Suzlon Share Price: ಇಂದು ಸುಜ್ಲಾನ್ ಎನರ್ಜಿ ಷೇರುಗಳ ಶೇ.14ರಷ್ಟು ಜಿಗಿತ, ಷೇರುಪೇಟೆ ಅಪ್ಡೇಟ್ಸ್
ಬೆಂಗಳೂರು, ಮೇ 30: ಭಾರತೀಯ ಮೂಲದ ನವೀಕರಿಸಬಹುದಾದ ಇಂಧನ ಹಾಗೂ ಪವನ ವಿದ್ಯುತ್ ಉತ್ಪಾದಿಸುವ ಮಲ್ಟಿ ನ್ಯಾಷನಲ್ ಕಂಪನಿಯಾಗಿರುವ 'ಸುಜ್ಲಾನ್ ಎನರ್ಜಿ' (Suzlon Energy shares) ಷೇರು ಮಾರುಕಟ್ಟೆಯಲ್ಲಿ ಕಮಾಲ್ ಮಾಡುತ್ತಿದೆ. 'ಸುಜ್ಲಾನ್ ಎನರ್ಜಿ' ಷೇರುಗಳು ಕಳೆದ ಕೆಲವು ದಿನಗಳಿಂದ ಪಾಸಿಟಿವ್ ಟ್ರೆಂಡ್ನಲ್ಲಿವೆ. ಇಂದಿನ ಆರಂಭದ ವಹಿವಾಟಿನಲ್ಲಿ ಶೇಕಡಾ 14 ರಷ್ಟು ಏರಿಕೆ ಕಂಡ ಕಂಪನಿಯು ಪ್ರಸಕ್ತ ವರ್ಷದ (FY25) ನಿವ್ವಳ ಲಾಭದಲ್ಲಿ ಶೇಕಡಾ 365 ರಷ್ಟು ಪ್ರಗತಿ ಸಾಧಿಸಿದೆ
ಇದೇ ವರ್ಷ ಈ ಹಿಂದೆ ಕೊನೆಗೊಂಡ ತ್ರೈಮಾಸಿಕದಲ್ಲಿ (ಮಾರ್ಚ್ 2025) 'ಸುಜ್ಲಾನ್ ಎನರ್ಜಿ' ಕಂಪನಿಯು ₹1,182.22 ಕೋಟಿಗಳ ಏಕೀಕೃತ ಲಾಭವನ್ನು ಕಂಡಿದೆ. ಇದು 2024ರ ರಲ್ಲಿ ಮಾರ್ಚ್ ಅಂತ್ಯಗೊಂಡ ತ್ರೈಮಾಸಿಕದಲ್ಲಿ ಗಳಿಸಿದ್ದ ಲಾಭಕ್ಕಿಂದ (₹254.12 ಕೋಟಿ) ಅಧಿಕವಾಗಿದೆ. ಈ ಮೂಲಕ ಷೇರು ಖರೀದಾರರಿಗೆ ಕೊಂಚ ರಿಲೀಫ್ ಸಿಕ್ಕಿದೆ. ಏಕೆಂದರೆ ವಿದೇಶಿ ಯುದ್ಧ, ಅಮೆರಿಕ ಅಧ್ಯಕ್ಷರ ಸುಂಕ ನೀತಿ ಸೇರಿ ಕೆಲವು ಕಾರಣಗಳಿಂದಾಗಿ ಷೇರು ಮಾರುಕಟ್ಟೆ ನೆಗಟಿವ್ ಟ್ರೆಂಡ್ನಲ್ಲಿತ್ತು. ಇದೀಗ ಷೇರುಗಳು ಮತ್ತೆ ಪಾಸಿಟಿವ್ ನತ್ತ ಮುಖ ಮಾಡಿದೆ.

ಕಂಪನಿ ಆದಾಯ ಶೇ. 73 ಜಿಗಿತ
'ಸುಜ್ಲಾನ್ ಎನರ್ಜಿ' ಆದಾಯವು ವರ್ಷಕ್ಕೆ ಶೇಕಡಾ 73 ರಷ್ಟು ಹೆಚ್ಚಾಗಿದೆ. ಅಂದರೆ ಆದಾಯ ಬರೋಬ್ಬರಿ ₹3,773.54 ಕೋಟಿ ರೂಪಾಯಿಗೆ ತಲುಪಿದೆ. ಒಂದು ವರ್ಷಕ್ಕೆ ಹೋಲಿಕೆ ಮಾಡಿದರೆ ಇದೇ ಅವಧಿಯಲ್ಲಿ 2024ರ ತ್ರೈಮಾಸಿಕದಲ್ಲಿ ಕಂಪನಿಯ ಆದಾಯ ಕೇವಲ 2,179.20 ಕೋಟಿ ರೂಪಾಯಿಯಷ್ಟಿತ್ತು ಎಂದು 'ಬಿಸಿನೆಸ್ ಲೈನ್' ವರದಿ ಆಗಿದೆ.
ಇಂದು ಶುಕ್ರವಾರ (ಮೇ 30)ರಂದು ಸಹ 'ಸುಜ್ಲಾನ್ ಎನರ್ಜಿ' ಷೇರುಗಳು ಏರುಗತಿಯಲ್ಲಿವೆ. ಬೆಳಗ್ಗೆ 9.30ಕ್ಕೆ ಷೇರು ಫೇಟೆ ಆರಂಭವಾಗುತ್ತಿದ್ದಂತೆ ಪಾಸಿಟಿವ್ ಟ್ರೆಂಡ್ ದಾಖಲಿಸಿತು. ನಂತರ 9.56 ರ ಹೊತ್ತಿಗೆ ಷೇರುಗಳು ಬಿಎಸ್ಇಯಲ್ಲಿ 72.62 ರೂಪಾಯಿಗೆ ಏರಿಕೆ ಆಯಿತು. ಅತೀ ಕಡಿಮೆ ಸಮಯದಲ್ಲಿ ಷೇರುಗಳು ಶೇಕಡಾ 11.01 ರಷ್ಟು ಜಿಗಿತ ಕಂಡಿದೆ.ಅಲ್ಲಿ ಮುಂದೆ 74.30 ರೂಪಾಯಿಗೆ ದಾಖಲಿಸಿತು. ಇದು ಇತ್ತೀಚಿನ ದಿನಗಳ ಗರಿಷ್ಠ ವಹಿವಾಟು ಎನ್ನಲಾಗುತ್ತಿದೆ.
ಸುಜ್ಲಾನ್ ಎನರ್ಜಿ ಕಂಪನಿ ಕುರಿತು..
1995 ರಲ್ಲಿ ಸ್ಥಾಪನೆಯಾಗಿರುವ ಈ ಸುಜ್ಲಾನ್ ಕಂಪನಿಯು ಮಹಾರಾಷ್ಟ್ರ ರಾಜ್ಯದ ಪುಣೆಯಲ್ಲಿ ಪ್ರಮುಖ ಕಚೇರಿ ಹೊಂದಿದೆ. ನವೀಕರಿಸುವ ಇಂಧನ ಕಂಪನಿಯಾಗಿದೆ. ಪವನ್ ವಿದ್ಯುತ್ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡುವ ಕಂಪನಿಯು ಭವಿಷ್ಯದಲ್ಲಿ ನವೀಕರಿಸಬಹುದಾದ ಇಂಧನಕ್ಕೆ ಪರಿಹಾರ ಒದಗಿಸುತ್ತದೆ.
-
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು












Click it and Unblock the Notifications