ಉಪ್ರ ಚುನಾವಣೆ ಪೋಸ್ಟರ್ ಗಳಲ್ಲಿ ಡಿಂಪಲ್-ಪ್ರಿಯಾಂಕಾ ಕಾರುಬಾರು
ಉತ್ತರ ಪ್ರದೇಶ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ಮೈತ್ರಿ ಆಗುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ. ಪೋಸ್ಟರ್ ಗಳಲ್ಲಿ ಡಿಂಪಲ್ ಯಾದವ್ ಹಾಗೂ ಪ್ರಿಯಾಂಕಾ ಗಾಂಧಿ ಭಾವಚಿತ್ರಗಳು ಕಾಣಿಸಿಕೊಳ್ಳುತ್ತಿವೆ
ಭೋಪಾಲ್, ಜನವರಿ 14: ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ಮಧ್ಯೆ ಹೊಂದಾಣಿಕೆ ಮಾತುಗಳೇನೂ ಸದ್ಯಕ್ಕೆ ಕೇಳಿಬರುತ್ತಿಲ್ಲ. ಆದರೆ ಡಿಂಪಲ್ ಯಾದವ್ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಪೋಸ್ಟರ್ ಗಳು ರಾರಾಜಿಸುತ್ತಿವೆ. ಸಮಾಜವಾದಿ ಪಕ್ಷದಲ್ಲಿ ಚಿಹ್ನೆ ವಿಚಾರವಾಗಿ ಗೊಂದಲಗಳಿದ್ದರೂ ಕಾರ್ಯಕರ್ತರಂತೂ ಪ್ರಚಾರ ಆರಂಭಿಸಿಯಾಗಿದೆ.
ಮುಲಾಯಂ ಹಾಗೂ ಅಖಿಲೇಶ್ ಮಧ್ಯೆ ಸೈಕಲ್ ಚಿಹ್ನೆಗಾಗಿ ಕಾದಾಟ ನಡೆದಿದೆ. ಈ ಮಧ್ಯೆ ಅಖಿಲೇಶ್ ಪತ್ನಿ ಡಿಂಪಲ್ ಯಾದವ್ ಭಾವಚಿತ್ರವಿರುವ ಪೋಸ್ಟರ್ ಗಳು ಅಲಹಾಬಾದ್ ನಲ್ಲಿ ಎಲ್ಲೆಲ್ಲೂ ಕಂಡುಬರುತ್ತಿದೆ. ಇನ್ನೂ ಅಸಕ್ತಿಕರ ಸಂಗತಿ ಅಂದರೆ ಡಿಂಪಲ್ ಯಾದವ್ ಭಾವಚಿತ್ರದ ಜೊತೆಗೆ ಸ್ಟಾರ್ ಪ್ರಚಾರಕರಾಗಿ ಪ್ರಿಯಾಂಕಾ ಗಾಂಧಿ ಭಾವಚಿತ್ರವೂ ಕಾಣಿಸಿಕೊಂಡಿದೆ.[ಸಮಾಜವಾದಿ ಪಕ್ಷಕ್ಕೆ ಮುಸ್ಲಿಂ ಮತ ಬೀಳದಿರಲು 4 ಕಾರಣ]

ತುಂಬ ಚರ್ಚೆಯಲ್ಲಿರುವ ನಿರೀಕ್ಷಿತ ಎಸ್ ಪಿ-ಕಾಂಗ್ರೆಸ್ ಮೈತ್ರಿ ಅಧಿಕೃತವಾಗಿ ಘೋಷಣೆಯಾಗುವುದು ದೂರದ ಮಾತಾದರೂ ರಾಜ್ಯದಲ್ಲಿ ಆ ಭಾವನೆಯಂತೂ ದಟ್ಟವಾಗಿದೆ. ಎಸ್ ಪಿ ಒಳಗಿನ ಅಸಮಾಧಾನಕ್ಕೂ ಮುನ್ನವೇ ಅದರಲ್ಲೂ ಸೈಕಲ್ ಚಿಹ್ನೆ ಯಾರಿಗೆ ಸಿಗಬಹುದು ಎಂದು ನಿರ್ಧಾರವಾಗುವ ಮುಂಚೆಯೇ, ಡಿಂಪಲ್ ಯಾದವ್ ಹಾಗೂ ಪ್ರಿಯಾಂಕಾ ವಾದ್ರಾ ಭಾವಚಿತ್ರ ಇರುವ ಪೋಸ್ಟರ್ ನಲ್ಲಿ ಮಹಿಳಾ ಶಕ್ತಿಗೆ ಮತ ಹಾಕಿ ಎಂದು ಕೋರಲಾಗಿದೆ.

ಒಂದು ವೇಳೆ ಎಸ್ ಪಿ-ಕಾಂಗ್ರೆಸ್ ದೋಸ್ತಿಯಾದರೆ ಮೊದಲ ಬಾರಿಗೆ ಪ್ರಿಯಾಂಕಾ ವಾದ್ರಾ ಅಮೇಥಿ-ರಾಯ್ ಬರೇಲಿಯಿಂದ ಅಚೆಗೆ ಚುನಾವಣೆ ಪ್ರಚಾರ ಮಾಡಲಿದ್ದಾರೆ. ಭವಿಷ್ಯದ ನಾಯಕಿಯಾಗಿ ಬಿಂಬಿಸುತ್ತಿರುವ ಪ್ರಿಯಾಂಕಾಗೆ ಈ ಚುನಾವಣೆ ಮೆಟ್ಟಿಲಾಗಿ ಪರಿಣಮಿಸಲಿದೆ. ಇನ್ನು ಡಿಂಪಲ್ ಯಾದವ್ ಕನೌಜ್ ನ ಸಂಸದೆಯಾಗಿದ್ದಾರೆ. ಅವರಿಗೆ ಉತ್ತರ ಪ್ರದೇಶ ಚುನಾವಣೆ ಪ್ರಚಾರಕ್ಕೆ ಹೊಸಬರಲ್ಲ.[ಪುತ್ರ ವ್ಯಾಮೋಹ ನಿರಂತರ: ನನ್ನ ಮಗನೇ ರಾಜ್ಯದ ಮುಂದಿನ ಸಿಎಂ]
ಕಾಂಗ್ರೆಸ್-ಎಸ್ ಪಿ ಮೈತ್ರಿಯಾದರೆ ಈ ಇಬ್ಬರು ಮಹಿಳೆಯರು ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಮೋದಿ-ಅಮಿತ್ ಷಾ ಜೋಡಿಯ ಮೇಲೆ ಇದು ಹೇಗೆ ಪರಿಣಾಮ ಬೀರುತ್ತದೆ ಎಂದು ಕಾದು ನೋಡಬೇಕಾಗಿದೆ.
-
Property: ಕಟ್ಟಡ ಮಾಲೀಕರಿಗೆ ಬಂಪರ್ ಆಫರ್: ಶೇ.15ರವರೆಗಿನ ನಿಯಮ ಉಲ್ಲಂಘನೆ ಸಕ್ರಮಕ್ಕೆ ಜಿಬಿಎ ಅವಕಾಶ! -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ












Click it and Unblock the Notifications