ಗೋರಖಧಾಮ: ರೈಲುಗಳ ಮುಖಾಮುಖಿ-20 ಸಾವು
ಗೋರಖಧಾಮ, ಮೇ 26: ಗೋರಖಧಾಮ, ಮೇ 26: ಉತ್ತರ ಪ್ರದೇಶದಲ್ಲಿ ಭೀಕರ ರೈಲು ದುರಂತ ಸಂಭವಿಸಿದ್ದು, 20 ಮಂದಿ ಪ್ರಯಾಣಿಕರು ಸಾವಿಗೀಡಾಗಿದ್ದಾರೆ. ಗೋರಖಧಾಮ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲು ಗೂಡ್ಸ್ ಟ್ರೈನಿಗೆ ಮುಖಾಮುಖಿಯಾಗಿ ಈ ಅಪಘಾತ ಸಂಭವಿಸಿದೆ.
ಸಂತ
ಕಬೀರ್
ನಗರ
ಜಿಲ್ಲೆಯಲ್ಲಿ
ಛುರೆಬ್
ರೈಲ್ವೆ
ನಿಲ್ದಾಣದಲ್ಲಿ
ಇಂದು
ಬೆಳಗ್ಗೆ
ಈ
ಅಪಘಾತ
ಸಂಭವಿಸಿದ್ದು
ಸಾವಿನ
ಸಂಖ್ಯೆ
ಇನ್ನೂ
ಹೆಚ್ಚಾಗುವ
ಭೀತಿಯಿದೆ.
ಈ
ಮಧ್ಯೆ
ಘಟನೆಯ
ಬಗ್ಗೆ
ಟ್ವಿಟ್
ಮಾಡಿರುವ
ಬಿಜೆಪಿ
ಅಧ್ಯಕ್ಷ
ರಾಜನಾಥ್
ಸಿಂಗ್
ಅವರು,
ರೈಲು
ದುರಂತದಲ್ಲಿ
ಮೃತಪಟ್ಟವರಿಗೆ
ಸಂತಾಪ
ಸೂಚಿಸಿದ್ದಾರೆ.
My
heartfelt
condolences
to
the
members
of
the
bereaved
families.
I
wish
for
speedy
recovery
of
those
who
got
injured
in
the
train
accident.
—
Rajnath
Singh
(@BJPRajnathSingh)
May
26,
2014
ಎಕ್ಸ್ಪ್ರೆಸ್
ರೈಲು
ದುರಂತದಲ್ಲಿ
20ಕ್ಕೂ
ಹೆಚ್ಚು
ಮಂದಿ
ಮೃತಪಟ್ಟ
ಸುದ್ದಿ
ಕೇಳಿದ
ನಿಯೋಜಿತ
ಪ್ರಧಾನಿ
ನರೇಂದ್ರ
ಮೋದಿ
ಅವರು
ತೀವ್ರ
ಸಂತಾಪ
ಸೂಚಿಸಿದ್ದಾರೆ.
ದೆಹಲಿಯಲ್ಲಿ
ಈ
ಕುರಿತಂತೆ
ಮಾತನಾಡಿದ
ಅವರು,
ದುರಂತದಲ್ಲಿ
ಸಾವನ್ನಪ್ಪಿರುವ
ಕುಟುಂಬಗಳು
ಮತ್ತು
ಗಾಯಾಳುಗಳ
ಕುಟುಂಬಗಳಿಗೆ
ಸೂಕ್ತ
ನೆರವು
ನೀಡುವಂತೆ
ರೈಲ್ವೆ
ಇಲಾಖೆಗೆ
ಸೂಚಿಸಿದ್ದಾರೆ.
ಅವರ
ಟ್ವೀಟ್
ಹೀಗಿದೆ:
Spoke
to
the
Cabinet
Secretary.
Asked
him
to
take
an
overview
of
the
situation
&
ensure
timely
assistance
to
those
injured.
—
Narendra
Modi
(@narendramodi)
May
26,
2014
ಗೋರಖಧಾಮ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿ ಪಕ್ಕದಲ್ಲಿ ಹಾದುಹೋಗುತ್ತಿದ್ದ ಸರಕು ಸಾಗಣೆ ರೈಲಿನ ಮೇಲೆ ಬಿದ್ದು ಈ ಅನಾಹುತ ಸಂಭವಿಸಿದೆ. ಒಟ್ಟು 6 ಬೋಗಿಗಳು ಹಳಿತಪ್ಪಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲಿನ ಚಾಲಕ ಮತ್ತು ಸಹಾಯಕ ಚಾಲಕ ಇಬ್ಬರೂ ತೀವ್ರವಾಗಿ ಗಾಯಗೊಂಡಿದ್ದಾರೆ.
ಇಂದು ಬೆಳಗ್ಗೆ ಸುಮಾರು 10 ಗಂಟೆ ವೇಳೆ ಸಂತ ಕುಬೇರ ನಗರದ ಛುರೆಬ್ ನಿಲ್ದಾಣಕ್ಕೆ ವೇಗವಾಗಿ ಬಂದ ಗೋರಖಪುರ ಎಕ್ಸ್ ಪ್ರೆಸ್ ರೈಲು ನಿಂತಿದ್ದ ಗೂಡ್ಸ್ ರೈಲೊಂದಕ್ಕೆ ರಭಸದಿಂದ ಅಪ್ಪಳಿಸಿತು. ಸ್ಥಳದಲ್ಲೇ 20ಕ್ಕೂ ಹೆಚ್ಚಿನ ನತದೃಷ್ಟ ಪ್ರಯಾಣಿಕರು ಮೃತಪಟ್ಟಿದ್ದಾರೆ. ಮೃತರಲ್ಲಿ ಮಹಿಳೆಯರು, ಮಕ್ಕಳೂ ಸೇರಿದ್ದಾರೆ ಎಂದು ಜಿಲ್ಲಾ ದಂಡಾಧಿಕಾರಿ ಭರತ್ ಲಾಲ್ ತಿಳಿಸಿದ್ದಾರೆ.
ಸಹಾಯಕ್ಕೆ
ದೂರವಾಣಿ
ಸಂಖ್ಯೆಗಳು
ಹೀಗಿವೆ:
(Lucknow):
0522-2635639,
0522
2288890
Gorakhpur
helpline
No:
0551
2204893