ಭಜರಂಗಿ ಭಾಯಿಜಾನ್, ಉಡ್ತಾ ಪಂಜಾಬ್ ಬಿಡುಗಡೆಗಿತ್ತು ಕೇಂದ್ರದ ಅಡ್ಡಿ!
ಸಿನಿಮಾಗಳಿಗೆ ಸೆನ್ಸಾರ್ ಪ್ರಮಾಣ ಪತ್ರ ನೀಡುವಲ್ಲಿ ಕೇಂದ್ರದ ಹಸ್ತಕ್ಷೇಪ. ಕೆಲವು ಚಿತ್ರಗಳ ಪರವಾಗಿ, ಕೆಲವು ಚಿತ್ರಗಳ ವಿರುದ್ಧವಾಗಿದ್ದ ಕೇಂದ್ರ. ಸೆನ್ಸಾರ್ ಬೋರ್ಡ್ ನ ಪದಚ್ಯುತ ಅಧ್ಯಕ್ಷ ಪಹ್ಲಾದ್ ನಿಹಲಾನಿ ಹೇಳಿಕೆ.
ನವದೆಹಲಿ, ಆಗಸ್ಟ್ 19: ಕಳೆದ ವರ್ಷದ ಬ್ಲಾಕ್ ಬಸ್ಟರ್ ಚಿತ್ರವಾದ ಭಜರಂಗಿ ಭಾಯಿಜಾನ್ ಹಾಗೂ ದೇಶಾದ್ಯಂತ ಭಾರೀ ಸದ್ದು ಮಾಡಿದ್ದ ಉಡ್ತಾ ಪಂಜಾಬ್ ಚಿತ್ರಗಳಿಗೆ ಸೆನ್ಸಾರ್ ಪ್ರಮಾಣ ಪತ್ರ ನೀಡದಂತೆ ತಮ್ಮ ಮೇಲೆ ಕೇಂದ್ರ ಸರ್ಕಾರ ಒತ್ತಡ ಹೇರಿತ್ತು ಎಂದು ಕೇಂದ್ರೀಯ ಸೆನ್ಸಾರ್ ಮಂಡಳಿಯ ಮಾಜಿ ಅಧ್ಯಕ್ಷ ಪಹ್ಲಾದ್ ನಿಹಲಾನಿ ಅವರು ಆರೋಪಿಸಿದ್ದಾರೆ. ಖಾಸಗಿ ಸುದ್ದಿ ಮಾಧ್ಯಮಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ಹೀಗೆ ಆರೋಪಿಸಿದ್ದಾರೆ.
ಹಲವಾರು ರಾಜಕೀಯ ಕಾರಣಗಳಿಗಾಗಿ ತಮ್ಮನ್ನು ಕೆಲವಾರು ಸಿನಿಮಾಗಳಿಗೆ ತೊಂದರೆ ಕೊಡುವಂತೆ ಬಳಸಿಕೊಳ್ಳಲು ಕೇಂದ್ರ ಸರ್ಕಾರ ಪ್ರಯತ್ನಿಸಿತ್ತು. ಆದರೆ, ಅವಕ್ಕೆ ನಾನು ಗಮನ ಕೊಡದೇ ಕೆೇವಲ ನನ್ನ ಕರ್ತವ್ಯ ನಿಭಾಯಿಸಿದ್ದಕ್ಕಾಗಿ ತಮ್ಮನ್ನು ಇತ್ತೀಚೆಗೆ ಸೆನ್ಸಾರ್ ಮಂಡಳಿಯ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿದೆ ಎಂದು ನಿಹಲಾನಿ ಆರೋಪಿಸಿದರು.
