ಗಾಂಧಿ ಕುಟುಂಬದ ಮೂವರೂ ವಿದೇಶಕ್ಕೆ; ಎಲ್ಲಿ, ಯಾವಾಗ ಎಂಬುದು ನಿಗೂಢ
ನವದೆಹಲಿ, ಆಗಸ್ಟ್ 24: ಸೋನಿಯಾ ಗಾಂಧಿ ಮತ್ತವರ ಮಕ್ಕಳಾದ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಈ ಮೂವರೂ ಕೂಡ ವಿದೇಶಕ್ಕೆ ಹೋಗಿ ಬರಲಿದ್ದಾರೆ ಎಂಬ ಅಧಿಕೃತ ಮಾಹಿತಿ ಹೊರಬಿದ್ದಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಈ ಸಂಗತಿಯನ್ನು ಖಚಿತಪಡಿಸಿದ್ದಾರೆ.
ಸೋನಿಯಾ ಗಾಂಧಿ ವೈದ್ಯಕೀಯ ತಪಾಸಣೆಗಾಗಿ ವಿದೇಶಕ್ಕೆ ಹೋಗಲಿದ್ದಾರೆ. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ತಮ್ಮ ತಾಯಿ ಜೊತೆ ಹೋಗಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಬುಧವಾರ ಹೇಳಿದ್ದಾರೆ. ಸೋನಿಯಾ ಗಾಂಧಿ ಇತ್ತೀಚೆಗಷ್ಟೇ ಕೋವಿಡ್ ಕಾಯಿಲೆಗೆ ಒಳಗಾಗಿ ಚೇತರಿಸಿಕೊಂಡಿದ್ದಾರೆ.
Recommended Video
ಭಾರತ ಜೋಡೋ ಪಾದಯಾತ್ರೆಯಲ್ಲಿ ರಾರಾಜಿಸಲಿವೆ ಬೆಂಗೇರಿಯ ರಾಷ್ಟ್ರಧ್ವಜ
ಆದರೆ, ಈ ಮೂವರೂ ಕೂಡ ಯಾವ ದೇಶಗಳಿಗೆ ಹೋಗುತ್ತಾರೆ, ಯಾವಾಗ ಹೋಗುತ್ತಾರೆ ಎಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ.
"ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಜೊತೆ ಸೋನಿಯಾ ಗಾಂಧಿ ವೈದ್ಯಕೀಯ ತಪಾಸಣೆಗಾಗಿ ವಿದೇಶಕ್ಕೆ ಹೋಗಲಿದ್ದಾರೆ. ಪಕ್ಷದ ಸಂಸದ ರಾಹುಲ್ ಗಾಂಧಿ ಸೆಪ್ಟೆಂಬರ್ 4ರಂದು ದೆಹಲಿಯಲ್ಲಿ ನಡೆಯಲಿರುವ ಮೆಹಂಗಾಯ್ ಪರ್ ಹಲ್ಲಾ ಬೋಲ್ ಸಮಾವೇಶದಲ್ಲಿ ಭಾಷಣ ಮಾಡಲಿದ್ದಾರೆ," ಎಂದು ಜೈರಾಮ್ ರಮೇಶ್ ಬುಧವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸೋನಿಯಾ ಗಾಂಧಿ ಅವರ ತಾಯಿ ಅನಾರೋಗ್ಯ ಸ್ಥಿತಿಯಲ್ಲಿದ್ದಾರೆ. ಇಟಲಿಯಲ್ಲಿರುವ ಅವರನ್ನು ಸೋನಿಯಾ ಗಾಂಧಿ ಭೇಟಿಯಾಗಿ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.
ಭಾರತ್
ಜೋಡೋ
ಯಾತ್ರೆ?
ಸೆಪ್ಟೆಂಬರ್
7ರಂದು
ಕಾಂಗ್ರೆಸ್
ಪಕ್ಷ
ತನ್ನ
ಬಲ
ಹೆಚ್ಚಿಸಲು
ಮತ್ತು
ಕೇಂದ್ರ
ಸರಕಾರ
ವಿರುದ್ಧ
ಬೃಹತ್
ಪ್ರತಿಭಟನೆ
ನಡೆಸಲು
'ಭಾರತ್
ಜೋಡೋ
ಯಾತ್ರಾ"
ಆರಂಭಿಸಲಿದೆ.
ಕನ್ಯಾಕುಮಾರಿಯಿಂದ
ಹಿಡಿದು
ಕಾಶ್ಮೀರದವರೆಗೆ
ಕಾಂಗ್ರೆಸ್
ಯಾತ್ರೆ
ನಡೆಯಲಿದೆ.
ಇದಕ್ಕಾಗಿ
ಸಿದ್ಧತೆ
ನಡೆದಿದೆ.
148
ದಿನಗಳ
ಸುದೀರ್ಘ
ಕಾಲ
ಈ
ಯಾತ್ರೆ
ನಡೆಯಲಿದೆ.
ಯಾರಾಗುತ್ತಾರೆ ಕಾಂಗ್ರೆಸ್ ಮುಂದಿನ ಅಧ್ಯಕ್ಷರು? ಚುನಾವಣಾ ವೇಳಾಪಟ್ಟಿ ಯಾವಾಗ?
ಇನ್ನು, ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವುದು ಸಮೀಪದಲ್ಲೇ ಇದೆ. ಚುನಾವಣೆಯ ದಿನಾಂಕವನ್ನು ಈ ವಾರ ಪ್ರಕಟಿಸುವ ನಿರೀಕ್ಷೆ ಇದೆ. ಇದೇ ಹೊತ್ತಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಈ ಮೂವರೂ ಕೂಡ ವಿದೇಶಕ್ಕೆ ಹೋಗಲಿರುವ ಸುದ್ದಿ ಬಂದಿದೆ. ಭಾರತ್ ಜೋಡೋ ಯಾತ್ರೆ 148 ದಿನ ನಡೆಯುವುದರಿಂದ ಯಾತ್ರೆ ಬಳಿಕ ಈ ಮೂವರು ವಿದೇಶಕ್ಕೆ ಹೋಗುವುದು ಅನುಮಾನ. ಯಾತ್ರೆಗೆ ಚಾಲನೆ ನೀಡಿ, ಮಧ್ಯದಲ್ಲಿ ಕೆಲ ದಿನಗಳ ಕಾಲ ವಿದೇಶಕ್ಕೆ ಹೋಗಿಬರುವ ಸಾಧ್ಯತೆ ಇದೆ.
ಕಾಂಗ್ರೆಸ್ನೊಳಗೆ
ಬೇಗುದಿ
2014ರಿಂದಲೂ
ಅಧಿಕಾರ
ಇಲ್ಲದೇ
ಇರುವ
ಕಾಂಗ್ರೆಸ್
ಪಕ್ಷದೊಳಗೆ
ಆಂತರಿಕ
ಬೇಗುದಿ
ಹೆಚ್ಚುತ್ತಿರುವುದಕ್ಕೆ
ಇತ್ತೀಚಿನ
ಕೆಲ
ಬೆಳವಣಿಗೆಗಳು
ಸೂಚನೆಯಂತಿವೆ.
ತಮ್ಮನ್ನು
ಕಡೆಗಣಿಸಲಾಗುತ್ತಿದೆ
ಎಂಬ
ಅಸಮಾಧಾನ
ಅನೇಕ
ಹಿರಿಯ
ಕಾಂಗ್ರೆಸ್
ಮುಖಂಡರಲ್ಲಿ
ಕಾಡುತ್ತಿದೆ.
ಇತ್ತೀಚೆಗೆ
ಹಿರಿಯ
ಮುಖಂಡ
ಆನಂದ್
ಶರ್ಮಾ
ಕಾಂಗ್ರೆಸ್ನ
ಚಾಲನಾ
ಸಮಿತಿ
ಅಧ್ಯಕ್ಷ
ಸ್ಥಾನಕ್ಕೆ
ರಾಜೀನಾಮೆ
ನೀಡಿದ್ದಾರೆ.
ಮತ್ತೊಬ್ಬ
ಹಿರಿಯ
ಮುಖಂಡ
ಗುಲಾಂ
ನಬಿ
ಆಜಾದ್
ಕೂಡ
ಅನೇಕ
ಸ್ಥಾನಗಳಿಗೆ
ರಾಜೀನಾಮೆ
ಕೊಟ್ಟಿದ್ದಾರೆ.
