ಅಬ್ಬಬ್ಬಾ.. ಭಾರತೀಯ ರೈಲ್ವೆ ಪ್ರಯಾಣಿಕರಿಗೆ ಇದೆಂಥಾ ಮೋಸ
ಬೆಂಗಳೂರು, ಮಾ. 19: ರೈಲ್ವೆ ಟಿಕೆಟ್ ಬುಕಿಂಗ್ ಮಾಡಿರುತ್ತಿರಿ. ಅದರ ಕನ್ ಫರ್ಮ್ ಗೆಂದು ಬೆಳಗ್ಗೆ 8 ಗಂಟೆಗೆ ಲಾಗ್ ಇನ್ ಆದರೆ ಬೆಚ್ಚಿಬೀಳಬೇಕಾಗುತ್ತದೆ. ಎಲ್ಲ ಸೀಟುಗಳು ಒಮ್ಮೆಲೆ ಭರ್ತಿಯಾಗಿರುತ್ತವೆ. ಈ ಅನುಭವ ರೈಲ್ವೆ ಪ್ರಯಾಣಿಕರಿಗೆ ಆಗಿರಲೇಬೇಕು.
ಹಿಂದಿನ ದಿನ ನೋಡಿದಾಗ ಖಾಲಿ ಇದ್ದ ಎಲ್ಲ ಸೀಟುಗಳು ಕ್ಷಣ ಮಾತ್ರದಲ್ಲಿ ಬುಕ್ ಆಗಿರುತ್ತದೆ. ಈ ಎಲ್ಲ ಕೆಲಸಗಳು ಬೆಳಗ್ಗೆ 8 ಗಂಟೆಯುಂದ 8 ಗಂಟೆ 1 ನಿಮಿಷ ಅಂದರೆ ಕೇವಲ ಒಂದು ನಿಮಿಷದ ಅವಧಿಯಲ್ಲಿ ನಡೆದಿರುತ್ತದೆ ಎಂಬುದನ್ನು ನಂಬಲೇಬೇಕು[ಇನ್ನೂ 4 ತಿಂಗಳ ಮೊದಲೇ ರೈಲ್ವೆ ಟಿಕೆಟ್ ಬುಕ್ ಮಾಡಿ]

ಹೌದು. ಇಂಥದ್ದೊಂದು ಆತಂಕಾರಿ ಮಾಹಿತಿಯನ್ನು ಗುಪ್ತಚರ ವರದಿಯೊಂದು ನೀಡಿದ್ದು ಪ್ರತಿದಿನ ನಾಲ್ಕು ಸಾವಿರಕ್ಕೂ ಅಧಿಕ ಟಿಕೆಟ್ ಗಳನ್ನು ಬ್ಲ್ಯಾಕ್ ಟಿಕೆಟ್ ಮಾದರಿಯಲ್ಲಿ ಮಾರಿಕೊಳ್ಳಲಾಗುತ್ತಿದೆ.[ರೈಲ್ವೆ ಸ್ಪೆಷಲ್ : 12 ದಿನಗಳ ಯಾತ್ರೆಗೆ 9,900 ರು]
ಇದು ಹೇಗೆ ಸಾಧ್ಯ?
ಮೊದಲೇ ಟಿಕೆಟ್ ಬುಕ್ ಮಾಡಿದ್ದರೆ ಪ್ರಯಾಣಿಕ ಸಮಗ್ರ ಮಾಹಿತಿಯನ್ನು ನೀಡಿರಬೇಕಾಗುತ್ತದೆ. ಇದನ್ನೇ ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿರುವ ವಂಚಕರು ಯಾವುದೋ ಹೆಸರುವಾಸಿಯಲ್ಲದ ರೈಲಿನ ಟಿಕೆಟ್ ಖರೀದಿ ಮಾಡಿರುತ್ತಾರೆ. ಈ ವೇಳೆ ಅವರ ಸಮಗ್ರ ಅವರ ಎಲ್ಲ ದಾಖಲಾಗಿರುತ್ತದೆ.
ಟಿಕೆಟ್ ಕೌಂಟರ್ ಆರಂಭಾದ ತಕ್ಷಣ ಇದೇ ಟಿಕೆಟ್ ಪಿಎನ್ ಆರ್ ನಂಬರ್ ಬದಲಿಸಿ ಜನಪ್ರಿಯ ರೈಲುಗಳ ಅಂದರೆ ರಾಜಧಾನಿ ಸೇರಿದಂತೆ ಲಾಂಗ್ ರೂಟ್ ನ ರೈಲಿನ ಟಿಕೆಟ್ ಆಗಿ ಬದಲಾವಣೆ ಮಾಡಿಕೊಡಲಾಗುತ್ತದೆ. ಪ್ರಯಾಣಿಕರ ಮಾಹಿತಿ ಈ ಹಿಂದೆಯೇ ದಾಖಲಾಗಿರುವುದರಿಂದ ಹೊಸದಾಗಿ ನೋಂದಣಿ ಮಾಡುವ ಅಗತ್ಯ ಇರುವುದಿಲ್ಲ. ಈ ಎಲ್ಲ ಕೆಲಸಗಳು ಕೇವಲ ಒಂದು ನಿಮಿಷದ ಅವಧಿಯಲ್ಲಿ ನಡೆದು ಹೋಗಿರುತ್ತದೆ.
ಮಧ್ಯವರ್ತಿಗಳು ಒಂದು ದಿನದ ಹಿಂದೆಯೇ ಯಾವುದೋ ಖಾಲಿ ಇರುವ ರೈಲಿನ ಟಿಕೆಟ್ ಬುಕ್ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ರೈಲ್ವೆ ಇಲಾಖೆ ಕ್ಲರ್ಕ್ ಜತೆ ಮೊದಲೆ ಹೊಂದಾಣಿಕೆ ಮಾಡಿಕೊಂಡಿರುವುದರಿಂದ ಮರುದಿನ ಬೆಳಗ್ಗೆ ಕೌಂಟರ್ ತೆರೆದ ತಕ್ಷಣ ದಲ್ಲಾಳಿ ಕೈಗೆ ಜನಪ್ರಿಯ ರೈಲಿನ ಟಿಕೆಟ್ ಲಭ್ಯವಾಗುತ್ತದೆ. ದಲ್ಲಾಳಿ ಇದನ್ನು ಆಮೇಲೆ ಹೆಚ್ಚಿನ ಬೆಲೆಗೆ ಮಾರಿಕೊಳ್ಳುತ್ತಾನೆ.
ಈ ಬಗ್ಗೆ ರೈಲ್ವೆ ಇಲಾಖೆ ಪರಿಹಾರ ತೆಗೆದುಕೊಳ್ಳಲು ಮುಂದಾಗಿದೆ. ಒಂದೇ ವಿಳಾಸ ನೀಡಿ ಪದೇ ಪದೇ ಟಿಕೆಟ್ ಬುಕ್ ಮಾಡಿ ಬದಲಾಯಿಸುವವರ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕಿ ತಪ್ಪಿತಸ್ಥರನ್ನು ಬಂಧಿಸಲಾಗುವುದು ಎಂದು ರೈಲ್ವೆ ಇಲಾಖೆ ಅಧಿಕಾರಿ ಶುಕ್ಲಾ ತಿಳಿಸಿದ್ದಾರೆ.
-
Vande Bharat Sleeper: ಉತ್ಪಾದನೆ ಗುರಿ ತಲುಪದ ಬೆಂಗಳೂರು-ಚೆನ್ನೈ ಕಂಪನಿಗಳು, ಸ್ಲೀಪರ್ ರೈಲು ವಿತರಣೆ ವಿಳಂಬ -
ಭಾರತದ ಏಕೈಕ ರೈಲು ಸಂಪರ್ಕವಿಲ್ಲದ ರಾಜ್ಯ ಸಿಕ್ಕಿಂ: ಕಾರಣ ಮತ್ತು ಪ್ರಯಾಣ ಮಾರ್ಗಗಳ ವಿವರ -
Mysuru-Nanjangud special train: ನಂಜನಗೂಡು ದೊಡ್ಡ ಜಾತ್ರೆಗೆ ಮೈಸೂರಿನಿಂದ ವಿಶೇಷ ರೈಲು ಸೇವೆ: ಸಚಿವ ವಿ.ಸೋಮಣ್ಣ ಮಾಹಿತಿ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ












Click it and Unblock the Notifications