ಟಿಎಂಸಿಯಿಂದ ಮುಕುಲ್ ರಾಯ್ ಅಮಾನತು
ಕೋಲ್ಕತಾ, ಸೆಪ್ಟೆಂಬರ್ 25 : ರಾಜ್ಯಸಭಾ ಸದಸ್ಯ ಮತ್ತು ಮಾಜಿ ರೈಲ್ವೆ ಸಚಿವ ಮುಕುಲ್ ರಾಯ್ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ. ಪಕ್ಷ ವಿರೋಧಿ ಚಟುವಟಿಕೆ ಹಿನ್ನಲೆಯಲ್ಲಿ ಅಮಾನತು ಮಾಡಲಾಗಿದೆ.
'ಬಿಜೆಪಿ ಭಾರತ ಬಿಟ್ಟು ತೊಲಗು' ಮಮತಾ ಬ್ಯಾನರ್ಜಿ ಹೊಸ ಆಂದೋಲನ
ರಾಜ್ಯಸಭಾ ಸದಸ್ಯತ್ವ ಮತ್ತು ಪಕ್ಷದ ಸದಸ್ಯತ್ವಕ್ಕೆ ದುರ್ಗಾ ಪೂಜೆಯ ಬಳಿಕ ರಾಜೀನಾಮೆ ನೀಡುವುದಾಗಿ ಮುಕುಲ್ ರಾಯ್ ಘೋಷಣೆ ಮಾಡಿದ್ದರು. ಈ ಘೋಷಣೆ ಮಾಡಿದ ತಕ್ಷಣ ಅವರನ್ನು 6 ವರ್ಷಗಳ ಅವಧಿಗೆ ಪಕ್ಷದಿಂದ ಅಮಾನತು ಮಾಡಲಾಗಿದೆ.
ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಆರು ವರ್ಷ ಅವಧಿಗೆ ಅಮಾನತು ಮಾಡಲಾಗಿದೆ. ರಾಯ್ ಪಕ್ಷವನ್ನು ದುರ್ಬಲಗೊಳಿಸಲು ಪ್ರಯತ್ನ ಯತ್ನಿಸುತ್ತಿದ್ದರು ಎಂದು ಟಿಎಂಸಿ ಪಕ್ಷದ ಪ್ರಧಾನ ಕಾರ್ಯದರ್ಶಿ ಪಾರ್ಥ ಚಟರ್ಜಿ ಹೇಳಿದ್ದಾರೆ.
ಮಮತಾಗೆ ಭಾರೀ ಹಿನ್ನಡೆ, ಬಿಜೆಪಿ ಸೇರಿದ 6 ಟಿಎಂಸಿ ಶಾಸಕರು
ಪಕ್ಷದ ಶಿಸ್ತು ಸಮಿತಿಯು ಈ ಬಗ್ಗೆ ಚರ್ಚೆ ನಡೆಸಿ ರಾಯ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಿಗೆ ಶಿಫಾರಸು ಮಾಡಿತ್ತು. ಶಿಫಾರಸ್ಸಿನ ಅನ್ವಯ ಇಂದು ಅಮಾನತು ಆದೇಶ ಹೊರಡಿಸಲಾಗಿದೆ.
ಮುಕುಲ್ ರಾಯ್ ಘೋಷಣೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚಟರ್ಜಿ ಅವರು, 'ಪಕ್ಷ ಬಿಡುವುದಾದರೆ ಅವರು ಈಗಲೇ ಯಾಕೆ ಬಿಡಬಾರದು?' ಎಂದು ಪ್ರಶ್ನಿಸಿದ್ದಾರೆ.