ಅಸ್ಸಾಂ ಉಗ್ರದಾಳಿಯಲ್ಲಿ ತನ್ನ ಕೈವಾಡವಿಲ್ಲ ಎಂದ ಉಲ್ಫಾ
ಗುವಾಹಟಿ, ನವೆಂಬರ್ 02: ಅಸ್ಸಾಮಿನ ತಿನ್ಸುಕಿಯಾ ಜಿಲ್ಲೆಯಲ್ಲಿ ನಡೆದ ಐವರ ಹತ್ಯೆ ಪ್ರಕರಣದಲ್ಲಿ ತನ್ನ ಕೈವಾಡವಿಲ್ಲ ಎಂದು ನಿಷೇಧಿತ ಉಲ್ಫಾ(United Liberation Front of Asom ) ಸಂಘಟನೆ ಸ್ಪಷ್ಟಪಡಿಸಿದೆ.
ಗುರುವಾರ ಸಂಜೆ ಇಲ್ಲಿನ ದೊಲಾಸಾದಿಯಾ ಸೇತುವೆಯ ಬಳಲಿಯ ಹಳ್ಳಿಯೊಂದಕ್ಕೆ ಬಂದ ಗುಂಪೊಂದು,ಮನೆಯೊಳಗಿದ್ದ ಜನರನ್ನು ಹೊರಗೆ ಕರೆದು ಏಕಾಏಕಿ ಗುಂದಿನ ದಾಳಿ ಆರಂಭಿಸಿತ್ತು. ದಾಳಿಯ ನಂತರ ಈ ಗುಂಪು ಪರಾರಿಯಾಗಿತ್ತು.
ಜಮ್ಮು-ಕಾಶ್ಮೀರ: ಉಗ್ರರಿಂದ ಬಿಜೆಪಿ ಮುಖಂಡನ ಬರ್ಬರ ಹತ್ಯೆ
ಈ ಘಟನೆಯಲ್ಲಿ ಉಲ್ಫಾ ಉಗ್ರರ ಕೈವಾಡವಿರಬಹುದೆಂದು ಶಂಕಿಸಲಾಗಿತ್ತು. ಆದರೆ ಪಿಟಿಐ(ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ)ಗೆ ಮಾಡಿದ ಇ ಮೇಲ್ ವೊಂದರಲ್ಲಿ, 'ಈ ಕೃತ್ಯದಲ್ಲಿ ನಮ್ಮ ಸಂಘಟನೆಯ ಕೈವಾಡವಿಲ್ಲ' ಎಂದು ಆದು ಸ್ಪಷ್ಟಪಡಿಸಿದೆ.
ಕಳೆದ ರಾತ್ರಿ ನಡೆದ ಈ ಘಟನೆಯಲ್ಲಿ ಒಂದೇ ಕುಟುಂಬದ ಮೂವರು ಸೇರಿದಂತೆ ಒಟ್ಟು ಐವರ ಹತ್ಯೆಯಾಗಿತ್ತು.
ಜಮ್ಮು-ಕಾಶ್ಮೀರದಲ್ಲಿ ಎನ್ ಕೌಂಟರ್ ದಾಳಿ: 3 ಉಗ್ರರ ಹತ್ಯೆ
ಘಟನೆಯ ಕುರಿತು ಪ್ರತಿಕ್ರಿಯೆ ನೀಡಿದ್ದ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನಾವಾಲ್, 'ಇಂಥ ಹೇಯಕೃತ್ಯ ಎಸಗಿದ ಹೇಡಿಗಳ ವಿರುದ್ಧ ನಾವು ಕಠಿಣ ಕ್ರಮ ಕೈಗೊಳ್ಳುತ್ತೇವೆ. ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಯ್ದುಕೊಳ್ಳುವಂತೆ ನಾನು ಸಂಬಂಧಪಟ್ಟ ಇಲಾಖೆಗಳಿಗೆ ತಿಳಿಸಿದ್ದೇನೆ' ಎಂದಿದ್ದರು.