ಬಜೆಟ್: ಸಾಮಾಜಿಕ ಜಾಲತಾಣದಲ್ಲಿ ಮೋದಿ ಸರ್ಕಾರಕ್ಕೆ ಛೀಮಾರಿ?!
Recommended Video

ನವದೆಹಲಿ, ಫೆಬ್ರವರಿ 01: ವಿತ್ತ ಸಚಿವ ಅರುಣ್ ಜೇಟ್ಲಿ ಮಂಡಿಸುತ್ತಿರುವ 2018-19ನೇ ಹಣಕಾಸು ವರ್ಷದ ಕೇಂದ್ರ ಬಜೆಟ್ ಕೃಷಿ ಪ್ರಧಾನ ಬಜೆಟ್ ಎಂಬ ಕಾರಣಕ್ಕೆ ಮಹತ್ವದ್ದೆನಿಸಿದೆ.
ಕೃಷಿ ಕ್ಷೇತ್ರಕ್ಕೆ ಆದ್ಯತೆ, ಬಡವರಿಗೆ ಉಚಿತ ಡಯಾಲಿಸಿಸ್, ಸ್ಟೆಂಟ್ ದರ ಇಳಿಕೆ ಸೇರಿದಂತೆ ಆರೋಗ್ಯ ಕಾಳಜಿ, ಮಾಲಿನ್ಯ ತಡೆಗೆ ಒತ್ತು ಮುಂತಾಗಿ ಹಲವು ಮಹತ್ವದ ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೆ ತರುತ್ತಿದೆ.
ಆದರೆ ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಆಗದಿರುವ ಬಗ್ಗೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ಬಜೆಟ್ ಕುರಿತು ಚರ್ಚೆ ಆರಂಭವಾಗಿದ್ದು, ಕೇಂದ್ರ ಬಜೆಟ್ ಅನ್ನು ಕೆಲವರು ಜನಪರ ಬಜೆಟ್ ಅಂದಿದ್ದರೆ ಮತ್ತಷ್ಟು ಜನ ಹೊಸತೇನೂ ಇಲ್ಲ ಎಂದಿದ್ದಾರೆ.
|
ಶ್ರೀಮಂತರನ್ನು ಕೊಳ್ಳೆಹೊಡೆದು ಬಡವರನ್ನು ಸಲಹಿ...
ನಾವೆಲ್ಲರು ಈ ಸೆಸ್ ಗಳಿಂದ ಮುಕ್ತವಾಗುವುದು ಯಾವಾಗ? ಕಖೇಂದ್ರ ಬಜೆಟ್ ಶ್ರೀಮಂತರನ್ನು ದೋಚಿ, ಬಡವರನ್ನು ಸಲಹುವಂತಿದೆ. ಬಡವರು ಮತಹಾಕಬೇಕು, ಉಳಿದವರು ತೆರಿಗೆ ಕಟ್ಟುತ್ತಿರಬೇಕು. ಅತ್ಯಂತ ಶ್ರೀಮಂತರಾಗಿರುವವರನ್ನು ಸರ್ಕಾರಕ್ಕೂ ಮುಟ್ಟುವುದಕ್ಕೆ ಸಾಧ್ಯವಿಲ್ಲ! ಎಂದಿದ್ದಾರೆ ರಾಜದೀಪ ಸರ್ದೇಸಾಯಿ.
|
ಅತ್ಯುತ್ತಮ ಬಜೆಟ್ ನೀಡಿದ್ದಕ್ಕೆ ಧನ್ಯವಾದ
ನಮ್ಮ ಕನಸುಗಳನ್ನು ಸಲಹುವ ಮತ್ತು ಅದು ಮತ್ತಷ್ಟು ಸಮೃದ್ಧವಾಗುವಂತೆ ಮಾಡುವ ಬಜೆಟ್ ಎಂದರೆ 2018 ರ ಬಜೆಟ್! ಇಂಥ ಬಜೆಟ್ ನೀಡಿದ್ದಕ್ಕೆ ಪ್ರಧಾನಿ ಮೋದಿಯವರಿಗೆ ಮತ್ತು ವಿತ್ತ ಸಚಿವ ಅರುಣ್ ಜೇಟ್ಲಿ ಅವರಿಗೆ ಧನ್ಯವಾದಗಳು ಎಂದಿದ್ದಾರೆ ಪೂನಂ ಮಹಾಜನ್.
|
ಎರಡೇ ತರದ ಬಜೆಟ್ ಇರುವುದು!
ನಾನು ಹುಟ್ಟಿದಾಗಿನಿಂದ ನೋಡುತ್ತಿದ್ದೇನೆ. ಇಲ್ಲಿ ಎರಡೇ ಥರದ ಬಜೆಟ್ ಇರುವುದು.
1. ಕೆಟ್ಟ ಬಜೆಟ್ . ಇದರಲ್ಲಿ ಮಧ್ಯಮ ವರ್ಗದ ಜನರಿಗೆ ಏನೂ ಇಲ್ಲ!
2. ಒಳ್ಳೆಯ ಬಜೆಟ್. ಇದರಲ್ಲಿ ಮಧ್ಯಮ ವರ್ಗದ ಜನರಿಗೆ ಏನೂ ಇಲ್ಲ! ಎಂದು ಶಶ್ ಎಂಬ ಖಾತೆಯಿಂದ ವ್ಯಂಗ್ಯವಾಗಿ ಟ್ವೀಟ್ ಮಾಡಲಾಗಿದೆ.
|
ಬ್ರಿಟೀಶ್ ಆಡಳಿತ ಎನ್ನಿಸುತ್ತಿದೆ.
ತೆರಿಗೆ ಅಸಮಾನತೆಯ ಕುರಿತು ಮಧ್ಯಮ ವರ್ಗದ ಜನರು ದೇಶದಾದ್ಯಂತ ಪ್ರತಿಭಟನೆ ನಡೆಸುವ ಕಾಲ ಈಗ ಬಂದಿದೆ. ನಿಜಕ್ಕೂ ಇದೀಗ ಬ್ರಿಟೀಷ್ ಸರ್ಕಾರದ ಆಡಳಿತದ ಕೆಳಗೆ ಬದುಕುತ್ತಿರುವಂತೆ ಅನ್ನಿಸುತ್ತಿದೆ ಎಂದಿದ್ದಾರೆ ಅಂಜುಲ್ ಬನ್ಸಾಲ್.
|
ಅನುಮಾನ ಬಗೆಹರಿಸಿದ್ದೀರಿ!
2019 ರಲ್ಲಿ ಬಿಜೆಪಿಗೆ ಮತ ಚಲಾಯಿಸದಿರುವುದಕ್ಕೆ ಇದ್ದ ಅನುಮಾನವನ್ನೆಲ್ಲ ಈಡೇರಿಸಿದ್ದಕ್ಕೆ ಅರುಣ್ ಜೇಟ್ಲಿ ಅವರಿಗೆ ಧನ್ಯವಾದಗಳು ಎಂದಿದ್ದಾರೆ ನೇಹಾ ಜೈನ್
|
ಎಲ್ಲಾ ಬಜೆಟ್ ಗಳೂ ಹೀಗೇ!
ಎಲ್ಲಾ ಬಜೆಟ್ ಗಳೂ ಹೀಗೆ. ಸರ್ಕಾರಗಳು ಮಧ್ಯಮ ವರ್ಗದ ತೆರಿಗೆಯನ್ನು ಕಸಿದುಕೊಂಡು ಬಡವರ ಮತ ಪಡೆಯುತ್ತವೆ. ಮತ್ತು ಶ್ರೀಮಂತಿಗೆ ಸಬ್ಸೀಡಿ ನೀಡುತ್ತವೆ ಎಂದು ದಿ ಬ್ಯಾಡ್ ಡಾಕ್ಟರ್ ಎಂಬ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಿದ್ದಾರೆ.
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications