ಉತ್ತರಾಖಂಡ ಕಾಡ್ಗಿಚ್ಚಿಗೆ ಮೂಲ ಕಾರಣ ಯಾರು?
ಡೆಹರಾಡೂನ್, ಮೇ, 02: ಬೇಸಿಗೆ ಧಗೆ ಏರುತ್ತಿದೆ. ಎಲ್ಲೆಲ್ಲೂ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಅರಣ್ಯಗಳು ಬೆಂಕಿಗೆ ಆಹುತಿಯಾಗುತ್ತಿವೆ. ಕಾಡ್ಗಿಚ್ಚು ಆವರಿಸಿ ಸಾವಿರಾರು ಹೆಕ್ಟೇರ್ ಅರಣ್ಯ ಪ್ರದೇಶ ಬೆಂಕಿಗೆ ನಾಶವಾಗುತ್ತಿದೆ.
ಆದರೆ ಈ ಎಲ್ಲ ಅವಘಡಗಳಿಗೆ ಕಾರಣ ಯಾರು? ಉತ್ತರ ಸರಳ, ನಮ್ಮ ದುರಾಸೆ. ಉತ್ತರಾಖಂಡದ ಅರಣ್ಯ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ಕಾಣಿಸಿಕೊಂಡಿರುವ ಕಾಡ್ಗಿಚ್ಚು ನಿಯಂತ್ರಣ ಮಾಡಲು ಭಾರತೀಯ ಸೇನೆ ಶ್ರಮಿಸುತ್ತಿದೆ.[ಸೈನ್ಯದ ಸಾಹಸ: ನಿಯಂತ್ರಣಕ್ಕೆ ಬಂದ ಉತ್ತರಾಖಂಡ ಕಾಡ್ಗಿಚ್ಚು]
ಕಾಡ್ಗಿಚ್ಚು ಕಾಣಿಸಿಕೊಳ್ಳಲು ಬೇಸಿಗೆ ಧಗೆ ಒಂದೇ ಕಾರಣವಲ್ಲ. ಇದರ ಮೂಲ ಇರುವುದು ಟಿಂಬರ್ ಮಾಫಿಯಾದಲ್ಲಿ. ಸಾಮಾಜಿಕ ಜಾಲತಾಣಗಳಲ್ಲೂ ಟಿಂಬರ್ ಮಾಫಿಯಾದ ಬಗ್ಗೆ ಮಾತುಗಳು ಕೇಳಿಬರುತ್ತಿವೆ.

ವಾರದಲ್ಲಿ 398 ಪ್ರಕರಣ
ಕಳೆದ 7 ದಿನಗಳಲ್ಲಿ 398 ಕಡೆ ಬೆಂಕಿ ಕಾಣಿಸಿಕೊಂಡಿದೆ.ಅರಣ್ಯವನ್ನು ನಾಶ ಮಾಡುತ್ತಿರುವ ಬೆಂಕಿ ನಂದಿಸಲು ಸೇನೆ ಹರಸಾಹಸ ಮಾಡುತ್ತಿದೆ.

ಕಾಡು ಪ್ರಾಣಿಗಳ ಸಂತತಿ ನಾಶ
ಕಾಡು ಪ್ರಾಣಿಗಳ ಬದುಕಿಗೆ ಕೊಳ್ಳಿ ಇಟ್ಟಿರುವ ಬೆಂಕಿ ತನ್ನ ವ್ಯಾಪ್ತಿಯನ್ನು ವಿಸ್ತಾರ ಮಾಡುತ್ತಲೇ ಸಾಗಿದೆ.

ಟಿಂಬರ್ ಮಾಫಿಯಾ
ಕಾಡಿನಲ್ಲಿ ಕಾಣಿಸಿಕೊಂಡ ಬೆಂಕಿ ಒಂದೆಡೆ ಮರ ಕಳ್ಳ ಸಾಗಣೆದಾರರಿಗೆ ವರವಾಗಿದೆ. ಒಂದೆಡೆ ಬೆಂಕಿ ವ್ಯಾಪಿಸುತ್ತಿದ್ದರೆ ಇನ್ನೊಂದೆಡೆ ಸಿಕ್ಕ ಸಿಕ್ಕ ಮರಗಳಿಗೆ ಕೊಡಲಿ ಏಟು ಬೀಳುತ್ತಿದ್ದು ಪುಡಿಗಾಸಿಗೆ ಮಾರಿಕೊಳ್ಳಲಾಗುತ್ತಿದೆ.

ಮುನ್ನೆಚ್ಚರಿಕೆ ಕ್ರಮ ಇಲ್ಲ
ಸ್ಥಳೀಯ ಬಡ ಜನತೆಯನ್ನು ಬಳಸಿಕೊಳ್ಳುವ ಟಿಂಬರ್ ಮಾಫಿಯಾ ಮರ ಕಳ್ಳ ಸಾಗಣೆಯನ್ನು ಅವ್ಯಾಹತವಾಗಿ ನಡೆಸಿಕೊಂಡು ಬಂದಿದೆ. ಕಡಿದು ಉಳಿದ ಮರದ ದಿಮ್ಮಿಗಳು ಬೆಂಕಿ ಹೊತ್ತಿಕೊಳ್ಳಲು ಮೂಲ ಕಾರಣವಾದವು.

ಅಂಕಿ ಅಂಶ
398 ಬೆಂಕಿ ಪ್ರಕರಣದಲ್ಲಿ 674 ಹೆಕ್ಟೇರ್ ಅರಣ್ಯ ಸಂಪತ್ತು ನಾಶವಾಗಿದೆ. ಜನವಸತಿ ಪ್ರದೇಶಗಳಿಗೂ ಸಹ ಬೆಂಕಿ ವ್ಯಾಪಿಸಿದೆ.

ಪ್ರವಾಸೋದ್ಯಮಕ್ಕೂ ಹೊಡೆತ
ಉತ್ತರಾಖಂಡದ ಪ್ರವಾಸೋದ್ಯಮ ಕ್ಷೇತ್ರಕ್ಕೂ ಕಾಡ್ಗಿಚ್ಚು ಆಘಾತ ನೀಡಿದ್ದು ಪ್ರವಾಸಿಗರು ಅನಿವಾರ್ಯವಾಗಿ ಹೆಜ್ಜೆ ಹಿಂದಕ್ಕೆ ಹಾಕುವಂತೆ ಮಾಡಿದೆ.












Click it and Unblock the Notifications