ಡಾ.ಭಕ್ತಿ ಅವರ ಕಾರ್ಯಕ್ಕೆ ನಮ್ಮದೊಂದು ಸಲಾಮ್
ನವದೆಹಲಿ, ಅ.10 : 'ವೈದ್ಯೋ ನಾರಾಯಣ ಹರಿ' ಎಂಬ ಮಾತನ್ನು ಎಲ್ಲರೂ ಹೇಳುತ್ತಾರೆ. ಈ ಮಾತನ್ನು ನಿಜವಾಗಿಸಿದ್ದು ಡಾ.ಭಕ್ತಿ ಯಾದವ್. ಇವರು ಆರವತ್ತೆಂಟು ವರ್ಷಗಳಿಂದ ಉಚಿತವಾಗಿ ರೋಗಿಗಳ ಸೇವೆ ಮಾಡುತ್ತಿದ್ದಾರೆ. ತಮ್ಮ ಸೇವೆಗಾಗಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದಾರೆ.
91 ವರ್ಷದ ಡಾ.ಭಕ್ತಿ ಯಾದವ್ ಮಧ್ಯಪ್ರದೇಶ ಇಂಧೋರ್ ನವರು. ಇಂಧೋರ್ನಲ್ಲಿ ಎಂಬಿಬಿಎಸ್ ಪದವಿ ಪಡೆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಯೂ ಇವರದ್ದು. ಉಚಿತವಾಗಿ ರೋಗಿಗಳ ಸೇವೆ ಮಾಡುವ ಇವರು, ಇದುವರೆಗೂ ಸಾವಿರಾರು ಹೆರಿಗೆ ಮಾಡಿಸಿದ್ದಾರೆ.

'ಡಾಕ್ಟರ್ ದಾದಿ' ಎಂದೇ ಪ್ರಸಿದ್ಧಿ ಪಡೆದಿರುವ ಭಕ್ತಿ ಅವರು ಹುಟ್ಟಿದ್ದು 1926ರ ಏಪ್ರಿಲ್ 13ರಂದು ಉಜ್ಜೈನಿಯಲ್ಲಿ. 1948ರಲ್ಲಿ ಇಂಧೋರ್ ನ ಮಹಾತ್ಮ ಗಾಂಧಿ ಮೆಮೋರಿಯಲ್ ಮೆಡಿಕಲ್ ಕಾಲೇಜಿನಿಂದ ಡಾ.ಭಕ್ತಿ ಎಂಬಿಬಿಎಸ್ ಪದವಿ ಪಡೆದರು. ತಮ್ಮ ಪದವಿಯನ್ನು ಹಣಗಳಿಸಲು ಅವರು ಎಂದೂ ಬಳಸಲೇ ಇಲ್ಲ.
ಡಾ.ಭಕ್ತಿ ಅವರ ಇಬ್ಬರು ಮಕ್ಕಳು ವೈದ್ಯರು. ಡಾ.ಚೇತನ್ ಮತ್ತು ಅವರ ಪತ್ನಿ ಡಾ.ಸುನೀತಾ ಯಾದವ್, ಡಾ.ರಮಣ್ ಯಾದವ್ ಈಗ ನರ್ಸಿಂಗ್ ಹೋಂ ನಡೆಸುತ್ತಿದ್ದಾರೆ. ಓದು ಮುಗಿಸಿದಾಗ ಒಂದ ಸರ್ಕಾರಿ ಉದ್ಯೋಗದ ಅವಕಾಶವನ್ನು ತಳ್ಳಿ ಹಾಕಿದ ಭಕ್ತಿ ಅವರು, ನಂದಾಲಾಲ್ ಭಂಡಾರಿ ಹೆರಿಗೆ ಮನೆ ಎನ್ನುವ ಆಸ್ಪತ್ರೆ ಸೇರಿಕೊಂಡರು.
ಈ ಆಸ್ಪತ್ರೆಗೆ ಬರುತ್ತಿದ್ದವರಲ್ಲಿ ಬಟ್ಟೆ ಮಿಲ್ಗಳ ಕಾರ್ಮಿಕರೇ ಹೆಚ್ಚಾಗಿದ್ದರು. ಬಡತನದ ಸ್ವರೂಪ ಭಕ್ತಿ ಅವರಿಗೆ ಇಲ್ಲಿ ಪರಿಚಯವಾಯಿತು. ಹಲವು ದಶಕಗಳ ಕಾಲ ಆಸ್ಪತ್ರೆಯಲ್ಲಿ ಮುಖ್ಯ ವೈದ್ಯರಾಗಿ ಕೆಲಸ ಮಾಡಿದ ಅವರು, ನಂತರ ವಾತ್ಸಲ್ಯ ಎಂಬ ಸ್ವಂತ ನರ್ಸಿಂಗ್ ಹೋಂ ಆರಂಭಿಸಿದರು.
ಪ್ರಸ್ತುತ 91 ವರ್ಷವಾದರೂ ಡಾ.ಭಕ್ತಿ ತಮ್ಮ ಕಾಯಕವನ್ನು ನಿಲ್ಲಿಸಿಲ್ಲ. ವಯೋಸಹಜ ಅನಾರೋಗ್ಯ ಉಂಟಾದರೂ ಬಡವರ ಸೇವೆ ಮಾಡುವ ಕಾಯಕ ಮುಂದುವರೆಸಿದ್ದಾರೆ. ಕೊನೆ ಉಸಿರು ಇರುವ ತನಕ ಸೇವೆ ಮಾಡುತ್ತೇನೆ ಎನ್ನುವ ದೃಢ ಸಂಕಲ್ಪ ಮಾಡಿದ್ದಾರೆ.
ಡಾ.ಭಕ್ತಿ ಅವರ ಬಳಿ ಕೇವಲ ಮಧ್ಯಪ್ರದೇಶದ ರೋಗಿಗಳು ಬರುವುದಿಲ್ಲ. ಗುಜರಾತ್, ರಾಜಸ್ಥಾನದಿಂದಲೂ ರೋಗಿಗಳು ಇವರ ಬಳಿ ಬರುತ್ತಾರೆ. 'ಎಲ್ಲರೂ ಸಂತೋಷವಾಗಿದ್ದರೆ ನಾನು ಸಂತೋಷದಿಂದಿರುವೆ' ಎಂಬುದು ಡಾ.ಭಕ್ತಿ ಅವರ ಮನದಾಳದ ಮಾತು.
ಬಡವರ ಸೇವೆ ಮಾಡಬೇಕು ಎಂಬುದನ್ನು ಭಕ್ತಿ ಅವರು ಕಲಿತಿದ್ದು ತಂದೆ-ತಾಯಿಯಿಂದ. ಭಕ್ತಿ ಅವರ ಕಾರ್ಯಕ್ಕೆ ಅವರ ಪತಿ ಡಾ.ಚಂದ್ರಸಿಂಗ್ ಯಾದವ್ ಅವರ ಸಂಪೂರ್ಣ ಸಹಕಾರವಿತ್ತು. ಚಂದ್ರಸಿಂಗ್ ಮತ್ತು ಭಕ್ತಿ ಅವರು ಒಟ್ಟಿಗೆ ಎಂಬಿಬಿಎಸ್ ಓದಿದವರು.
ಭಕ್ತಿ ಅವರ ಕಾಯಕಕ್ಕೆ ನಮ್ಮದೊಂದು ಸಲಾಮ್...
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications