ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್ ರನ್ನು 'ದ್ವೇಷದ ವ್ಯಾಪಾರಿ' ಎಂದು ಹೀಗಳೆದ ಕೇಂದ್ರ ಸಚಿವ

|
Google Oneindia Kannada News

ಯಾವುದೇ ಅಪರಾಧ ನಡೆದ ಪ್ರತಿ ಸಲವು ಖುಷಿಯಿಂದ ನೆಗೆದಾಡುವುದನ್ನು ನಿಲ್ಲಿಸಿ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಟಾಂಗ್ ನೀಡಿ, ಟ್ವೀಟ್ ಮಾಡಿದ್ದಾರೆ.

ಅಲ್ವಾರ್ ಹತ್ಯೆ: ವ್ಯಕ್ತಿ ಪ್ರಾಣಕ್ಕಿಂತ ಗೋವುಗಳು ಮುಖ್ಯವಾದವೇ ಪೊಲೀಸರಿಗೆ?ಅಲ್ವಾರ್ ಹತ್ಯೆ: ವ್ಯಕ್ತಿ ಪ್ರಾಣಕ್ಕಿಂತ ಗೋವುಗಳು ಮುಖ್ಯವಾದವೇ ಪೊಲೀಸರಿಗೆ?

ಗುಂಪು ಹಲ್ಲೆಯ ಸಂತ್ರಸ್ತ ರಕ್ಬರ್ ಖಾನ್ ನನ್ನು ಆರು ಕಿಲೋಮೀಟರ್ ದೂರದ ಆಸ್ಪತ್ರೆಗೆ ಕರೆದೊಯ್ಯಲು ಅಲ್ವಾರ್ ನ ಪೊಲೀಸರು ಮೂರು ಗಂಟೆ ಸಮಯ ತೆಗೆದುಕೊಂಡಿದ್ದಾರೆ. ಏಕೆ? ಎಂದು ರಾಹುಲ್ ಗಾಂಧಿ ಮಾಡಿದ ಟ್ವೀಟ್ ಗೆ ಪ್ರತಿಯಾಗಿ ಗೋಯಲ್ ಹೀಗೆ ಉತ್ತರಿಸಿದ್ದಾರೆ.

ಮೋದಿಯ ಹೊಸ ಭಾರತದಲ್ಲಿ ಮಾನವೀಯತೆಯಿಲ್ಲ, ಬರೀ ದ್ವೇಷ: ರಾಹುಲ್ ಮೋದಿಯ ಹೊಸ ಭಾರತದಲ್ಲಿ ಮಾನವೀಯತೆಯಿಲ್ಲ, ಬರೀ ದ್ವೇಷ: ರಾಹುಲ್

ಸರಕಾರವು ಈಗಾಗಲೇ ಕಠಿಣ ಹಾಗೂ ಪ್ರಾಮಾಣಿಕ ಕ್ರಮ ತೆಗೆದುಕೊಳ್ಳುವ ಬಗ್ಗೆ ಭರವಸೆ ನೀಡಿದೆ. ನೀವು ಸಮಾಜವನ್ನು ಎಲ್ಲ ರೀತಿಯಲ್ಲೂ ವಿಭಜಿಸುತ್ತಿದ್ದೀರಿ. ಅದು ಕೂಡ ಚುನಾವಣೆ ಲಾಭಕ್ಕಾಗಿ. ಆ ಮೇಲೆ ಮೊಸಳೆ ಕಣ್ಣೀರು ಬೇರೆ ಸುರಿಸುತ್ತೀರಿ ಎಂದು ಪಿಯೂಷ್ ಗೋಯಲ್ ಹೇಳಿದ್ದಾರೆ.

Stop jumping with joy every time a crime happens, Rahul Gandhi: Piyush Goyal

ಈ ವರೆಗೆ ಆಗಿದ್ದು ಸಾಕು. ನೀವೊಬ್ಬ ದ್ವೇಷದ ವ್ಯಾಪಾರಿ (ಮರ್ಚೆಂಟ್ ಆಫ್ ಹೇಟ್) ಎಂದು ಪಿಯೂಷ್ ಗೋಯಲ್ ತಮ್ಮ ಟ್ವೀಟ್ ನಲ್ಲಿ ಕಿಡಿ ಕಾರಿದ್ದಾರೆ.

English summary
Stop jumping with joy every time a crime happens, Mr Rahul Gandhi. The state has already assured strict & prompt action. You divide the society in every manner possible for electoral gains & then shed crocodile tears, said central minister Piyush Goyal while giving reaction to Rahul Gandhi's tweet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X