Get Updates
Get notified of breaking news, exclusive insights, and must-see stories!

ಗರ್ಭಸಂಸ್ಕಾರ: ಗರ್ಭಿಣಿಯರು ರಾಮಾಯಣ ಓದಬೇಕು ಎಂದ ತಮಿಳಿಸೈ ಸೌಂದರರಾಜನ್

ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢ ಮಕ್ಕಳನ್ನು ಪಡೆಯಲು ಗರ್ಭಿಣಿಯರು ರಾಮಾಯಣವನ್ನು ಹೆಚ್ಚು ಓದಬೇಕು ಮತ್ತು ಸುಂದರಕಾಂಡವನ್ನು ಪಠಣ ಮಾಡಬೇಕು ಎಂದು ತೆಲಂಗಾಣ ರಾಜ್ಯಪಾಲರಾದ ತಮಿಳಿಸೈ ಸೌಂದರರಾಜನ್ ಭಾನುವಾರ ಹೇಳಿದ್ದಾರೆ. ಸ್ತ್ರೀರೋಗತಜ್ಞರೂ ಆಗಿರುವ ಎಂಎಸ್ ಸೌಂದರರಾಜನ್ ಆರ್‌ಎಸ್‌ಎಸ್-ಸಂಯೋಜಿತ ಸಂಸ್ಥೆಯ 'ಗರ್ಭ ಸಂಸ್ಕಾರ' ಕಾರ್ಯಕ್ರಮವನ್ನು ಪ್ರಾರಂಭಿಸುವ ಸಂದರ್ಭದಲ್ಲಿ ಈ ಹೇಳಿಕೆ ನೀಡಿದ್ದಾರೆ.

ಸಂವರ್ಧಿನಿ ನ್ಯಾಸ್ ಅಭಿವೃದ್ಧಿಪಡಿಸಿದ 'ಗರ್ಭ ಸಂಸ್ಕಾರ' ಕಾರ್ಯಕ್ರಮದ ಅಡಿಯಲ್ಲಿ, ಸಂಸ್ಥೆಗೆ ಸಂಬಂಧಿಸಿದ ವೈದ್ಯರು ಗರ್ಭಿಣಿಯರಿಗೆ "ವೈಜ್ಞಾನಿಕ ಮತ್ತು ಸಾಂಪ್ರದಾಯಿಕ" ಔಷಧಿಗಳ ಮಿಶ್ರಣವನ್ನು ಒದಗಿಸುತ್ತಾರೆ, ಇದರಿಂದಾಗಿ ಗರ್ಭಿಣಿಯರು "ಸಂಸ್ಕೃತಿ ಮತ್ತು ದೇಶಭಕ್ತ" ಶಿಶುಗಳಿಗೆ ಜನ್ಮ ನೀಡುತ್ತಾರೆ ಎಂದು ಸಂಸ್ಥೆ ಹೇಳಿಕೊಂಡಿದೆ.

Tamilisai Soundararajan

ಭಗವದ್ಗೀತೆಯಂತಹ ಧಾರ್ಮಿಕ ಗ್ರಂಥಗಳ ಓದುವಿಕೆ, ಸಂಸ್ಕೃತ ಮಂತ್ರಗಳ ಪಠಣ ಮತ್ತು ಯೋಗದ ಅಭ್ಯಾಸ ಮಾಡುವಂತೆ ಸಲಹೆ ನೀಡಲಾಗುತ್ತದೆ. ಇದನ್ನು ಗರ್ಭಧಾರಣೆಯ ಪೂರ್ವದಿಂದ ಆರಂಭಿಸಿ, ಹೆರಿಗೆಯ ಹಂತದಲ್ಲಿ ಮತ್ತು ಮಗುವಿಗೆ ಎರಡು ವರ್ಷ ಆಗುವವರೆಗೆ ಮುಂದುವರೆಸುವಂತೆ ಸಲಹೆ ನೀಡಲಾಗಿದೆ.

'ಗರ್ಭ ಸಂಸ್ಕಾರ' ಕಾರ್ಯಕ್ರಮದ ಪ್ರಕಾರ, ಗರ್ಭಿಣಿಯರ ಕುಟುಂಬದ ಸದಸ್ಯರಿಗೆ ಕಾರ್ಯಕ್ರಮದ ಸಮಯದಲ್ಲಿ ಮಾರ್ಗದರ್ಶನ ನೀಡಲಾಗುತ್ತದೆ. ಸಂವರ್ಧಿನಿ ನ್ಯಾಸ್, ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ (RSS) ಸಮಾನಾಂತರವಾಗಿರುವ ಮಹಿಳಾ ಸಂಘಟನೆಯಾದ ರಾಷ್ಟ್ರ ಸೇವಿಕಾ ಸಂಘದ ಒಂದು ಭಾಗವಾಗಿದೆ.

ಸಂವರ್ಧಿನಿ ನ್ಯಾಸ್ ಬಗ್ಗೆ ಸೌಂದರರಾಜನ್ ಮೆಚ್ಚುಗೆ

ವರ್ಚುವಲ್ ಲಾಂಚ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸೌಂದರರಾಜನ್, 'ಗರ್ಭ ಸಂಸ್ಕಾರ' ಕಾರ್ಯಕ್ರಮದ ಮಾಡ್ಯೂಲ್ ಅನ್ನು ಅಭಿವೃದ್ಧಿಪಡಿಸುವಲ್ಲಿ ಸಂವರ್ಧಿನಿ ನ್ಯಾಸ್ ಪ್ರಯತ್ನ ಮಾಡುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದು ಮುಂದಿನ ದಿನಗಳಲ್ಲಿ ಉತ್ತಮ ಫಲಿತಾಂಶ ನೀಡುತ್ತದೆ ಎಂದು ಅವರು ಭವಿಷ್ಯ ನುಡಿದರು.

ಗ್ರಾಮೀಣ ಭಾಗದಲ್ಲಿ ಗರ್ಭಿಣಿ ಮಹಿಳೆಯರು ರಾಮಾಯಣ, ಮಹಾಭಾರತ ಇತರೆ ಮಹಾಕಾವ್ಯಗಳ ಜೊತೆಗೆ ಒಳ್ಳೆಯ ಕಥೆಗಳನ್ನು ಓದುವುದನ್ನು ನೋಡಿದ್ದೇವೆ. ವಿಶೇಷವಾಗಿ ತಮಿಳುನಾಡಿನಲ್ಲಿ ಗರ್ಭಿಣಿಯರು ಕಂಬ ರಾಮಾಯಣದ ಸುಂದರಕಾಂಡವನ್ನು ಕಲಿಯಬೇಕು ಎಂಬ ನಂಬಿಕೆ ಇದೆ ಎಂದರು. ಗರ್ಭಿಣಿಯರು "ಸುಂದರಕಾಂಡ" ಓದುವುದು ಮಗುವಿಗೆ ತುಂಬಾ ಒಳ್ಳೆಯದು ಎಂದರು.

"ಸುಂದರಕಾಂಡ" ಹಿಂದೂ ಮಹಾಕಾವ್ಯ "ರಾಮಾಯಣ" ದ ಒಂದು ಅಧ್ಯಾಯವಾಗಿದೆ, ಇದು ಹನುಮಂತನ ಸಾಹಸಗಳನ್ನು ಮತ್ತು ಅವನ ನಿಸ್ವಾರ್ಥತೆ, ಶಕ್ತಿ ಮತ್ತು ರಾಮನ ಮೇಲಿನ ಭಕ್ತಿಯನ್ನು ಚಿತ್ರಿಸುತ್ತದೆ ಎಂದು ಅವರು ಹೇಳಿದರು.

ಗರ್ಭಿಣಿಯರು ಯೋಗಾಭ್ಯಾಸ ಮಾಡಬೇಕು

ಗರ್ಭಾವಸ್ಥೆಯಲ್ಲಿ ಯೋಗಾಭ್ಯಾಸ ಮಾಡುವುದರಿಂದ ಗರ್ಭದಲ್ಲಿರುವ ತಾಯಿ ಮತ್ತು ಮಗುವಿನ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮವನ್ನು ಉತ್ತಮವಾಗಿಸುತ್ತದೆ ಮತ್ತು ಸಾಮಾನ್ಯ ಹೆರಿಗೆ ಆಗಲು ಸಹಾಯ ಮಾಡುತ್ತದೆ ಎಂದು ಹೇಳಿದರು.

'ಗರ್ಭ ಸಂಸ್ಕಾರ' ಕಾರ್ಯಕ್ರಮದ ಅನುಷ್ಠಾನದ ಮಾರ್ಗದರ್ಶನ ಮತ್ತು ಮೇಲ್ವಿಚಾರಣೆಗಾಗಿ ಎಂಟು ಸದಸ್ಯರ ಕೇಂದ್ರ ತಂಡವನ್ನು ರೂಪಿಸಲಾಗಿದೆ. ಕೇಂದ್ರ ತಂಡವು ಆಯುರ್ವೇದ, ಹೋಮಿಯೋಪತಿ ಮತ್ತು ಅಲೋಪತಿ ವೈದ್ಯರು ಮತ್ತು "ವಿಷಯ ಪರಿಣಿತರನ್ನು" ಒಳಗೊಂಡಿದೆ ಎಂದು ಹೇಳಲಾಗಿದೆ. ಗರ್ಭದಲ್ಲಿರುವ ಮಕ್ಕಳಿಗೆ ರಾಮಾಯಣ ಪಠಿಸುವ ಮೂಲಕ ಸಂಸ್ಕಾರವಂತರನ್ನಾಗಿ ಮಾಡಬಹುದೆಂದು ಅವರು ನಂಬಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+