Spicejet Crisis: ಕ್ಯಾಬಿನ್ 150 ಸಿಬ್ಬಂದಿಗೆ 3 ತಿಂಗಳ ಕಡ್ಡಾಯ ರಜೆ ನೀಡಿದ ಸ್ಪೈಸ್ಜೆಟ್, ಯಾಕೆ?
ನವದೆಹಲಿ, ಆಗಸ್ಟ್ 30: ಹಾಲಿ 22 ವಿಮಾನಗಳ ಮೂಲಕ ವಿಮಾನಯಾನ ಸೇವೆ ನೀಡುತ್ತಿರುವ ಸಂಸ್ಥೆ 'ಸ್ಪೈಸ್ ಜೆಟ್' ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದೆ. ಈ ಕಾರಣದಿಂದ ತನ್ನ150 ಸಿಬ್ಬಂದಿಗೆ ಮೂರು ತಿಂಗಳ ಕಡ್ಡಾಯ ರಜೆ ಘೋಷಿಸುವ ಮೂಲಕ ವಿಮಾನಯಾನ ಸಂಸ್ಥೆಯೊಂದು ಸುದ್ದಿಯಲ್ಲಿದೆ. ಕೆಲವು ಸಂಸ್ಥೆಗಳಂತೆ ಪ್ರತಿಷ್ಠಿತ 'ಸ್ಪೈಸ್ಜೆಟ್' ವಿಮಾನಯಾನ ಸಂಸ್ಥೆ ಸಹ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದೆ.
'ಸ್ಪೈಸ್ಜೆಟ್' ಸಂಸ್ಥೆಯು ಗುತ್ತಿಗೆದಾರರು, ನಿರ್ವಹಣೆ ಸೇರಿದಂತೆ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಆರ್ಥಿಕ ಮುಗ್ಗಟ್ಟು ಕಾರಣದಿಂದಾಗಿ ತನ್ನ 150 ಕ್ಯಾಬಿನ್ ಸಿಬ್ಬಂದಿಗೆ ವೇತನ ರಹಿತ ಕಡ್ಡಾಯ ಮೂರು ತಿಂಗಳ ರಜೆ ಘೋಷಿಸಿದೆ. ವೇತನ ಬಿಟ್ಟರೆ ಉಳಿದ ಕೆಲವು ಸೌಲಭ್ಯಗಳು ಅವರಿಗೆ ಇರುತ್ತವೆ ಎಂದು ವಿಮಾನಯಾನ ವಕ್ತಾರರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಸ್ಪೈಸ್ಜೆಟ್ ನಿಂದ ರಜೆ ಪಡೆದಿರುವ ಈ ಎಲ್ಲ ಕ್ಯಾಬಿನ್ ಸಿಬ್ಬಂದಿಗೆ ಮೂರು ತಿಂಗಳು ವೇತನ ಇರುವುದಿಲ್ಲ. ಬದಲಾಗಿ ಅವರು ಸಂಸ್ಥೆಯ ಉದ್ಯೋಗಿಗಳಿಗೆ ಇರುವ ಎಲ್ಲ ಸ್ಥಾನಮಾನ, ಆರೋಗ್ಯ ಸೌಲಭ್ಯಗಳನ್ನು ಹೊಂದಿರುತ್ತಾರೆ. ಈ ಮೂಲಕ ನಿರ್ವಹಣೆಯಲ್ಲಿ ಸಮಸ್ಯೆಗಳನ್ನು ಸರಿದೂಗಿಸಿಕೊಳ್ಳಲು, ಆರ್ಥಿಕ ಚೇತರಿಕೆ ಕಾರಣಲು ಸಂಸ್ಥೆ ಪ್ಲಾನ್ ಮಾಡಿಕೊಂಡಿದೆ ಎಂದು ತಿಳದು ಬಂದಿದೆ.
ಇವರ ಮೂರು ತಿಂಗಳ ರಜೆ ಪೂರ್ಣಗೊಂಡ ಬಳಿಕ ಪುನಃ ಕರ್ತವ್ಯಕ್ಕೆ ಹಾಜರು ಮಾಡಿಕೊಳ್ಳಲಿದ್ದೇವೆ. ಸದ್ಯ ದೇಶಾದ್ಯಂತ ಪ್ರಯಾಣಿಕರಿಗೆ ವಿಮಾನ ಸೇವೆ ನೀಡುವ ಸಂಸ್ಥೆಯು ಆರ್ಥಿಕ ಚೇತರಿಕೆಯ ಹಾದಿ ಕಂಡುಕೊಳ್ಳುತ್ತಿದೆ. ಈ ಸಂಬಂಧ ಕೆಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಿದೆ.

ಸಂಸ್ಥೆ ಆದಾಯ ಕ್ರಮೇಣ ಕುಸಿತ
ದೀರ್ಘ ಕಾಲದ ಸದುದ್ದೇಶದಿಂದ ಈ ದೀರ್ಘ ರಜೆ ಘೋಷಣೆ ಮಾಡಲಾಗಿದೆ. ಸ್ಪೈಸ್ಜೆಟ್ ಹಿಂದಿನ ತಿಂಗಳು ಷೇರು ಮಾರಾಟದ ಮೂಲಕ 30 ಶತಕೋಟಿ ರೂ ($358 ಮಿಲಿಯನ್) ಸಂಗ್ರಹಕ್ಕೆ ಪ್ರಯತ್ನಿಸಿತ್ತು. ಸಂಸ್ಥೆಯ ನಿವ್ವಳ ಆದಾಯ ಕುಸಿತಗೊಂಡಿದೆ. ವರ್ಷದಿಂದ ವರ್ಷಕ್ಕೆ ಶೇಕಡಾ 15ರಷ್ಟು ಆದಾಯ ಕಡಿಮೆ ಆಗಿದೆ.
ಸ್ಪೈಸ್ಜೆಟ್ ಸಂಸ್ಥೆ ಬೋಯಿಂಗ್ 730ಕ್ಕೂ ಹೆಚ್ಚು ಪ್ಲಿಟ್ ಹೊಂದಿತ್ತು, ಕೋವಿಡ್ ಮೊದಲು ಅದು 110ಕ್ಕೆ ಇಳಿಕೆಯಾಗಿತ್ತು. ಸದ್ಯ ಸ್ಪೈಸ್ಜೆಟ್ನಿಂದ 22 ವಿಮಾನಗಳು ಕಾರ್ಯ ನಿರ್ವಹಿಸುತ್ತಿವೆ. ಗುತ್ತಿಗೆದಾರರಿಗೆ ಪಾವತಿಗೆ ಕಷ್ಟವಾದ ಕಾರಣ ಸಂಸ್ಥೆಯ ಬೆಳವಣಿಗೆ ಕುಸಿಯುತ್ತಾ ಬಂದಿದೆ ಎಂದು ವರದಿ ಆಗಿದೆ.
-
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್












Click it and Unblock the Notifications