ರಾಹುಲ್ ಗಾಂಧಿ ಬಳಿಕ ಈಗ ಲೋಕಸಭೆಯಿಂದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಉಚ್ಚಾಟನೆ
ನವದೆಹಲಿ, ಡಿಸೆಂಬರ್ 8: ತೃಣಮೂಲ ಕಾಂಗ್ರೆಸ್ ನಾಯಕಿ ಸಂಸದೆ ಮಹವಾ ಮೊಯಿತ್ರಾ ಅವರನ್ನು ಕೊನೆಗೂ ಲೋಕಸಭೆಯಿಂದ ಉಚ್ಛಾಟಿಸಲಾಗಿದೆ. ಮಹುವಾ ಮೊಯಿತ್ರಾ ಅವರು ತಮ್ಮ ರುಜುವಾತುಗಳನ್ನು ಇತರರೊಂದಿಗೆ ಹಂಚಿಕೊಂಡಿದ್ದಕ್ಕಾಗಿ ಮತ್ತು ಉದ್ಯಮಿಯೊಬ್ಬರಿಂದ ಉಡುಗೊರೆಗಳನ್ನು ಸ್ವೀಕರಿಸಿದ ಆರೋಪದ ಮೇಲೆ ಅವರನ್ನು ಶುಕ್ರವಾರ ಲೋಕಸಭೆಯು ಉಚ್ಚಾಟಿಸಿದೆ.
ಮಹುವಾ ಮೊಯಿತ್ರಾ ಉಚ್ಛಾಟನೆ ಸಂಬಂಧ ಶುಕ್ರವಾರ ಕೆಳಮನೆಯಲ್ಲಿ ನೈತಿಕ ಸಮಿತಿಯ ವರದಿಯ ಮೇಲೆ ಮತದಾನ ನಡೆಸಲಾಯಿತು. ಸ್ಪೀಕರ್ ಧ್ವನಿ ಮತದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಯಿತು. ಪ್ರತಿಪಕ್ಷದ ನಾಯಕರು ವರದಿಯ ಅಧ್ಯಯನಕ್ಕೆ ಹೆಚ್ಚಿನ ಕಾಲಾವಕಾಶವನ್ನು ಕೋರಿದ್ದರು ಮತ್ತು ಮೊಯಿತ್ರಾ ಅವರಿಗೆ ಮಾತನಾಡಲು ಅವಕಾಶ ನೀಡುವಂತೆ ಸ್ಪೀಕರ್ ಅವರನ್ನು ಕೇಳಿದರು. ಆದರೆ ಸದನದಲ್ಲಿ ಮಾತನಾಡಲು ಸ್ಪೀಕರ್ ಅವಕಾಶ ನೀಡಲಿಲ್ಲ.

ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಮಹುವಾ ಮೊಯಿತ್ರಾ ಅವರ ವಿರುದ್ಧ ನೈತಿಕ ಸಮಿತಿಯ ಶಿಫಾರಸುಗಳ ಕುರಿತು ಸದನದಲ್ಲಿ ಮಾತನಾಡಲು ಶುಕ್ರವಾರ ಅವಕಾಶ ನೀಡಲಿಲ್ಲ. ಪ್ಯಾನೆಲ್ ಮೀಟ್ ನಲ್ಲಿ ಮಾತನಾಡಲು ಅವಕಾಶ ಸಿಕ್ಕಿದೆ ಎಂದರು. ಆದರೆ ವಿರೋಧ ಪಕ್ಷದ ನಾಯಕರು ಮಹುವಾ ಮೊಯಿತ್ರಾ ಅವರಿಗೆ ಮಾತನಾಡಲು ಮತ್ತು ಸ್ವತಃ ಸಮರ್ಥಿಸಿಕೊಳ್ಳಲು ಅವಕಾಶ ನೀಡಬೇಕೆಂದು ಒತ್ತಾಯಿಸಿದರು.
ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಮಾತನಾಡಿ, "ಸಂಸದೆ ಮಹುವಾ ಮೊಯಿತ್ರಾ ಅವರ ನಡವಳಿಕೆಯು ಸಂಸದರಾಗಿ ಅನೈತಿಕ ಮತ್ತು ಅಸಭ್ಯವಾಗಿದೆ ಎಂಬ ಸಮಿತಿಯ ತೀರ್ಮಾನಗಳನ್ನು ಈ ಸದನವು ಒಪ್ಪಿಕೊಳ್ಳುತ್ತದೆ. ಹಾಗಾಗಿ ಅವರು ಸಂಸದರಾಗಿ ಮುಂದುವರಿಯುವುದು ಸೂಕ್ತವಲ್ಲ ಎಂದರು.
ಲೋಕಸಭೆಯಿಂದ ಹೊರಹಾಕಿದ ಬೆನ್ನಲ್ಲೇ ಮಾತನಾಡಿದ ತೃಣಮೂಲ ನಾಯಕಿ ಮಹುವಾ ಮೊಯಿತ್ರಾ, ತನಗೆ ಅನ್ಯಾಯ ಮಾಡಲಾಗಿದೆ. ಇದು ಪ್ರತಿಪಕ್ಷಗಳನ್ನು ಹತ್ತಿಕ್ಕುವ ಮಾಡುವ ಪ್ರಯತ್ನವಾಗಿದೆ. ಸಮಿತಿಯು ಎಲ್ಲಾ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಅವರು ಆರೋಪಿಸಿದರು.
ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ, "ಮೊಯಿತ್ರಾ ಅವರನ್ನು ಉಚ್ಚಾಟಿಸುವ ಅಧಿಕಾರ ಸದನಕ್ಕೆ ಇಲ್ಲ. ಒಂದು ಬಾಧಿತ ವ್ಯಕ್ತಿಯನ್ನು ಕೇಳಿದಾಗ ಮಾತ್ರ ನ್ಯಾಯಯುತ ವಿಚಾರಣೆ ಇರುತ್ತದೆ. ಬಾಧಿತ ವ್ಯಕ್ತಿಯನ್ನು ಕೇಳದಿದ್ದರೆ, ಯಾವುದೇ ನ್ಯಾಯಯುತ ವಿಚಾರಣೆ ಸಾಧ್ಯವಿಲ್ಲ. ಇಂದು ನಾವು ವ್ಯಕ್ತಿಯ ಹಕ್ಕನ್ನು ನಿರ್ಧರಿಸುತ್ತಿದ್ದೇವೆ. ನಾವು ಯಾವಾಗ ಒಬ್ಬ ವ್ಯಕ್ತಿಯ ಹಕ್ಕನ್ನು ನಿರ್ಧರಿಸುವಾಗ, ನಾವೆಲ್ಲರೂ ಅರೆ ನ್ಯಾಯಾಂಗ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ನಾನು ನಿಮ್ಮನ್ನು ವಿನಂತಿಸುತ್ತೇನೆ, ದಯವಿಟ್ಟು ಮಹುವಾ ಮೊಯಿತ್ರಾ ಅವರ ಮಾತುಗಳನ್ನು ಕೇಳಲು ಅನುಮತಿಸಿ" ಎಂದು ಹೇಳಿದರು.
ವರದಿಯ ಚರ್ಚೆಗೆ ಸದನಕ್ಕೆ ಸಮಯ ನೀಡದ ನಿರ್ಧಾರವನ್ನು ಬಿಜೆಪಿ ಸಂಸದರು ಸಮರ್ಥಿಸಿಕೊಂಡರು. ಯುಪಿಎ 1 ಸರ್ಕಾರದ ಆಳ್ವಿಕೆಯ ಉದಾಹರಣೆಯನ್ನು ಅವರು ಈ ವಿಷಯದಲ್ಲಿ ಮುಂದಿಟ್ಟರು. 2005 ರಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ, ವರದಿಯನ್ನು ಮಂಡಿಸಲಾಯಿತು. ಒಂದೇ ದಿನದಲ್ಲಿ 10 ಲೋಕಸಭಾ ಸದಸ್ಯರನ್ನು ಉಚ್ಚಾಟಿಸಲಾಯಿತು ಎಂದು ಬಿಜೆಪಿ ಸಂಸದ ಹಿನಾ ಗಾವಿತ್ ಮಹುವಾ ಮೊಯಿತ್ರಾ ಉಚ್ಛಾಟನೆ ಬಗ್ಗೆ ಹೇಳಿದರು.
ಲೋಕಸಭೆಯು ವರದಿಯನ್ನು ಚರ್ಚಿಸುತ್ತಿದ್ದಂತೆ, ಟಿಎಂಸಿ ಸಂಸದ ಸುದೀಪ್ ಬಂಡೋಪಾಧ್ಯಾಯ ಅವರು ಮಹುವಾ ಮೊಯಿತ್ರಾ ಅವರಿಗೆ ಸದನದ ಮುಂದೆ ತನ್ನ ಪರವಾಗಿ ಮಂಡಿಸಲು ಅವಕಾಶ ನೀಡಬೇಕೆಂದು ವಿನಂತಿಸಿದರು. ನಾನು ಪ್ರಸ್ತಾಪಿಸುವ ವಿಷಯ ನನ್ನ ಪಕ್ಷದ ವಕ್ತಾರ ಮಹುವಾ ಮೊಯಿತ್ರಾ ಅವರ ಮೇಲೆ ಆರೋಪವಿದೆ. ಸುಳ್ಳು ಆರೋಪಗಳನ್ನು ಮಾಡಲಾಗಿದೆ. ಅದು ನಿಜವೋ ತಪ್ಪೋ, ಅದನ್ನು ಅವರೇ ಮಾತನಾಡಲಿ" ಎಂದು ಹೇಳಿದರು. ಆದರೆ ಅದಕ್ಕೆ ಅವಕಾಶ ನೀಡಲಿಲ್ಲ.
-
ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದಲ್ಲಿ CSR ರಾಷ್ಟ್ರೀಯ ಸಮಾವೇಶ: ವಿಕಸಿತ ಭಾರತ ಚರ್ಚೆ -
Gold Rate: ಬಂಗಾರ ಮತ್ತಷ್ಟು ದುಬಾರಿ: 16,000 ರೂ. ದಾಟಿದ ಚಿನ್ನ, ಬೆಳ್ಳಿ ಬೆಲೆ ಕೂಡ ಏರಿಕೆ, ಇಲ್ಲಿದೆ ಇಂದಿನ ದರ ವಿವರ -
ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆ ಬೆನ್ನಲ್ಲೇ ಬೆಂಗಳೂರಿನ ಹೋಟೆಲ್ಗಳಲ್ಲಿ ಆಹಾರ ದರ ಏರಿಸಲು ಚಿಂತನೆ -
ಐಪಿಎಲ್ 2026ಕ್ಕೆ ಮುಹೂರ್ತ ಫಿಕ್ಸ್: ಇಲ್ಲಿದೆ ಮಾಹಿತಿ -
ಎಲ್ಪಿಜಿ ಸಿಲಿಂಡರ್ ಪೂರೈಕೆ ಸ್ಥಗಿತ: ನಾಳೆಯಿಂದ ಬೆಂಗಳೂರಿನಾದ್ಯಂತ ಹೋಟೆಲ್ಗಳು ಬಂದ್ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ












Click it and Unblock the Notifications