ತಮಿಳುನಾಡು ಚುನಾವಣೆಯಲ್ಲಿ ಉಚಿತ ಯೋಜನೆಗಳ ಪೈಪೋಟಿ, ಗೆಲುವಿಗಾಗಿ ಭರ್ಜರಿ ಹೋರಾಟ ಶುರು | Tamil Nadu Election
ತಮಿಳುನಾಡು ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವೇ ಕೆಲವು ದಿನಗಳು ಬಾಕಿ ಉಳಿದಿದ್ದು, ಈ ಚುನಾವಣೆ ಗೆದ್ದು ಬೀಗಲು ರಾಜಕೀಯ ಪಕ್ಷಗಳ ನಾಯಕರು ನಾನಾ ರೀತಿಯ ರಣತಂತ್ರ ಹೆಣೆಯುತ್ತಾ ಇದ್ದಾರೆ. ತಮಿಳುನಾಡು ಸೇರಿದಂತೆ ಕೇರಳ, ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ರಾಜ್ಯದ ವಿಧಾನಸಭೆ ಚುನಾವಣೆ ಕೂಡ ಒಟ್ಟಿಗೆ ಬರಲಿದೆ. ಹೀಗಿದ್ದರೂ ತಮಿಳುನಾಡು ರಾಜ್ಯದ ಚುನಾವಣೆ ಮಾತ್ರ ಇದೀಗ ಭಾರಿ ಕುತೂಹಲ ಕೆರಳಿಸಿದೆ. ಇಲ್ಲಿ ಗೆಲುವಿಗಾಗಿ ಒಂದು ಕಡೆ ಬಿಜೆಪಿ ನೇತೃತ್ವದ ಎನ್ಡಿಎ ಒಕ್ಕೂಟ ಹಾಗೂ ಕಾಂಗ್ರೆಸ್ ಮತ್ತು ಡಿಎಂಕೆ ನೇತೃತ್ವದ ಒಕ್ಕೂಟದ ನಡುವೆ ಭಾರಿ ಸ್ಪರ್ಧೆ ಶುರುವಾಗಿದೆ. ಇದೇ ಸಮಯದಲ್ಲಿ ತಮಿಳುನಾಡು ಚುನಾವಣೆಯಲ್ಲಿ ಉಚಿತ ಯೋಜನೆಗಳ ಪೈಪೋಟಿ ಇಡೀ ದೇಶದ ಗಮನ ಸೆಳೆಯುತ್ತಿದೆ ಈಗ.
ದಕ್ಷಿಣ ಭಾರತದಲ್ಲಿ ಪ್ರಭಾವಿ ರಾಜ್ಯವಾಗಿರುವ ಕಾರಣಕ್ಕೆ ತಮಿಳುನಾಡು ಗೆಲ್ಲುವುದು ಎಲ್ಲಾ ಪಕ್ಷ & ರಾಜಕೀಯ ನಾಯಕರಿಗೆ ಪ್ರತಿಷ್ಠೆಯ ಪ್ರಶ್ನೆ. ಆದರೆ ಎನ್ಡಿಎ ಒಕ್ಕೂಟಕ್ಕೆ ತಮಿಳುನಾಡು ರಾಜ್ಯ ಪದೇ ಪದೇ ಕಬ್ಬಿಣದ ಕಡಲೆಯಾಗಿ ಪರಿಣಮಿಸುತ್ತಿದೆ. ಕಳೆದ ಬಾರಿಯ ವಿಧಾನಸಭೆ ಚುನಾವಣೆ ಕೂಡ ಈ ವಿಚಾರದಲ್ಲಿ ಎನ್ಡಿಎ ಒಕ್ಕೂಟಕ್ಕೆ ಸಾಕಷ್ಟು ಸವಾಲು ತಂದೊಡ್ಡಿತ್ತು. ಅದನ್ನೆಲ್ಲಾ ಎದುರಿಸಿ ಇನ್ನೇನು ಗೆದ್ದು ಬೀಗುವ ಲೆಕ್ಕಾಚಾರ ಹಾಕಿಕೊಂಡ ಸಮಯದಲ್ಲೇ ದೊಡ್ಡ ಸೋಲು ಎದುರಾಗಿತ್ತು. ಆದರೆ ಈ ಬಾರಿ ಗೆದ್ದೇ ಗೆಲ್ಲಬೇಕು ಎಂಬ ಹಠದಲ್ಲಿ ಎನ್ಡಿಎ ಇದೆ.

ಉಚಿತ ಯೋಜನೆಗಳ ಮಹಾಪೂರ
ಒಂದು ಕಡೆ ಡಿಎಂಕೆ ಸರ್ಕಾರ ಈಗ ಮಹಿಳೆಯರಿಗೆ ನೇರವಾಗಿ ಕಲೈನಾರ್ ಮಹಿಳಾ ಹಕ್ಕುಗಳ ಯೋಜನೆ ಅಡಿ, 1.31 ಕೋಟಿ ಮಹಿಳೆಯರ ಖಾತೆಗೆ ತಲಾ 5,000 ರೂ. ಜಮೆ ಮಾಡಿದೆ. ಹೀಗೆ ಇದರ ಜೊತೆಯಲ್ಲೇ ಇನ್ನಷ್ಟು ಉಚಿತ ಯೋಜನೆಗಳನ್ನು ಜಾರಿಗೆ ತರುವ ಚಿಂತನೆಯಲ್ಲಿ ಇದೆ. ಚುನಾವಣೆ ಘೋಷಣೆಯ ಮೊದಲು ಈ ಯೋಜನೆಗಳು ಜಾರಿಗೆ ಬರುವ ಸಾಧ್ಯತೆ ದಟ್ಟವಾಗಿದೆ. ಇದೇ ಸಮಯದಲ್ಲಿ ಮತ್ತೊಂದು ಕಡೆ ಎಐಎಡಿಎಂಕೆ ಮತ್ತು ಬಿಜೆಪಿ ನೇತೃತ್ವದ ಎನ್ಡಿಎ ಒಕ್ಕೂಟ ಕೂಡ ಉಚಿತ ಯೋಜನೆ ಪೈಪೋಟಿಗೆ ಇಳಿದಿದೆ. ಈಗಾಗಲೇ ಪುರುಷರಿಗೆ ಉಚಿತ ಬಸ್ ಸೇವೆ ಜೊತೆಯಲ್ಲಿ 25,000 ರೂಪಾಯಿ ಮಹಿಳೆಯರಿಗೆ ಭರ್ಜರಿ ಆಫರ್ ಕೊಡಲಾಗಿದ್ದು, ಸ್ಕೂಟರ್ ಖರೀದಿಗೆ ಈ ಹಣ ಕೊಡುವ ಭರವಸೆ ನೀಡಿದೆ ಎನ್ಡಿಎ ಒಕ್ಕೂಟ.
ಉಚಿತ ಯೋಜನೆಗಳ ಭಾರಿ ಪೈಪೋಟಿ
ತಮಿಳನಾಡು ರಾಜ್ಯದಲ್ಲಿ ಉಚಿತ ಯೋಜನೆಗಳು ಹಾಗೂ ಜನರನ್ನು ಸೆಳೆಯುವ ಈ ರೀತಿಯ ತಂತ್ರ ಹತ್ತಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಅದರಲ್ಲೂ ಕೇಂದ್ರದಲ್ಲಿ ಯಾವುದೇ ಸರ್ಕಾರವು ಅಧಿಕಾರಕ್ಕೆ ಬರಲಿ, ತಮಿಳುನಾಡು ರಾಜ್ಯಕ್ಕೆ ಅನುಕೂಲ ಆಗುತ್ತಲೇ ಬಂದಿದೆ ಎಂಬ ಚರ್ಚೆ ಕೂಡ ಇದೆ. ಹೀಗಿದ್ದಾಗ ಕಳೆದ ಬಾರಿ ಚುನಾವಣೆ ಗೆದ್ದಿರುವ ಡಿಎಂಕೆ ಪಕ್ಷಕ್ಕೆ ಈ ಬಾರಿ ಸೋಲು ತೋರಿಸಿ ಅಧಿಕಾರ ಪಡೆಯಲು ಎಐಎಡಿಎಂಕೆ ಮತ್ತು ಬಿಜೆಪಿ ನೇತೃತ್ವದ ಎನ್ಡಿಎ ಒಕ್ಕೂಟವು ಸಜ್ಜಾಗಿದೆ. ಆದರೆ ಇದು ಫಲ ನೀಡುತ್ತಾ? ಎಂಬುದನ್ನ ಕಾದು ನೋಡಬೇಕಿದೆ. ಅಲ್ಲಿಯ ತನಕ ಈ ರೀತಿ ಉಚಿತ ಯೋಜನೆ ವಾರ್ ನಿಲ್ಲುವುದು ಅನುಮಾನವೇ ಸರಿ ಎನ್ನಬಹುದು.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications