'ಯೂರಿನ್' ನಿಂದ ಯೂರಿಯಾ ಉತ್ಪಾದನೆ: ಇದು ಗಡ್ಕರಿ ಐಡಿಯಾ
ನಾಗ್ಪುರ್, ಮಾರ್ಚ್ 04: ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ನೀಡಿರುವ ಹೊಸ ಸಲಹೆ ಕೇಳಿ ಹಲವರ ಹುಬ್ಬೇರಬಹುದು.
ದೇಶದ ಜನರ ಮೂತ್ರವನ್ನು ಸಂಗ್ರಹಿಸಿ ಅದರಿಂದ ಯೂರಿಯಾ ಉತ್ಪಾದಿಸಬಹುದಾಗಿದೆ. ಈ ಮೂಲಕದ ವಿದೇಶದಿಂದ ಯೂರಿಯಾ ಆಮದು ಮಾಡಿಕೊಳ್ಳುವುದನ್ನು ತಪ್ಪಿಸಬಹುದು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಸಲಹೆ ನೀಡಿದರು.
ನಾಗಪುರದ ಮುನ್ಸಿಪಲ್ ಕಾರ್ಪೋರೇಷನ್ ನಲ್ಲಿ ಭಾನುವಾರದಂದು ಆಯೋಜಿಸಿದ್ದ ಮೇಯರ್ ಇನ್ನೋವೇಶನ್ ಅವಾರ್ಡ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಗಡ್ಕರಿ, ಮೂತ್ರದಿಂದ ಯೂರಿಯಾವನ್ನು ಉತ್ಪಾದಿಸಬಹುದಾಗಿದೆ. ಈ ಕುರಿತಂತೆ ಸಂಶೋಧನೆ ನಡೆಸಲಾಗಿದೆ. ದೇಶದ ಜನರ ಮೂತ್ರವನ್ನು ಸಂಗ್ರಹಿಸಿದಲ್ಲಿ ವಿದೇಶದಿಂದ ರಸಗೊಬ್ಬರ ಆಮದು ನಿಲ್ಲಿಸಬಹುದು ಎಂದರು.

ಜೈವಿಕ ಇಂಧನಗಳನ್ನು ನೈಸರ್ಗಿಕ ತ್ಯಾಜ್ಯದಿಂದ ಹೇಗೆ ಪಡೆಯಬಹುದು ಎಂಬುದರ ಬಗ್ಗೆ ಗಡ್ಕರಿ ಉದಾಹರಣೆ ನೀಡಿದರು. ಈ ಹಿಂದೆ 'ನಾನು ವಿಮಾನ ನಿಲ್ದಾಣದಲ್ಲಿ ಮೂತ್ರ ಸಂಗ್ರಹಿಸುವಂತೆ ಹೇಳಿದ್ದೆ. ಆದರೆ ಅದನ್ನು ಯಾರೂ ಕೇಳಿಸಿಕೊಳ್ಳಲಿಲ್ಲ' ಎಂದು ತಿಳಿಸಿದರು.
ಮನುಷ್ಯನ ತಲೆ ಕೂದಲು ಬಳಸಿ ಅಮೈನೋ ಆಸಿಡ್ ಉತ್ಪಾದನೆ ಮಾಡಲಾಗುತ್ತದೆ. ನಾಗಪುರದಲ್ಲಿ ಜಾಸ್ತಿ ಕೂದಲು ಸಿಗದ ಕಾರಣ, ತಿರುಪತಿಯಿಂದ ಐದು ಟ್ರಕ್ ಕೂದಲು ತರುತ್ತೇವೆ ಎಂದರು. ತಲೆಕೂದಲಿನ ಪ್ರಯೋಗ ಯಶಸ್ವಿಯಾದ ನಂತರದಲ್ಲಿ ಅಮೈನೋ ಆಸಿಡ್ ಉತ್ಪಾದನೆ ಶೇ. 25 ರಷ್ಟು ಹೆಚ್ಚಾಗಿದೆ. ಅಮೈನೊ ಆಸಿಡ್ ವಿದೇಶಕ್ಕೆ ರಫ್ತು ಮಾಡುತ್ತಿದ್ದೇವೆ. ದುಬೈನಿಂದ ಜೈವಿಕ ಇಂಧನಕ್ಕಾಗಿ 180 ಕಂಟನೈರ್ ಗಳು ಸಾಗಲಿವೆ ಎಂದರು. ಉದ್ಯಮಿಯೂ ಆಗಿರುವ ನಿತಿನ್ ಗಡ್ಕರಿ ಅವರು ಪೂರ್ತಿ ಗ್ರೂಪ್ ಆಫ್ ಇಂಡಸ್ಟ್ರೀಯ ಮಾಲೀಕರಾಗಿದ್ದಾರೆ.(ಪಿಟಿಐ)
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications