For Daily Alerts
ಛತ್ತೀಸ್ ಗಢ: ಅದಕ್ಷ ಅಧಿಕಾರಿಗಳನ್ನು ವಜಾಗೊಳಿಸಿದ ಕೇಂದ್ರ
ಛತ್ತೀಸ್ ಗಢದ ಇಬ್ಬರು ಐಪಿಎಸ್ ಅಧಿಕಾರಿಗಳನ್ನು ವಜಾಗೊಳಿಸಿದ ಕೇಂದ್ರ ಸರ್ಕಾರ. ಅದಕ್ಷತೆಯ ಹಿನ್ನೆಲೆಯಲ್ಲಿ ಎ.ಎಂ.ಜಹ್ರಿ ಹಾಗೂ ಕೆ.ಸಿ.ಅಗರ್ವಾಲ್ ಎಂಬಿಬ್ಬರು ಅಧಿಕಾರಿಗಳ ವಜಾ.
ನವದಹೆಲಿ, ಆಗಸ್ಟ್ 7: ಅದಕ್ಷತೆಯ ಆಧಾರದಲ್ಲಿ ಛತ್ತೀಸ್ ಗಢದ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಕೇಂದ್ರ ಸರ್ಕಾರ ಕೆಲಸದಿಂದ ವಜಾಗೊಳಿಸಿದೆ.
ಮೋದಿ ಡಿಗ್ರಿ ವರದಿ ನೀಡಲು ಸೂಚಿಸಿದ್ದ ಅಧಿಕಾರಿ ಎತ್ತಂಗಡಿ
ಛತ್ತೀಸ್ ಗಢ ಕೇಡರ್ ನ ಎ.ಎಂ. ಜುಹ್ರಿ ಹಾಗೂ ಕೆ.ಸಿ. ಅಗರ್ವಾಲ್ ಎಂಬುವರನ್ನು ಸಾರ್ವಜನಿಕ ಹಿತಾಸಕ್ತಿ ಆಧಾರದಲ್ಲಿ ಪೊಲೀಸ್ ಸೇವೆಯಿಂದ ವಜಾಗೊಳಿಸಿರುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.
ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ಜುಹ್ರಿ, ''ಕೇಂದ್ರ ಸರ್ಕಾರದ ಆದೇಶ ನನಗೆ ಸೋಮವಾರ ಬೆಳಗ್ಗೆ ಸಿಕ್ಕಿದೆ. ಈ ಬಗ್ಗೆ ಹೆಚ್ಚಿನ ವಿವರಣೆಯನ್ನು ನಾನು ಪಡೆಯಲಿಚ್ಛಿಸುತ್ತೇನೆ'' ಎಂದು ತಿಳಿಸಿದ್ದಾರೆ.
ಹಲವಾರು ದಿನಗಳಿಂದ ಅದಕ್ಷ, ಕರ್ತವ್ಯ ಚ್ಯುತಿ, ಅಧಿಕಾರ ದುರುಪಯೋಗ ಮಾಡಿಕೊಳ್ಳುವ ಸರ್ಕಾರಿ ಅಧಿಕಾರಿಗಳ ವಿರುದ್ಧ ದಿಟ್ಟ ಕೈಗೊಳ್ಳುವುದಾಗಿ ಕೇಂದ್ರ ಸರ್ಕಾರ, ಆಗಾಗ ಹೇಳುತ್ತಲೇ ಬಂದಿತ್ತು. ಇದೀಗ, ತಾನು ನುಡಿದಂತೆ ನಡೆದು ಇತರ ಅದಕ್ಷ ಅಧಿಕಾರಿಗಳು ಬೆಚ್ಚಿಬೀಳುವಂತೆ ಮಾಡಿದೆ.
English summary
In a strong message to ‘inefficient’ officials, the Centre sacked two IPS officers of Chhattisgarh cadre AM Juri and KC Agarwal “in public interest.”
Story first published: Monday, August 7, 2017, 9:24 [IST]