Get Updates
Get notified of breaking news, exclusive insights, and must-see stories!

video: ವೈಎಸ್‌ಆರ್‌ಟಿಪಿ ಮುಖ್ಯಸ್ಥೆ ಶರ್ಮಿಳಾ ರೆಡ್ಡಿ ಸಹಿತ ಕಾರನ್ನು ಎಳೆದೊಯ್ದ ಪೊಲೀಸರು

ಹೈದರಾಬಾದ್‌, ನವೆಂಬರ್‌ 29: ಮಂಗಳವಾರ ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ವೈಎಸ್‌ಆರ್‌ಟಿಪಿ ಮುಖ್ಯಸ್ಥೆ ಶರ್ಮಿಳಾ ರೆಡ್ಡಿ ಅವರ ಕಾರನ್ನು ಪೊಲೀಸರು ಕ್ರೇನ್ ಸಹಾಯದಿಂದ ಎಳೆದುಕೊಂಡು ಹೋದ ಘಟನೆ ನಡೆದಿದೆ.

ಶರ್ಮಿಳಾ ರೆಡ್ಡಿ ಅವರು ನಿನ್ನೆ ಟಿಆರ್‌ಎಸ್ ಕಾರ್ಯಕರ್ತರು ತಮ್ಮ ಮೇಲೆ ನಡೆಸಿದ ದಾಳಿಯನ್ನು ವಿರೋಧಿಸಿ ಸಿಎಂ ಕೆಸಿಆರ್ ಅವರ ಕಚೇರಿ ಮತ್ತು ನಿವಾಸ ಪ್ರಗತಿ ಭವನಕ್ಕೆ ಹೋಗಲು ಪ್ರಯತ್ನಿಸಿದ್ದರು. ಸೋಮಾಜಿಗುಡದಿಂದ ಪ್ರಗತಿ ಭವನಕ್ಕೆ ತೆರಳಿ ಸಿಎಂ ನಿವಾಸಕ್ಕೆ ತೆರಳಲು ಯತ್ನಿಸಿದ ಶರ್ಮಿಳಾ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆಕೆಯನ್ನು ಸ್ಥಳೀಯ ಪೊಲೀಸ್ ಠಾಣೆಗೆ ಸ್ಥಳಾಂತರಿಸಲಾಯಿತು.

ಸೋಮವಾರ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಸಹೋದರಿ ವೈಎಸ್ ಶರ್ಮಿಳಾ ಅವರನ್ನು ತೆಲಂಗಾಣದ ವಾರಂಗಲ್ ಜಿಲ್ಲೆಯಲ್ಲಿ ಅವರ ಬೆಂಬಲಿಗರು ಮತ್ತು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಕಾರ್ಯಕರ್ತರ ನಡುವಿನ ಘರ್ಷಣೆಯ ನಂತರ ಬಂಧಿಸಲಾಯಿತು. ಅದೇ ದಿನ, ವೈಎಸ್‌ಆರ್‌ಟಿಪಿ ಮುಖ್ಯಸ್ಥೆ ಶರ್ಮಿಳಾ ರೆಡ್ಡಿ ಅವರ ಬೆಂಗಾವಲು ವಾಹನದಲ್ಲಿದ್ದ ವೈಎಸ್‌ಆರ್‌ಟಿಪಿ ಪ್ರಚಾರದ ಬಸ್‌ಗೆ ಕೆಲವರು ಬೆಂಕಿ ಹಚ್ಚಲು ಯತ್ನಿಸಿದ್ದರು.

The police towed the car with YSRTP chief Sharmila Reddy

ಬಸ್‌ಗೆ ಬೆಂಕಿ ಹಚ್ಚಲು ಯತ್ನಿಸಿದ ಜನರು ಸ್ಥಳದಿಂದ ಪರಾರಿಯಾಗಿದ್ದಾರೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ನರಸಂಪೇಟೆ ಎಸಿಪಿ ಆರ್.ವಿ ಫಣೀಂದರ್ ಮಾಹಿತಿ ನೀಡಿದ್ದಾರೆ. ಶರ್ಮಿಳಾ ಅವರು ಪ್ರಜಾ ಪ್ರಸ್ಥಾನಂ ಪಾದಯಾತ್ರೆಯ ವೇಳೆ ವಿಶ್ರಾಂತಿ ಪಡೆಯಲು ಬಳಸುತ್ತಿದ್ದ ಬಸ್ ಮೇಲೆ ಆಡಳಿತಾರೂಢ ಟಿಆರ್‌ಎಸ್ ಪಕ್ಷದ ಸದಸ್ಯರು ದಾಳಿ ನಡೆಸಿ ಸುಟ್ಟು ಹಾಕಿದ್ದಾರೆ ಎಂದು ವೈಎಸ್‌ಆರ್‌ಟಿಪಿ ಆರೋಪಿಸಿದೆ. ಗುಂಪು ವೈಎಸ್‌ಆರ್ ತೆಲಂಗಾಣ ಪಕ್ಷದ ಮುಖಂಡರ ಕಾರುಗಳಿಗೂ ಹಾನಿಯಾಗಿದೆ. ವಾರಂಗಲ್ ಜಿಲ್ಲೆಯ ಚೆನ್ನರಾವ್ ಪೇಟೆ ಮಂಡಲ ವ್ಯಾಪ್ತಿಯ ಲಿಂಗಗಿರಿ ಗ್ರಾಮದ ಬಳಿ ಈ ಘಟನೆ ನಡೆದಿದೆ ಎನ್ನಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+