ಹಾರಾಟ ಸ್ಥಗಿತಗೊಳಿಸಿರುವ ಜೆಟ್ ಏರ್ವೇಸ್ಗೆ ಸ್ಪೈಸ್ಜೆಟ್ ಬಣ್ಣ!
ನವದೆಹಲಿ, ಏಪ್ರಿಲ್ 22: ಸಂಪೂರ್ಣ 'ನೆಲಕಚ್ಚಿರುವ' ಜೆಟ್ ಏರ್ವೇಸ್ ವಿಮಾನಯಾನ ಸಂಸ್ಥೆ ಸಿಬ್ಬಂದಿಗೆ ಉದ್ಯೋಗ ನೀಡುವ ಮೂಲಕ ಸಹಾಯಹಸ್ತ ಚಾಚಿರುವ ಸ್ಪೈಸ್ ಜೆಟ್, ಈಗ ಹಾರಾಟ ನಿಲ್ಲಿಸಿರುವ ಜೆಟ್ ಏರ್ವೇಸ್ ವಿಮಾನಗಳ ಮರು ಹಾರಾಟಕ್ಕೆ ಸಿದ್ಧತೆ ನಡೆಸಿದೆ. ಜತೆಗೆ ಜೆಟ್ ಏರ್ವೇಸ್ಗೆ ತನ್ನ 'ಬಣ್ಣ'ವನ್ನೂ ನೀಡುತ್ತಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಜೆಟ್ ಏರ್ವೇಸ್ ಬೋಯಿಂಗ್ ಬಿ737 ವಿಮಾನಕ್ಕೆ ಸ್ಪೈಸ್ಜೆಟ್ ತನ್ನ ವಿಶಿಷ್ಟ ಕೆಂಪು ಗುರುತಿನ ಲೋಗೋವನ್ನು ಮೂಡಿಸುತ್ತಿದೆ. ಇದರ ಜತೆಗೆ ಜೆಟ್ ಏರ್ವೇಸ್ನ ಮೂಲ ಬಣ್ಣದ ಗುರುತಾದ ಹಳದಿ ಮತ್ತು ನೀಲಿಪಟ್ಟಿಯೂ ಇರಲಿದೆ. ಜೆಟ್ಏರ್ವೇಸ್ನ ಕೆಲವು ವಿಮಾನಗಳನ್ನು ಸ್ಪೈಸ್ ಜೆಟ್ ತನ್ನ ಸುಪರ್ದಿಯಲ್ಲಿ ಸಂಚಾರಕ್ಕೆ ಬಳಸಿಕೊಳ್ಳಲಿದೆ.
ಮೂಲಗಳ ಪ್ರಕಾರ ಜೆಟ್ ಏರ್ವೇಸ್ನ ಕೆಲವು ವಿಮಾನಗಳು ಮುಂದಿನ ವಾರದಿಂದ ತಮ್ಮ ಹಾರಾಟ ಆರಂಭಿಸಲಿವೆ.

ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಕೂಡ ಅಂತಾರಾಷ್ಟ್ರೀಯ ಹಾರಾಟಗಳಿಗೆ ದೊಡ್ಡ ವಿಮಾನಗಳನ್ನು ಬಳಸಿಕೊಳ್ಳಲು ಜೆಟ್ ಏರ್ವೇಸ್ ಜತೆ ಮಾತುಕತೆ ನಡೆಸುತ್ತಿದೆ.
UPDATE: Ex-JetAirways’ Boeing B737 aircraft gets a new makeover with #SpiceJet sticker on it. Sources say, some of Jet Airways' grounded planes are likely to start flying by next week. #JetAirwaysCrisis #SaveJetAirways #AviationDaily #AvGeek pic.twitter.com/N6xNpzTtYS
— Aero News (@teamaeronews) 21 April 2019
ವಿಮಾನ ಹಾರಾಟಗಳ ಸ್ಥಗಿತದಿಂದ ಜೆಟ್ ಏರ್ವೇಸ್ನ ಸಾವಿರಾರು ಉದ್ಯೋಗಿಗಳು ಕೆಲಸ ನಷ್ಟದ ಭೀತಿಯಲ್ಲಿದ್ದಾರೆ. ಹಲವು ತಿಂಗಳಿನಿಂದ ಸಂಬಳವಿಲ್ಲದೆ ಪರದಾಡುತ್ತಿದ್ದಾರೆ. ಅವರಲ್ಲಿ ಅನೇಕರಿಗೆ ಸ್ಪೈಸ್ ಜೆಟ್ ಈಗಾಗಲೇ ಉದ್ಯೋಗ ನೀಡಿದೆ. 100ಕ್ಕೂ ಅಧಿಕ ಪೈಲಟ್ಗಳು, 200ಕ್ಕೂ ಹೆಚ್ಚು ಕ್ಯಾಬಿನ್ ಸಿಬ್ಬಂದಿ ಮತ್ತು ಸುಮಾರು 200 ತಾಂತ್ರಿಕ ಹಾಗೂ ವಿಮಾನ ನಿಲ್ದಾಣ ಸಿಬ್ಬಂದಿಯನ್ನು ಈಗಾಗಲೇ ನೇಮಿಸಿಕೊಳ್ಳಲಾಗಿದೆ. ಇನ್ನೂ ಅನೇಕರಿಗೆ ಉದ್ಯೋಗ ನೀಡಲಾಗುವುದು ಎಂದು ಸ್ಪೈಸ್ ಜೆಟ್ ತಿಳಿಸಿತ್ತು.
ಜೆಟ್ ಏರ್ವೇಸ್ನಲ್ಲಿ ಸುಮಾರು 1,300 ಪೈಲಟ್ಗಳಿದ್ದು ಅವರಲ್ಲಿ 400ಕ್ಕೂ ಹೆಚ್ಚು ಪೈಲಟ್ಗಳು ಬೇರೆ ಬೇರೆ ವಿಮಾನಯಾನ ಸಂಸ್ಥೆಗಳನ್ನು ಸೇರಿಕೊಂಡಿದ್ದಾರೆ. ಅಂದಾಜು 40 ಎಂಜಿನಿಯರ್ಗಳು ಕೂಡ ಕಂಪೆನಿ ತ್ಯಜಿಸಿದ್ದಾರೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications