ಚಿತ್ರಗಳಲ್ಲಿ: ರಷ್ಯಾದಲ್ಲಿ ಪ್ರಧಾನಿ, ಇಸ್ಕಾನ್ ಪ್ರತಿಭಟನೆ
ಮಾಸ್ಕೋ, ಅ.21: ಐದು ದಿನಗಳ ರಷ್ಯಾ ಮತ್ತು ಚೀನಾ ಪ್ರವಾಸ ಕೈಗೊಂಡಿರುವ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಮಾಸ್ಕೋದಲ್ಲಿ ಆತ್ಮೀಯ ಸ್ವಾಗತ ಸಿಕ್ಕಿದೆ. ಇತ್ತ ಕೋಲ್ಕತ್ತಾದಲ್ಲಿ ರಷ್ಯಾ ರಾಯಭಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.
ಸೋಮವಾರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟೀನ್ ಅವರನ್ನು ಪ್ರಧಾನಿ ಸಿಂಗ್ ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಬಳಿಕ ಪ್ರಧಾನಿ ಅವರಿಗೆ ಮಾಸ್ಕೋ ಸ್ಟೇಟ್ ಇನ್ಸ್ಟಿಟ್ಯೂಟ್ ಆಫ್ ಇಂಟರ್ ನ್ಯಾಷನಲ್ ರಿಲೇಶನ್ಸ್ ವತಿಯಿಂದ ಗೌರವ ಡಾಕ್ಟರೇಟ್ ಪ್ರದಾನ ಮಾಡಿ ಸನ್ಮಾನಿಸಲಾಗುವುದು.
ರಕ್ಷಣೆ, ಅಣುಶಕ್ತಿ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ರಷ್ಯಾ ಭಾರತಕ್ಕೆ ಅಪಾರವಾಗಿ ಸಹಕಾರ ನೀಡುತ್ತಿದೆ. ಜಾಗತಿಕ ಮತ್ತು ಧಾರ್ಮಿಕ ವಿಷಯಗಳಲ್ಲಿ ಎರಡು ದೇಶಗಳ ದೃಷ್ಟಿಕೋನ ಒಂದೇ ಆಗಿದೆ. ಅಂತಾರಾಷ್ಟ್ರೀಯ ವಿಷಯಗಳಿಗೆ ಸಂಬಂಧಿಸಿದಂತೆ ಭಾರತಕ್ಕೆ ರಷ್ಯಾ ಸಂಪೂರ್ಣ ಸಹಕಾರ ನೀಡುವ ಭರವಸೆ ಇದೆ ಎಂದು ಪ್ರಧಾನಿ ಸಿಂಗ್ ಭರವಸೆ ವ್ಯಕ್ತಪಡಿಸಿದ್ದಾರೆ.
ಆದರೆ, ಮಾಸ್ಕೋದಲ್ಲಿ ಇತ್ತೀಚೆಗೆ ಹಿಂದೂ ದೇಗುಲ ಧ್ವಂಸಗೊಳಿಸಿರುವ ಘಟನೆಯನ್ನು ಖಂಡಿಸಿ ಇಸ್ಕಾನ್ ಭಕ್ತರು ಕೋಲ್ಕತ್ತಾದಲ್ಲಿ ರಸ್ತೆಗಿಳಿದು ದೇವರ ಸಂಕೀರ್ತನೆಗಳನ್ನು ಹಾಡಿ, ಕುಣಿದು ಪ್ರತಿಭಟನೆ ನಡೆಸಿದ್ದಾರೆ.
ಉಳಿದಂತೆ, ಮೊರಾದಾಬಾದಿನಲ್ಲಿ ದೀಪಾವಳಿ ಹಬ್ಬದ ತಯಾರಿ ಜೋರಾಗಿ ನಡೆದಿದೆ. ಜಮ್ಮುವಿನಲ್ಲಿ ಮಹಿಳೆಯರು ಕರ್ವಾ ಚೌತ್ ಹಬ್ಬದ ತಯಾರಿಯಲ್ಲಿದ್ದಾರೆ. ಜೋಧಪುರದಲ್ಲಿ ಇಂಡೋ ರಷ್ಯಾ ಜಂಟಿ ಮಿಲಿಟರಿ ಅಭ್ಯಾಸ, ಜಮ್ಮುವಿನಲ್ಲಿ ಆರೆಸ್ಸೆಸ್ ಪಥ ಸಂಚಲನ, ಜೋಧಪುರ್ ದಲ್ಲಿ ರವಿಶಂಕರ್ ಗುರೂಜಿ ಮುಂತಾದ ಚಿತ್ರಗಳಿವೆ...

ಇಸ್ಕಾನ್ ಪ್ರತಿಭಟನೆ
ಮಾಸ್ಕೋದಲ್ಲಿ ಇತ್ತೀಚೆಗೆ ಹಿಂದೂ ದೇಗುಲ ಧ್ವಂಸಗೊಳಿಸಿರುವ ಘಟನೆಯನ್ನು ಖಂಡಿಸಿ ಇಸ್ಕಾನ್ ಭಕ್ತರು ಕೋಲ್ಕತ್ತಾದಲ್ಲಿ ರಸ್ತೆಗಿಳಿದು ದೇವರ ಸಂಕೀರ್ತನೆಗಳನ್ನು ಹಾಡಿ, ಕುಣಿದು ಪ್ರತಿಭಟನೆ ನಡೆಸಿದ್ದಾರೆ.

ಮಾಸ್ಕೋದಲ್ಲಿ ಪ್ರಧಾನಿ ಸಿಂಗ್
ಮಾಸ್ಕೋ: ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಮಾಸ್ಕೋ ಹೊರವಲಯದ Vnukovo-2 ವಿಮಾನ ನಿಲ್ದಾಣದಲ್ಲಿ ಸಿಕ್ಕ ಸ್ವಾಗತ ಹೀಗಿತ್ತು. PTI Photo by Subhav Shukla

ಜಮ್ಮುವಿನಲ್ಲಿ
ಮಹಿಳೆಯರು ಕರ್ವಾ ಚೌತ್ ಹಬ್ಬದ ಮುನ್ನ ಬಳೆ ಖರೀದಿಯಲ್ಲಿ ತೊಡಗಿದ್ದಾರೆ.

ಮೊರಾದಾಬಾದಿನಲ್ಲಿ
ದೀಪಾವಳಿಗಾಗಿ ತಯಾರಾದ ಮಣ್ಣಿನ ದೀಪಗಳನ್ನು ಒಣಗಿಸಲು ಹೊತ್ತೊಯ್ಯುತ್ತಿರುವ ಮಕ್ಕಳು

ಜೋಧಪುರ್ ದಲ್ಲಿ
ಇಲ್ಲಿನ ಮಹಾಜನ್ ಫೀಲ್ಡ್ ರೇಂಜ್ ನಲ್ಲಿ ಇಂಡೋ ರಷ್ಯಾ ಜಂಟಿ ಮಿಲಿಟರಿ ಅಭ್ಯಾಸ

ವೆಂಕಟರಮಣ ಸ್ವಾಮಿ ದೇವಸ್ಥಾನ
ಶ್ರೀ ವೀರವಿಠಲ ವೆಂಕಟರಮಣ ಸ್ವಾಮಿ ದೇವಸ್ಥಾನ ಪಾಣೆಮಂಗಳೂರು ಇದರ ಸ್ವರ್ಣ ಹಿತ್ತಾಳೆಯ ಮಹಾದ್ವಾರವನ್ನು ಶನಿವಾರ (ಅ 19) ದಂದು ಪರಮಪೂಜ್ಯ ಕಾಶೀ ಮಠಾಧೀಶ ಶ್ರೀಮದ್ ಸುಧೀಂದ್ರತೀರ್ಥ ಸ್ವಾಮೀಜಿ ಉದ್ಘಾಟಿಸಿದರು. ಸ್ವರ್ಣ ಹಿತ್ತಾಳೆ ದ್ವಾರವನ್ನು ಅನ್ನಪೂರ್ಣ ಆರ್ ಭಂಡಾರ್ ಕಾರ್, ಪಿ ರಘುವೀರ್ ಭಂಡಾರ್ ಕಾರ್ ಸೇವಾ ರೂಪದಲ್ಲಿ ನೀಡಿದರು.

ಶ್ರೀಲಂಕಾದ ಮಾವುತರು
ಕಾಮನ್ ವೆಲ್ತ್ ಕ್ರೀಡಾಜ್ಯೋತಿ ಹಿಡಿದಿರುವ ಶ್ರೀಲಂಕಾದ ಮಾವುತರು. ಕಾಮನ್ ವೆಲ್ತ್ ಗೇಮ್ಸ್ ಸ್ಕಾಟಿಷ್ ನಗರ ಗ್ಲಾಸ್ಗೋನಲ್ಲಿ ಜು.23 ರಿಂದ ಆ.3 ರತನಕ ನಡೆಯಲಿದೆ.

ಕಾರು ಪಲ್ಟಿ
ತಲ್ಲಡೆಗ: NASCAR ಸ್ಪ್ರಿಂಟ್ ಕಪ್ ಸರಣಿ ಡ್ರೈವರ್ ಆಸ್ಟಿನ್ ದಿಲ್ಲೊನ್ ಕಾರು ಪಲ್ಟಿ ಹೊಡೆದಿದೆ.

ಅಸ್ಸಾಂನಲ್ಲಿ
ಟಿನ್ ಸುಕಿಯಾ: ದಿಬ್ರ್ ಸೈಖೊ ರಾಷ್ಟ್ರೀಯ ಪಾರ್ಕ್ ನಲ್ಲಿ ವಲಸೆ ಹಕ್ಕಿಗಳ ಸಮೂಹ

ಮೆಹಂದಿ ರಂಗು
ಕರ್ವ ಚೌತ್ ಅಂಗವಾಗಿ ಮಹಿಳೆಯರು ಮೆಹಂದಿ ರಂಗು ಹಾಕಿಕೊಂಡಿದ್ದಾರೆ

ಎಂಥಾ ಕ್ಯಾಚ್
ಮರಕುಟುಕ ಪಕ್ಷಿ ತನ್ನ ಬೇಟೆ ಸಿಕ್ಕ ಖುಷಿಯಲ್ಲಿ ಬಾಯ್ತೆರೆದಿದೆ PTI Photo by Kamal Kishore

ಜಲಂಧರ್ ನಲ್ಲಿ
ಜಲಂಧರ್ : ಗುರು ಗೋವಿಂದ್ ಸಿಂಗ್ ಸ್ಟೇಡಿಯಂನಲ್ಲಿಆರ್ಟ್ ಆಫ್ ಲಿವಿಂಗ್ ನ ರವಿಶಂಕರ್ ಗುರೂಜಿ ಪ್ರವಚನ

ಆರೆಸ್ಸೆಸ್ ಕಾರ್ಯಕರ್ತರು
ಜಮ್ಮು : ಆರೆಸ್ಸೆಸ್ ಕಾರ್ಯಕರ್ತರು ವಿಜಯದಶಮಿ ಪಥಸಂಚಲನ ನಡೆಸಿದರು.

ಚೆನ್ನೈನಲ್ಲಿ
ಟೆನಿಸ್ ತಾರೆ ಸೋಮದೇವ್ ದೇವರ್ಮನ್ ನಟ ಅರವಿಂದ ಸ್ವಾಮಿ ಅವರು ಲಾನ್ಸನ್ ಟೋಯೋಟಾ ಕಾರ್ ಫನ್ ಮೆರವಣಿಗೆ ಕಾರ್ಯಕ್ರಮದಲ್ಲಿ ಒಟ್ಟಿಗೆ ಕಂಡಿದ್ದು ಹೀಗೆ

ಹೊಸ ಕಾರು
ಆಟೋಕಾರ್ ಶೋ 2013 ನಲ್ಲಿ ರೂಪದರ್ಶಿಗಳು ಕಾರಿನೊಂದಿಗೆ

ಮುಂಬೈನಲ್ಲಿ
ಉದ್ಯಮಿ ಮುಖೇಶ್ ಅಂಬಾನಿ ಅವರು ರಿಲಯನ್ಸ್ ಇಂಡಿಯನ್ ಜ್ಯೂನಿಯರ್ ಹಾಗೂ ಕಾಡೆಟ್ ಓಪನ್ ವಿಜೇತರ ಜತೆ

ಚೆನ್ನೈನಲ್ಲಿ
ಚೆನ್ನೈನ ಬಜಾರ್ ವೊಂದರಲ್ಲಿ ದೀಪಾವಳಿಗೂ ಮುನ್ನ ಭರ್ಜರಿ ವ್ಯಾಪಾರ ನಡೆದಿದೆ.
-
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
National Highway: ಕರ್ನಾಟಕದ ನಾಲ್ಕು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ನಿತಿನ್ ಗಡ್ಕರಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ












Click it and Unblock the Notifications