೂ ಪರಿಷತ್ ಇಂತಹ ಹೇಯ ಕೃತ್ಯಗಳನ್ನು ಖಂಡಿಸುತ್ತದೆ ಮತ್ತು ರಾಜ್ಯ ಸರ್ಕಾರಗಳು ಈ ದುಷ್ಕರ್ಮಿಗಳನ್ನು ಕಬ್ಬಿಣದ ಹಸ್ತದಿಂದ ನಿಭಾಯಿಸಬೇಕು ಮತ್ತು ಈ ಮತಾಂಧತೆಯಿಂದ ಪ್ರಭಾವಿತರಾದ ಹಿಂದೂಗಳಿಗೆ ನ್ಯಾಯವನ್ನು ಒದಗಿಸಬೇಕೆಂದು ನಿರೀಕ್ಷಿಸುತ್ತದೆ" ಎಂದು ಅವರು ಹೇಳಿದರು. ಅಲ್ಲದೆ, ಹಿಂದೂ ಸಮಾಜವು ತಮ್ಮ ಹಕ್ಕುಗಳಿಗಾಗಿ ನಿಲ್ಲಬೇಕು ಮತ್ತು ಹಿಂಸಾಚಾರವನ್ನು ವಿರೋಧಿಸಬೇಕು ಎಂದು ಅವರು ಕರೆ ನೀಡಿದರು.

'ಷರಿಯಾ ಕಾನೂನುಗಳಿಂದಲ್ಲ'
"ಭಾರತವು ಅದರ ಸಂವಿಧಾನದಿಂದ ನಡೆಸಲ್ಪಡುತ್ತದೆ. ಷರಿಯಾ ಕಾನೂನುಗಳಿಂದಲ್ಲ. ಯಾವುದೇ ಗುಂಪಿಗೆ ಶಿಕ್ಷೆಯನ್ನು ಘೋಷಿಸಲು ಯಾರನ್ನಾದರೂ ತಪ್ಪಿತಸ್ಥರೆಂದು ಘೋಷಿಸುವ ಹಕ್ಕಿಲ್ಲ" ಎಂದು ಅವರು ಪ್ರತಿಪಾದಿಸಿದರು. ರಾಜ್ಯ ಸರ್ಕಾರಗಳ ಕಪಿಮುಷ್ಠಿಯಿಂದ ದೇವಾಲಯಗಳನ್ನು ಮುಕ್ತಗೊಳಿಸಲು ಮತ್ತು ದೊಡ್ಡ ಹಿಂದೂ ಸಮಾಜಕ್ಕೆ ಆಡಳಿತವನ್ನು ಹಸ್ತಾಂತರಿಸಲು VHP ತನ್ನ ಆಂದೋಲನವನ್ನು ತೀವ್ರಗೊಳಿಸುತ್ತದೆ. ದೇವಾಲಯಗಳಿಂದ ಬರುವ ಆದಾಯವನ್ನು ಹಿಂದೂ ದೇವಾಲಯಗಳ ಪಾಲನೆಗಾಗಿ ಮತ್ತು ಹಿಂದೂ ಧರ್ಮದ ಉದ್ದೇಶಕ್ಕಾಗಿ ಮಾತ್ರ ಬಳಸಬೇಕು ಮತ್ತು ಸರ್ಕಾರದ ಆಡಳಿತ ವೆಚ್ಚಕ್ಕೆ ಬಳಸಬಾರದು ಎಂದು ಅವರು ಹೇಳಿದರು.

ವಿನಾಶಕ್ಕೆ ಯೋಜಿತ ಪಿತೂರಿ
ನೆರೆಯ ಕಾಂಚೀಪುರಂ ಜಿಲ್ಲೆಯ ತುಲಸಪುರಂ ಗ್ರಾಮದ ದೇವಸ್ಥಾನವೊಂದಕ್ಕೆ ಶುಕ್ರವಾರ ಭೇಟಿ ನೀಡಿದ ಅಲೋಕ್ ಕುಮಾರ್, ದೇವಾಲಯದ ಒಳಗಿದ್ದ 22 ದೇವತೆಗಳನ್ನು ಧ್ವಂಸಗೊಳಿಸಿರುವುದನ್ನು ಗಮನಿಸಿದರು. "ಇಂತಹ ಕೃತ್ಯವನ್ನು ಮಾನಸಿಕ ಅಸ್ಥಿರ ವ್ಯಕ್ತಿಗಳಾಗಲಿ ಅಥವಾ ಮದ್ಯಪಾನ ಮಾಡಿದವರಿಂದಾಗಲಿ ಮಾಡಲಾಗುವುದಿಲ್ಲ. ವಿನಾಶಕ್ಕೆ ಯೋಜಿತ ಕಾರ್ಯವಿಧಾನವಿದೆ. ದೇವತೆಗಳನ್ನು ಪೀಠದಿಂದ ಕಿತ್ತೊಗೆದು ಹಾನಿಗೊಳಿಸಿ ಬೀದಿಗಳಲ್ಲಿ ಎಸೆಯಲಾಯಿತು" ಎಂದು ಅವರು ಹೇಳಿದರು. ಅಲೋಕ್ ಕುಮಾರ್ ತಮಿಳುನಾಡು ಸರ್ಕಾರ ನಿಜವಾದ ಅಪರಾಧಿಗಳನ್ನು ಕಾನೂನು ಕ್ರಮಕ್ಕೆ ತರಬೇಕು ಎಂದು ಒತ್ತಾಯಿಸಿದರು.

ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ
ಟಿವಿ ಕಾರ್ಯಕ್ರಮದಲ್ಲಿ ಪ್ರವಾದಿ ಮಹಮ್ಮದ್ ವಿರುದ್ಧ ಹೇಳಿಕೆ ನೀಡಿದ್ದ ಬಿಜೆಪಿ ವಕ್ತಾರರಾಗಿದ್ದ ನೂಪುರ್ ಶರ್ಮಾ ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಮುಸ್ಲಿಂ ರಾಷ್ಟ್ರಗಳು ಸೇರಿದಂತೆ ದೇಶದ ಹಲವಾರು ರಾಜ್ಯಗಳಲ್ಲಿ ಪ್ರತಿಭಟನೆ ಮಾಡಲಾಯಿತು. ಕೆಲವೆಡೆ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿ ಸಾವು ನೋವುಗಳು ಸಂಭವಿಸಿವೆ. ನೂಪುರ್ ಶರ್ಮಾಗೆ ಬೆದರಿಕೆ ಕರೆಗಳೂ ಬಂದಿವೆ. ಬಿಜೆಪಿ ನೂಪುರ್ ಶರ್ಮಾ ಅವರನ್ನು ಅಮಾನತುಗೊಳಿಸಿದೆ. ಆದರೆ ಅವರ ಬಂಧಿಸುವಂತೆ ಒತ್ತಾಯಗಳು ಹೆಚ್ಚಾಗಿದ್ದವು.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications