ಬಾಂಗ್ಲಾದೇಶ ಬಡಿದಾಟದ ಪರಿಣಾಮ ಭಾರತಕ್ಕೆ ಭರ್ಜರಿ ಲಾಭ! ಹೇಗೆ ಗೊತ್ತಾ?
ಭಾರತದ ಸಹಾಯದಿಂದ ಸ್ವಾತಂತ್ರ್ಯ ಪಡೆದು, ಭಾರತದ ಸಹಾಯದಿಂದಲೇ ಉದ್ಯಮಗಳನ್ನ ಕಟ್ಟಿ ಬೆಳೆಸುತ್ತಿದ್ದ ಬಾಂಗ್ಲಾದೇಶ ಈಗ ಅನಾಥವಾಗಿದೆ. ಅದರಲ್ಲೂ ಭಾರತವನ್ನು ಬಿಟ್ಟರೆ ಬಾಂಗ್ಲಾದೇಶದಲ್ಲೇ ಗಾರ್ಮೆಂಟ್ಸ್ ಉದ್ಯಮ ಬೃಹತ್ ಮಟ್ಟದಲ್ಲಿ ಬೆಳೆದಿತ್ತು. ಆದರೆ ಇದೀಗ, ಕೆಲವರು ಮಾಡಿದ ತಪ್ಪಿಗೆ ಹಲವರ ಜೀವನ ಹಾಳಾಗಿ ಹೋಗಿದೆ. ಅದು ಏನೆಂದರೆ ಬಾಂಗ್ಲಾದ ನೆಲದಲ್ಲಿ ಸ್ಥಾಪನೆ ಆಗಿದ್ದ ಗಾರ್ಮೆಂಟ್ಸ್ ಸಂಸ್ಥೆಗಳು ಒಂದೊಂದಾಗಿ ಬಾಗಿಲು ಬಡಿಯುತ್ತಿವೆ! ಅಲ್ಲದೆ ಈ ಗಾರ್ಮೆಂಟ್ಸ್ ಕಂಪನಿಗಳು ಮರಳಿ ಭಾರತದ ಕಡೆಗೆ ಓಡೋಡಿ ಬರುತ್ತಿವೆಯಂತೆ.
ಬಾಂಗ್ಲಾದೇಶ ಕಳೆದ ಕೆಲವು ವರ್ಷಗಳಿಂದ, ಜವಳಿ ಉದ್ಯಮದ ರಾಜಧಾನಿ ಆಗುವ ಕನಸು ಕಂಡಿತ್ತು. ಯಾಕಂದ್ರೆ, ಗಾರ್ಮೆಂಟ್ಸ್ ಕಂಪನಿಗಳು ಹೆಚ್ಚಾಗಿ ಬಾಂಗ್ಲಾದೇಶಕ್ಕೆ ಹೋಗಿ ತಮ್ಮ ಉದ್ಯಮ ಆರಂಭ ಮಾಡುತ್ತಿದ್ದವು. ಭಾರತದಿಂದ ಕೂಡ ಹಲವು ಕಂಪನಿಗಳು ಹೀಗೆ ಎಸ್ಕೇಪ್ ಆಗಿದ್ದ ಉದಾಹರಣೆ ಕೂಡ ಇದೆ. ಯಾಕಂದ್ರೆ ಬಾಂಗ್ಲಾದೇಶದಲ್ಲಿ ಆಗ ಅಧಿಕಾರಿ ನಡೆಸಿದ್ದ ಹಸೀನಾ ಅವರ ಸರ್ಕಾರ ಎಲ್ಲಾ ರೀತಿಯ ಸೌಲಭ್ಯ ನೀಡಿತ್ತು. ಅಲ್ಲದೆ ಗಾರ್ಮೆಂಟ್ಸ್ ಕಂಪನಿಗಳ ನಿರ್ವಹಣೆಗೆ ಬೇಕಾದ ವ್ಯವಸ್ಥೆ ಕೂಡ ಕಲ್ಪಿಸಲಾಗಿತ್ತು. ಹೀಗಿದ್ದಾಗ ಕೆಲವು ದಿನಗಳ ಹಿಂದೆ ಕೋಟ್ಯಂತರ ಬಾಂಗ್ಲಾದೇಶದ ಪ್ರಜೆಗಳ ಕನಸಿಗೆ ಬೆಂಕಿ ಬಿದ್ದಿತ್ತು.

ಮೀಸಲಾತಿ ಚರ್ಚೆಯಿಂದಲೇ ಬೆಂಕಿ!
ಬಾಂಗ್ಲಾದೇಶದ ಪರಿಸ್ಥಿತಿ ಈಗಲೂ ಬೂದಿ ಮುಚ್ಚಿದ ಕೆಂಡದ ರೀತಿ ಇದ್ದು, ಆತಂಕ ಇದೆ. ಅಷ್ಟಕ್ಕೂ, ನೆಮ್ಮದಿಯಾಗಿದ್ದ ಬಾಂಗ್ಲಾದೇಶದ ನೆಮ್ಮದಿ ಹಾಳು ಮಾಡಿದ್ದೇ ಮೀಸಲಾತಿ ಚರ್ಚೆ. 1971ರ ಬಾಂಗ್ಲಾ ವಿಮೋಚನಾ ಹೋರಾಟದಲ್ಲಿ ಭಾಗವಹಿಸಿದ್ದ ಹೋರಾಟಗಾರರಿಗೆ ಸರ್ಕಾರದ ಉದ್ಯೋಗದಲ್ಲಿ ಮೀಸಲಾತಿ ನೀಡುವ ನಿರ್ಧಾರವೇ ಬಾಂಗ್ಲಾದೇಶದ ನೆಮ್ಮದಿ ಹಾಳು ಮಾಡಿದೆ.
ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಸರ್ಕಾರದ ನಿರ್ಧಾರ ವಿರೋಧಿಸಿ ಮೊದಲಿಗೆ ಪ್ರತಿಭಟನೆ ಶುರು ಮಾಡಿದ್ದ ವಿದ್ಯಾರ್ಥಿ ಸಂಘಟನೆಗಳು, ಆ ನಂತರ ಹಿಂಸಾಚಾರಕ್ಕೆ ಇಳಿದವು. ಹೀಗೆ ಶುರು ಆಗಿದ್ದ ಕಿತ್ತಾಟ ಕೊನೆಗೆ ದೊಡ್ಡ ಹಂತಕ್ಕೆ ಬಂದು ನಿಂತು ಬಾಂಗ್ಲಾದೇಶದ ಗಾರ್ಮೆಂಟ್ಸ್ & ಇತರ ಉದ್ಯಮಗಳ ಮೇಲೂ ಭಾರಿ ದೊಡ್ಡ ಪರಿಣಾಮ ಬೀರಿದೆ.
ಆರ್ಥಿಕವಾಗಿ ಬೀದಿಗೆ ಬೀಳುತ್ತಿದೆ ಬಾಂಗ್ಲಾ?
ಬಾಂಗ್ಲಾದೇಶದ ಗಾರ್ಮೆಂಟ್ಸ್ ಉದ್ಯಮಿಗಳು ಯಾವಾಗ ಹಿಂಸಾಚಾರದ ಪರಿಣಾಮ ನಷ್ಟದ ಸುಳಿಗೆ ಸಿಲುಕಿದರೋ, ಆಗ ನೆನಪಾಗಿದ್ದು ಭಾರತ. ಯಾಕಂದ್ರೆ ಭಾರತದಲ್ಲಿ ಅವರಿಗೆ ಭಾರಿ ಸೌಲಭ್ಯಗಳ ಜೊತೆಗೆ ನೆಮ್ಮದಿ ಕೂಡ ಸಿಕ್ಕಿತ್ತು. ಹೀಗಾಗಿ ಇದೀಗ ಭಾರತಕ್ಕೆ ವಾಪಸ್ ಬಂದು ತಮ್ಮ ಉದ್ಯಮಗಳನ್ನ ಕಟ್ಟಿಕೊಳ್ಳಲು ಅವರೆಲ್ಲಾ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಇದೇ ಸಮಯದಲ್ಲಿ ಬಾಂಗ್ಲಾದೇಶ ಆರ್ಥಿಕವಾಗಿ ಕೂಡ ಸಂಕಷ್ಟದ ಸುಳಿಗೆ ಸಿಲುಕುತ್ತಿದೆ. ಜನರು ಕೆಲಸ ಇಲ್ಲದೆ ನರಳಾಡುವ ಪರಿಸ್ಥಿತಿ ಎದುರಾಗುತ್ತಿದೆ. ಇದು ಜಾಗತಿಕ ಮಟ್ಟದಲ್ಲಿ ಸೌಂಡ್ ಮಾಡುವ ಜೊತೆಗೆ, ಬಾಂಗ್ಲಾದೇಶದ ಆರ್ಥಿಕತೆ ಬೀದಿಪಾಲು ಮಾಡುತ್ತಿದೆ, ಎಂಬ ಗಂಭೀರ ಆರೋಪ ಕೂಡ ಕೇಳಿಬಂದಿದೆ.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ












Click it and Unblock the Notifications