ಉತ್ತರಪ್ರದೇಶ ಸರ್ವೇ: ಎಸ್ಪಿ-ಕಾಂಗ್ರೆಸ್ ಮೈತ್ರಿಯಿಂದ ಬಿಜೆಪಿಗೆ ಕಷ್ಟಕಷ್ಟ
ಇಂಡಿಯಾ ಟುಡೇ ಜನವರಿ 2017ರಲ್ಲಿ ನಡೆಸಿದ ಮತ್ತೊಂದು ಚುನಾವಣಾಪೂರ್ವ ಸಮೀಕ್ಷೆಯ ಪ್ರಕಾರ ಎಸ್ಪಿ-ಕಾಂಗ್ರೆಸ್ ಮೈತ್ರಿಕೂಟದಿಂದ ಬಿಜೆಪಿಗೆ ಅಲ್ಪ ಹಿನ್ನಡೆಯಾಗುವ ಸಾಧ್ಯತೆಯಿದೆ.
ಇದೇ ಫೆಬ್ರವರಿ ಹನ್ನೊಂದರಿಂದ ಆರಂಭವಾಗಲಿರುವ ಏಳು ಹಂತದ ಬಹು ನಿರೀಕ್ಷಿತ ಉತ್ತರಪ್ರದೇಶದ ವಿಧಾನಸಭಾ ಚುನಾವಣೆಗೆ ಮುನ್ನ ಇಂಡಿಯಾ ಟುಡೇ ನಡೆಸಿದ ಮತ್ತೊಂದು ಚುನಾವಣಾಪೂರ್ವ ಸಮೀಕ್ಷೆಯ ಫಲಿತಾಂಶ ಹೊರಬಿದ್ದಿದೆ.
ಸಮೀಕ್ಷೆಯ ಪ್ರಕಾರ, ಯಾದವೀ ಕುಟುಂಬ ಕಲಹದಿಂದ 'ಮನೆಯೊಂದು ಮೂರು ಬಾಗಿಲಾ'ಗಿದ್ದ ಸಮಾಜವಾದಿ ಪಕ್ಷದ ಸ್ಥಿತಿ, ಕಾಂಗ್ರೆಸ್ ಜೊತೆಗಿನ ಮೈತ್ರಿಯಿಂದ ದಿನದಿಂದ ದಿನಕ್ಕೆ ಸುಧಾರಿಸುತ್ತಿದೆ. (ಉತ್ತರಪ್ರದೇಶಕ್ಕೆ ಅಖಿಲೇಶ್ ಸೂಕ್ತ ಸಿಎಂ)
ಇತ್ತ ಎಸ್ಪಿ-ಕಾಂಗ್ರೆಸ್ ಮೈತ್ರಿಯಿಂದ ಬಿಜೆಪಿ ಮತ್ತು ಬಹುಜನ ಸಮಾಜಪಾರ್ಟಿಯ ಪರವಾಗಿದ್ದ ಜನರ ಒಲವು ಮೈತ್ರಿಕೂಟದತ್ತ ತಿರುಗುತ್ತಿರುವುದು ಸಮೀಕ್ಷೆಯ ವೇಳೆ ವ್ಯಕ್ತವಾದ ಜನಾಭಿಪ್ರಾಯ ಎಂದು ಇಂಡಿಯಾ ಟುಡೇ ಹೇಳಿದೆ.
ಇಂಡಿಯಾ ಟುಡೇ-ಆಕ್ಸಿಸ್-ಮೈ ಇಂಡಿಯಾ ಜಂಟಿಯಾಗಿ ಜನವರಿ 2017ರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, ಸರಳ ಬಹುಮತ ಬಿಜೆಪಿಗೆ ಸಿಗುವ ಸಾಧ್ಯತೆ ಹೆಚ್ಚು ಎಂದು ಹೇಳುತ್ತಿದ್ದ ಈ ಹಿಂದಿನ ಸಮೀಕ್ಷೆಗಳು, ಎಸ್ಪಿ - ಕಾಂಗ್ರೆಸ್ ಮೈತ್ರಿಯಿಂದ ಬಿಜೆಪಿಗೆ ಕನಿಷ್ಠ 25 ಸೀಟು ನಷ್ಟವಾಗುವ ಸಾಧ್ಯತೆಯಿದೆ ಎಂದು ಹೇಳುತ್ತಿದೆ.
ಸಮೀಕ್ಷೆಯ ಪ್ರಕಾರ ಎಸ್ಪಿ-ಕಾಂಗ್ರೆಸ್ ಮೈತ್ರಿಯಿಂದ ಶೇಕಡಾವಾರು ಮತಗಳಿಕೆಯಲ್ಲಿ ಬಿಜೆಪಿಗೆ ನಷ್ಟವಾಗುತ್ತಿಲ್ಲ. ಆದರೆ, ಮೈತ್ರಿಯಿಂದ ಬಿಎಸ್ಪಿಗೆ ತೀವ್ರ ಏಟು ಬೀಳುವ ಸಾಧ್ಯತೆಯಿದೆ. ಸಮೀಕ್ಷೆಯ ಹೈಲೆಟ್ಸ್ ಮುಂದೆ ಓದಿ..

ಶಿವಪಾಲ್ ಯಾದವ್ ಹೊಸ ಪಕ್ಷ
ಮುಲಾಯಂ ಸಿಂಗ್ ಯಾದವ್ ಸಹೋದರ ಶಿವಪಾಲ್ ಯಾದವ್ ಮಾರ್ಚ್ ಹನ್ನೊಂದರಂದು ಹೊಸ ಪಕ್ಷ ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ಜೊತೆಗೆ, ಅಖಿಲೇಶ್ ಅದು ಹೇಗೆ ಸರಕಾರ ರಚಿಸುತ್ತಾರೆ ನೋಡುತ್ತೇನೆಂದು ಸವಾಲೆಸೆದಿದ್ದಾರೆ. ಈ ಬೆಳವಣಿಗೆ ಸಮಾಜವಾದಿ ಪಕ್ಷಕ್ಕೆ ತಲೆನೋವಾಗಿ ಪರಿಣಮಿಸುವ ಸಾಧ್ಯತೆಯಿದೆ.

ಕಳೆದ ನಾಲ್ಕು ತಿಂಗಳಲ್ಲಾದ ಬದಲಾವಣೆಗಳು
ಕಳೆದ ನಾಲ್ಕು ತಿಂಗಳಿನಿಂದ ನಡೆಸಿದ ಮೂರು ಸಮೀಕ್ಷೆಯಲ್ಲಿ ಗಮನಾರ್ಹ ಬದಲಾವಣೆಯಾಗಿದೆ. ಅದು ಹೀಗಿದೆ..
ಅಕ್ಟೋಬರ್ 16
ಬಿಜೆಪಿ : 170-183
ಎಸ್ಪಿ - ಕಾಂಗ್ರೆಸ್ : 102-115
ಬಿಎಸ್ಪಿ : 115-124
ಡಿಸೆಂಬರ್ 16
ಬಿಜೆಪಿ : 206-216
ಎಸ್ಪಿ - ಕಾಂಗ್ರೆಸ್ : 97-106
ಬಿಎಸ್ಪಿ : 79-85
ಜನವರಿ 17
ಬಿಜೆಪಿ : 180-191
ಎಸ್ಪಿ - ಕಾಂಗ್ರೆಸ್ : 168-178
ಬಿಎಸ್ಪಿ : 39-43

ಯಾರು ಹಿತವರು ನಿಮಗೆ ಸಿಎಂ ಹುದ್ದೆಗೆ?
ಅಖಿಲೇಶ್ ಯಾದವ್ - ಶೇ. 35
ರಾಜನಾಥ್ ಸಿಂಗ್ - ಶೇ. 21
ಮಾಯಾವತಿ - ಶೇ. 20
ಯೋಗಿ ಆದಿತ್ಯನಾಥ್ - ಶೇ. 14
ಕೆ ಪಿ ಮಲ್ರಿಯಾ- ಶೇ. 2
ಪ್ರಿಯಾಂಕ ಗಾಂಧಿ ವಾಧ್ರಾ - ಶೇ. 1

ಶೇಕಡವಾರು ಬದಲಾವಣೆ
ಎಸ್ಪಿ ಮತ್ತು ಕಾಂಗ್ರೆಸ್ ಮೈತ್ರಿಯ ನಂತರ, ಕಾಂಗ್ರೆಸ್ ಹೆಚ್ಚುವರಿ ಶೇ. 7 ಮತಗಳಿಸುವ ಸಾಧ್ಯತೆಯಿದೆ. ಜನವರಿಯಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ಎಸ್ಪಿಗೆ ಶೇ. 26 ಮತಸಿಗುವ ಸಾಧ್ಯತೆಯಿದೆ. ಬಿಜೆಪಿಯ ಮತಗಳಿಕೆಯ ಪ್ರಮಾಣ ಶೇ. 33 ರಿಂದ ಶೇ. 34.8ರಷ್ಟು ಏರುವ ಸಾಧ್ಯತೆಯಿದೆ.

ಮಾಯಾವತಿ ಪಕ್ಷಕ್ಕೆ ತೀವ್ರ ಹಿನ್ನಡೆ ಸಾಧ್ಯತೆ
ಅಖಿಲೇಶ್ - ರಾಹುಲ್ ಗಾಂಧಿ ಮೈತ್ರಿಯ ನಂತರ ಉತ್ತರಪ್ರದೇಶದ ಬಹುತೇಕ ಕಡೆ ಎಸ್ಪಿ- ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿಯಾಗುವ ಸಾಧ್ಯತೆಯಿದ್ದು. ಮಾಯಾವತಿ ಪಕ್ಷಕ್ಕೆ ತೀವ್ರ ಹಿನ್ನಡೆಯಾಗುವ ಸಾಧ್ಯತೆಯಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.
-
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್












Click it and Unblock the Notifications