ಯುವ ಜನತೆಗೆ ಸ್ಫೂರ್ತಿ ಮರಿಯಪ್ಪನ್ ತಂಗವೇಲು
ಚೆನ್ನೈ, ಆ.06 : ಬಡತನ, ಕೌಟುಂಬಿಕ ಸಮಸ್ಯೆ, ಅಂಗ ವೈಕಲ್ಯ ಯಾವುದೂ ಮರಿಯಪ್ಪನ್ ತಂಗವೇಲು ಚಿನ್ನದ ಓಟಕ್ಕೆ ಅಡ್ಡಿಯಾಗಿಲ್ಲ. ಇಂದಿನ ಯುವ ಜನರಿಗೆ ಮರಿಯಪ್ಪನ್ ಸ್ಫೂರ್ತಿ, ರಿಯೋ ಒಲಂಪಿಕ್ ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟ ಮೊದಲ ಭಾರತೀಯ ಮರಿಯಪ್ಪನ್.
ತಮಿಳುನಾಡಿನ ಪೆರಿಯುವಡಗಂಪಟ್ಟಿ ಗ್ರಾಮದಲ್ಲಿ ಮರಿಯಪ್ಪನ್ ತಂಗವೇಲು ಜೂನ್ 28, 1995ರಲ್ಲಿ ಜನಿಸಿದರು. ಕೂಲಿ ಕೆಲಸ ಮಾಡಿಕೊಂಡು ತಾಯಿ ಮನೆಯ ಆರು ಮಕ್ಕಳನ್ನು ಸಾಕುತ್ತಿದ್ದರು. ನಂತರ ತರಕಾರಿ ಅಂಗಡಿ ಇಟ್ಟು ವ್ಯಾಪಾರ ಆರಂಭಿಸಿದರು.

ಮರಿಯಪ್ಪನ್ ಬಾಲ್ಯದ ಜೀವನ ಸುಖದ ಹಾಸಿಗೆಯಾಗಿರಲಿಲ್ಲ. ಸುಮಾರು ಐದು ವರ್ಷದವನಿದ್ದಾಗ ಮರಿಯಪ್ಪನ್ ಜೀವನ ವಿಚಿತ್ರ ತಿರುವು ಪಡೆದುಕೊಂಡಿತು. ರಸ್ತೆ ಅಪಘಾತದಲ್ಲಿ ಮರಿಯಪ್ಪನ್ ಬಲಗಾಲಿಗೆ ಗಂಭೀರ ಗಾಯವಾಯಿತು. ಕುಡಿದ ಮತ್ತಿನಲ್ಲಿ ಬಸ್ಸು ಓಡಿಸಿದವನ ತಪ್ಪಿನಿಂದಾಗಿ ಮರಿಯಪ್ಪನ್ ಸಂಕಷ್ಟ ಅನುಭವಿಸುವಂತಾಯಿತು.
ಮೊಣಕಾಲಿನ ತನಕ ಮರಿಯಪ್ಪನ್ ಬಲಗಾಲನ್ನು ಕತ್ತರಿಸಲಾಯಿತು. ಆದರೆ, ಅವರು ಧೃತಿಗೆಡಲಿಲ್ಲ. ಶಾಲೆಯಲ್ಲಿ ಕ್ರೀಡಾ ಚಟುವಟಿಕೆಗಳಲ್ಲಿ ಅವರು ಸಕ್ರಿಯರಾಗಿದ್ದರು. ಮರಿಯಪ್ಪನ್ ಪ್ರತಿಭೆ ಗುರುತಿಸಿದ ದೈಹಿಕ ಶಿಕ್ಷಕರು ಹೈಜಂಪ್ ಅಭ್ಯಾಸ ಮಾಡಲು ನೆರವು ನೀಡಿದರು.
ಮರಿಯಪ್ಪನ್ 2016ರ ರಿಯೋ ಒಲಂಪಿಕ್ ನಲ್ಲಿ ಮರಿಯಪ್ಪನ್ ದೇಶಕ್ಕೆ ಚಿನ್ನ ಗೆದ್ದು ತಂದು ಕೊಡುತ್ತಾರೆ ಎಂದು ಯಾರೂ ಉಹಿಸಿರಲಿಲ್ಲ. ಹದಿನಾಲ್ಕು ವರ್ಷವಿದ್ದಾಗ ಮರಿಯಪ್ಪನ್ ಹೈಜಂಪ್ ನಲ್ಲಿ ತಮ್ಮ ಮೊದಲ ತರಬೇತಿ ಮುಗಿಸಿದರು. ಭಾರತೀಯ ಪ್ಯಾರಾ ನ್ಯಾಷನಲ್ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಮರಿಯಪ್ಪನ್ ಪ್ರತಿಭೆಯನ್ನು ಗುರುತಿಸಲಾಯಿತು. ನಂತರ ಬೆಂಗಳೂರಿಗೆ ತರಬೇತಿಗಾಗಿ ಕಳುಹಿಸಲಾಯಿತು.
ಪುರುಷರ ಐದುರಿಂದ-ಹತ್ತು ಅಡಿ ಲಾಂಗ್ ಜಂಪ್ ನಲ್ಲಿ ಚಿನ್ನ ಗೆದ್ದಿರುವ ಮರಿಯಪ್ಪನ್ ದೇಶದ ಯುವ ಜನರಿಗೆ ಮಾದರಿ. ಕ್ರೀಡೆಯ ಹೊರತಾಗಿಯೂ ಮರಿಯಪ್ಪನ್ ಬ್ಯುಸಿನೆಸ್ ಅಡ್ಮಿನಿಷ್ಟ್ರೇಶನ್ ನಲ್ಲಿ ಪದವಿ ಪಡೆದಿದ್ದಾರೆ. ಕ್ರೀಡೆಗೆ ಮರಿಯಪ್ಪನ್ ನೀಡಿರುವ ಕೊಡುಗೆಗಾಗಿ 2017ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications