ಹೈಕೋರ್ಟ್ ನ್ಯಾಯಪೀಠದ ಸಿವಿಲ್ ನ್ಯಾಯಾಧೀಶರ ವಜಾ ಆದೇಶವನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್

ನವದೆಹಲಿ, ಏಪ್ರಿಲ್ 13: ಸಂಪೂರ್ಣ ತೀರ್ಪಿನ ವಿವರವಾದ ಪಠ್ಯ ಸಿದ್ಧಗೊಳಿಸದೇ ಕಾರ್ಯಾಕಾರಿ ಭಾಗವನ್ನು ಅಥವಾ ತೀರ್ಪಿನ ಅಂತಿಮ ಅಂಶಗಳನ್ನು ಉಚ್ಚರಿಸುವುದು ನ್ಯಾಯಾಂಗ ಅಧಿಕಾರಿಗೆ ತಕ್ಕುದಲ್ಲ. ಇದೆ ಕಾರಣಕ್ಕೆ ಸಿವಿಲ್ ನ್ಯಾಯಾಧೀಶರ ವಜಾಗೊಳಿಸಿದ್ದ ಕರ್ನಾಟಕ ಹೈಕೋರ್ಟ್ ಪೂರ್ಣ ನ್ಯಾಯಾಲಯದ ತೀರ್ಪನ್ನು ಭಾರತದ ಸುಪ್ರೀಂ ಕೋರ್ಟ್ ಸೋಮವಾರ ಎತ್ತಿ ಹಿಡಿದಿದೆ.

ಸುಪ್ರೀಂ ಕೋರ್ಟ್‌ನ ವಿಭಾಗೀಯ ಪೀಠವು ಹೈಕೋರ್ಟ್ ಪೂರ್ಣ ನ್ಯಾಯಾಲಯದ ಆಡಳಿತಾತ್ಮಕ ತೀರ್ಪನ್ನು ಎತ್ತಿ ಹಿಡಿದಿದೆ.

Supreme Court Upheld The Order Of Karnataka High Court Full Court In Civil Judges Dismissal Case

ಕರ್ನಾಟಕ ರಾಜ್ಯ ಹೈಕೋರ್ಟ್ ರಿಜಿಸ್ಟಾರ್‌ ಜನರಲ್ ಮತ್ತು ಎಂ.ನರಸಿಂಹ ಪ್ರಸಾದ್ ಮಧ್ಯೆದ ಪ್ರಕರಣ ಇದಾಗಿದೆ. ಏಕ ಸದಸ್ಯ ಪೀಠ ನೀಡಿದ್ದ ವಜಾ ಆದೇಶವನ್ನು ಕರ್ನಾಟಕ ರಾಜ್ಯ ಹೈಕೋರ್ಟ್ ರದ್ದುಪಡಿಸಿತ್ತು.

ನ್ಯಾಯಾಂಗ ಕಾರ್ಯಾಕಾರಿಯು ತೀರ್ಪಿನ ಅಂತಿಮ ಭಾಗವನ್ನು ಉಚ್ಚರಿಸುವಂತಿಲ್ಲ. ಇಲಾಖೆ ವಿಚಾರಣೆ ವೇಳೆ ಪ್ರತಿವಾದಿಯು ತಪ್ಪೆಲ್ಲವು ಅಸಮರ್ಥತೆಯಿಂದ ಕೂಡಿದೆ ಎಂದು ಆರೋಪಿಸಿದ ಸ್ಟೈನೋ ಗ್ರಾಫರ್‌ ಮೇಲೆ ಹೊರಿಸಿಬಿಡುವ ಕೆಲಸ ಇದಾಗಿದೆ.

ಇಂತಹ ಗಂಭೀರ ಆರೋಪಗಳನ್ನು ಹೈಕೋರ್ಟ್ ನ್ಯಾಯಮೂರ್ತಿಗಳು ಹೇಗೆ ಸಂಪೂರ್ಣವಾಗಿ ನಿರ್ಲಕ್ಷಿಸಿತು ಎಂದು ಸರ್ವೋಚ್ಚ ನ್ಯಾಯಾಲಯ (ಸುಪ್ರೀಂ) ತಿಳಿಸಿದೆ.

Supreme Court Upheld The Order Of Karnataka High Court Full Court In Civil Judges Dismissal Case

ಸ್ಟೈನೋಗ್ರಾಫ್ ಅಸಮರ್ಥ ಎಂಬ ವಾದ ಒಪ್ಪಲಾಗದು:ಸುಪ್ರೀಂ

ಪ್ರಕರಣ ತೀರ್ಪಿನ ಕುರಿತ ಅಂಶಗಳನ್ನು ಸ್ಟೈನೋಗ್ರಾಫ್ ಮುದ್ರಿಸಿಕೊಳ್ಳುವಲ್ಲಿ ಅಸಮರ್ಥ ಎಂಬ ವಾದ ಒಪ್ಪಲಾಗದು. ತೀರ್ಪಿನ ಘೋಷಣೆ ಮತ್ತು ನಿರ್ಣಯಿಸುವ ಪ್ರಕಿಯೆಯ ಸುತ್ತ ಕೆಲವು ಆರೋಪಗಳಿವೆ. ಅವೆಲ್ಲವು ಇಲಾಖೆ ವಿಚಾರಣೆಯ ಅಡಿಪಯವಾಗಲು ಆಗುವುದಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ತೀರ್ಪು ಸಿದ್ಧಪಡಿಸದೇ ತೀರ್ಪಿನ ಅಂತಿಮ ಅಂಶಗಳನ್ನು ಒದಗಿಸುವಲ್ಲಿ ತೋರಿದ ಸಂಪೂರ್ಣ ನಿರ್ಲಕ್ಷ್ಯೆಯನ್ನು ಸ್ವೀಕರಿಸಲು ಸಾಧ್ಯವಿಲ್ಲ. ಅದು ನ್ಯಾಯಾಂಗ ಅಧಿಕಾರಿಗೆ ಯೋಗ್ಯವಾದುದಲ್ಲ. ಕೆಲವು ದಿನಗಳ ನಂತರವು ತೀರ್ಪಿನ ಅಂತಿಮ ಅಂಶ ಸಿದ್ದಪಡಿಸದೇ ಅದನ್ನು ಸೈನೋಗ್ರಾಫರ್ ಅನುಭವದ ಕೊರತೆ ಎಂದು ದೂಷಿಸುವ ಪ್ರತಿವಾದಿಯ ವಾದ ಸರಿಯಾದದ್ದಲ್ಲ ಎಂದಿದೆ.

ಆದರೆ ದುರದೃಷ್ಟವಶಾತ್, ನ್ಯಾಯಾಲಯ ಎಚ್ಚೆತ್ತು ಈ ಪಂಚತಂತ್ರವನ್ನು ಅಂಗೀಕರಿಸಿದೆ, ಸ್ಟೆನೋಗ್ರಾಫ್ ಸಾಕ್ಷಿಯಾಗಿ ಆಡಳಿತವನ್ನು ದೂಷಣೆ ಮಟ್ಟಕ್ಕೆ ಹೋಗಿದೆ. ಆದರೆ ಸ್ಟೆನೋಗ್ರಾಫ್ ನನ್ನು ಸಾಕ್ಷಿಯಾಗಿಲ್ಲ ಪ್ರಶ್ನಿಸಿಲ್ಲ. ಇದೆಲ್ಲವು ಪೂರ್ಣ ಸಮರ್ಥನೀಯವಲ್ಲ ಎಂದು ಸುಪ್ರೀಂ ಹೇಳಿದೆ.

ಸಿವಿಲ್ ನ್ಯಾಯಾಧೀಶರನ್ನು ಸೇವೆಯಿಂದ ವಜಾಗೊಳಿಸಿದ ತೀರ್ಪನ್ನು ರದ್ದಗೊಲಿಸಿದ ಹೈಕೋರ್ಟ್ ವಿಭಾಗೀಯ ಪೀಠ ನೀಡಿದ್ದ ಆದೇಶ ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ವೇಳೆ ಈ ಮೇಲಿನ ಎಲ್ಲ ಅಂಶಗಳನ್ನು ಸುಪ್ರೀಂ ಕೋರ್ಟ್ ತಿಳಿಸಿತು.

ಪ್ರತಿವಾದಿ ಮೇಲಿನ ಆರೋಪ ಸಾಬೀತು

ಪ್ರಕರಣದಲ್ಲಿನ ಪ್ರತಿವಾದಿ ನ್ಯಾಯಾಧೀಶರನ್ನು 2005ರಲ್ಲಿ ಅಮಾನತು ಮಾಡಿ ತನಿಖೆ ನಡೆಸಿದಾಗ ಅವರ ಮೇಲಿನ ಆರೋಪಗಳು ಸಾಬೀತಾಗಿದ್ದವು. ಈ ಕಾರಣದಿಂದ ಹೈಕೋರ್ಟ್ ಪೂರ್ಣಪೀಠ ಪ್ರತಿವಾದಿಯನ್ನು ಸೇವೆಯಿಂದ ವಜಾಗೊಳಿಸಿತು. ಇದಕ್ಕೆ ಕರ್ನಾಟಕ ರಾಜ್ಯಪಾಲರು 2009ರಲ್ಲಿ ಒಪ್ಪಿದ್ದರು.

ಬಳಿಕ ತಮ್ಮ ಮೇಲಿನ ತನಿಖೆ ವರದಿ ಪ್ರಶ್ನಿಸಿ ಪ್ರತಿವಾದಿಗಳು ಹೈಕೋರ್ಟ್‌ಗೆ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು. ಆದರೆ ಅರ್ಜಿಗಳು ವಜಾಗೊಂಡವು. ನಂತರ ಸಿವಿಲ್ ನ್ಯಾಯಾಲಯ ಅವರ ಮೇಲ್ಮನವಿಗಳನ್ನು ಪುರಸ್ಕರಿಸಿತು. ಅಲ್ಲಿನ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಯಿತು.

ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಶಿಕ್ಷೆಯ ಆದೇಶ ಮತ್ತು ತನಿಖಾಧಿಕಾರಿಯ ತಿರ್ಮಾನ ಬದಿಗಿಟ್ಟು ಹೈಕೋರ್ಟ್ ಪ್ರತಿವಾದಿ ವಿರುದ್ಧ ಹೆಚ್ಚಿನ ವಿಚಾರಣೆ ಅನಗತ್ಯ ಎಂದು ಹೇಳಿದ್ದಕ್ಕೆ ಸುಪ್ರೀಂ ಅಸಮಾಧಾನ ಹೊರಹಾಕಿದೆ.

ಹೈಕೋರ್ಟ್ ಶಿಕ್ಷೆಯ ಆದೇಶವನ್ನು ಸಮರ್ಪಕವಾಗಿ ಪರಿಶೀಲಿಸಿಲ್ಲ. ಬದಲಾಗಿ ಸಿವಿಲ್ ನ್ಯಾಯಾಧೀಶರು ಎದುರಿಸಿದ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದರು. ಪ್ರತಿವಾದಿ ವಿರುದ್ಧ ಹೆಚ್ಚಿನ ವಿಚಾರಣೆ ಅನಗತ್ಯ ಎಂದ ಹೈಕೋರ್ಟ್‌ ಅಭಿಪ್ರಾಯ ಕುತೂಹಲಕಾರಿಯಾಗಿದೆ. ಇದು ಪೂರ್ಣ ನ್ಯಾಯಾಲಯದ ಮೇಲಿನ ದಾಳಿಗೆ ಸಮಯವಾಗಿದೆ ಎಂದು ಸುಪ್ರೀಂ ಕೋರ್ಟ್ ವಿಭಾಗೀಯ ಪೀಠ ತಿಳಿಸಿದೆ. ಈ ಮೂಲಕ ಹೈಕೋರ್ಟ್ ಪೂರ್ಣ ನ್ಯಾಯಾಲಯದ ಆದೇಶವನ್ನು ಸುಪ್ರಿಂ ಎತ್ತಿ ಹಿಡಿದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+