ಇವರಿಬ್ಬರೂ ಕೂಡ ಹಿಂದೆ ಬಹಿರಂಗವಾಗಿ ಬಂಡಾಯ ಎದ್ದಿದ್ದ 23 ಹಿರಿಯ ಕಾಂಗ್ರೆಸ್ಸಿಗರ ಗುಂಪಿನಲ್ಲಿದ್ದವರು. ಕಪಿಲ್ ಸಿಬಲ್ ಈಗಾಗಲೇ ಕಾಂಗ್ರೆಸ್ ಪಕ್ಷವನ್ನೇ ತ್ಯಜಿಸಿ ಹೋಗಿದ್ದಾರೆ. ಗುಲಾಂ ನಬಿ ಆಜಾದ್ ಮತ್ತು ಆನಂದ್ ಶರ್ಮಾ ಕೂಡ ಪಕ್ಷ ಬಿಟ್ಟು ಹೋಗುವ ಸಾಧ್ಯತೆ ಇದೆ.
ಕಾಂಗ್ರೆಸ್ನೊಳಗೆ ತನಗೆ ಅವಮಾನವಾಗುತ್ತಿದೆ ಎಂದು ಆರೋಪಿಸಿರುವ ಆನಂದ್ ಶರ್ಮಾ ಅವರನ್ನು ಹಿಮಾಚಲಪ್ರದೇಶ ಕಾಂಗ್ರೆಸ್ ಉಸ್ತುವಾರಿ ರಾಜೀವ್ ಶುಕ್ಲಾ ಮಂಗಳವಾರ ಭೇಟಿಯಾಗಿ ಮಾತನಾಡಿದ್ದಾರೆ. ಇದಾದ ನಂತರ ಶುಕ್ಲಾ ಅವರು ದೆಹಲಿಗೆ ಬಂದು ಸೋನಿಯಾ ಗಾಂಧಿಯನ್ನು ಭೇಟಿಯಾಗಿ ಮಾಹಿತಿ ಹಂಚಿಕೊಂಡಿರುವುದು ತಿಳಿದುಬಂದಿದೆ.
ಅಧ್ಯಕ್ಷರಾಗ್ತಾರಾ
ಗೆಹ್ಲೋತ್?
ಎಐಸಿಸಿ
ಅಧ್ಯಕ್ಷ
ಸ್ಥಾನಕ್ಕೆ
ಯಾರು
ಎಂಬ
ಪ್ರಶ್ನೆಗೆ
ಈಗಲೂ
ಸರಿಯಾದ
ಉತ್ತರ
ಸಿಗುತ್ತಿಲ್ಲ.
ರಾಹುಲ್
ಗಾಂಧಿ
ಅಥವಾ
ಪ್ರಿಯಾಂಕಾ
ಗಾಂಧಿ
ಅವರೇ
ಅಧ್ಯಕ್ಷರಾಗಲಿ
ಎಂದು
ಅನೇಕ
ಕಾಂಗ್ರೆಸ್
ನಾಯಕರು
ಹೇಳುತ್ತಿದ್ದಾರೆ.
ಆದರೆ,
ಗಾಂಧಿ
ಕುಟುಂಬಕ್ಕೆ
ಸೇರದ
ವ್ಯಕ್ತಿ
ಪಕ್ಷದ
ಚುಕ್ಕಾಣಿ
ಹಿಡಿಯಬೇಕು
ಎಂದು
ಪ್ರಶಾಂತ್
ಕಿಶೋರ್
ಸೇರಿ
ಕೆಲವರ
ಸಲಹೆಯಾಗಿದೆ.
ಹಂಗಾಮಿ ಅಧ್ಯಕ್ಷೆಯಾಗಿರುವ ಸೋನಿಯಾ ಗಾಂಧಿ ಅನಾರೋಗ್ಯದ ಕಾರಣ ಆ ಜವಾಬ್ದಾರಿಯಲ್ಲಿ ಮುಂದುವರಿಯಲು ಅಸಾಧ್ಯ. ಕೆಲ ವರದಿಗಳ ಪ್ರಕಾರ ಸೋನಿಯಾ ಗಾಂಧಿ ಅವರು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋತ್ಗೆ ಕಾಂಗ್ರೆಸ್ ಅಧ್ಯಕ್ಷರಾಗುವಂತೆ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.
(ಒನ್ಇಂಡಿಯಾ ಸುದ್ದಿ)