ಭಜರಂಗಿ ಭಾಯಿಜಾನ್ ಸಿನಿಮಾ ಸೆನ್ಸಾರ್ ವೀಕ್ಷಣೆಗೆ ಬಂದಾಗ, ಕೇಂದ್ರ ಗೃಹ ಸಚಿವಾಲಯದಿಂದ ಪತ್ರವೊಂದು ಬಂದಿದ್ದು, ಅದರಲ್ಲಿ ಭಜರಂಗಿ ಭಾಯಿಜಾನ್ ಸಿನಿಮಾಕ್ಕೆ ಸೆನ್ಸಾರ್ ಪ್ರಮಾಣ ಪತ್ರ ನೀಡಬಾರದು ಎಂದು ಸೂಚಿಸಲಾಗಿತ್ತು. ರಂಜಾನ್ ಹಬ್ಬದ ವೇಳೆ ಈ ಚಿತ್ರ ಬಿಡುಗಡೆಯಾಗಬೇಕಿದ್ದರಿಂದ ಆಗ ಜನರು ಚಿತ್ರದಲ್ಲಿನ ಕೆಲವಾರು ವಿಚಾರಗಳ ಬಗ್ಗೆ ರೊಚ್ಚಿಗೇಳಬಹುದು ಎಂದು ಹೇಳಲಾಗಿತ್ತು. ಆದರೆ, ಚಿತ್ರ ನೋಡಿದ ನಂತರ, ಗಲಾಟೆಯಾಗುವಂಥ ಯಾವುದೇ ಅಂಶ ಇಲ್ಲ ಎಂದು ಎನ್ನಿಸಿದ್ದರಿಂದಾಗಿ ಚಿತ್ರಕ್ಕೆ ಸೆನ್ಸಾರ್ ಪ್ರಮಾಣ ಪತ್ರ ನೀಡಿದ್ದೆ ಎಂದಿದ್ದಾರೆ ನಿಹಲಾನಿ.
ಅವರ ಮಾತುಗಳಿಂದ ಆಯ್ದ ಭಾಗ ಇಲ್ಲಿದೆ.

ಹೊಸ ವಿಚಾರ ತಿಳಿಸಿದ ನಿಹಲಾನಿ
''ಪಂಜಾಬ್ ನ ಡ್ರಗ್ಸ್ ಮಾಫಿಯಾ ಬಗೆಗಿನ ಆ ಕಥೆಯನ್ನು ಯಾವುದೇ ಕಾರಣಕ್ಕೂ ಬಿಡುಗಡೆಗೆ ಅವಕಾಶ ಮಾಡಿಕೊಡಬಾರದು ಎಂದು ಕೇಂದ್ರ ಸರ್ಕಾರದ ಮಾಹಿತಿ ಹಾಗೂ ಪ್ರಸಾರ ಖಾತೆಯ ಅಂದಿನ ಸಚಿವೆ ಸ್ಮೃತಿ ಇರಾನಿ ಸೂಚಿಸಿದ್ದರು. ಆ ಚಿತ್ರ ವೀಕ್ಷಿಸಿದ ನಾನು ಹಲವಾರು ಕಟ್ ಗಳನ್ನು ಸೂಚಿಸಿದ್ದೆ. ಆದರೆ, ಆ ಚಿತ್ರದ ನಿರ್ಮಾಪಕರು ಬಾಂಬೆ ಹೈಕೋರ್ಟ್ ಕಡೆಯಿಂದ ಕೇವಲ ಒಂದು ಕಟ್ ಮೂಲಕ ಚಿತ್ರ ಬಿಡುಗಡೆ ಮಾಡುವಂಥ ಆದೇಶ ಪಡೆದು ಚಿತ್ರ ರಿಲೀಸ್ ಮಾಡಿದರು''.

ಸೂಚನೆ ನಿರಾಕರಿಸಿದ್ದರಿಂದ ಅಸಮಾಧಾನ
''ಉಡ್ತಾ ಪಂಜಾಬ್ ಚಿತ್ರವನ್ನು ತಡೆ ಹಿಡಿಯುವಂತೆ ಸ್ಮೃತಿ ಇರಾನಿ ಸೂಚಿಸಿದ್ದಾಗ, ಆ ಚಿತ್ರವು ನ್ಯಾಯಾಲಯದ ಕಟಕಟೆಯಲ್ಲಿತ್ತು. ಹಾಗಾಗಿ, ನಾನು ಬಿಡುಗಡೆಗೆ ತಡೆಯೊಡ್ಡಲು ಸಾಧ್ಯವಿಲ್ಲ ಎಂದು ಹೇಳಿದ್ದೆ. ಇದು ಅವರಿಗೆ ಇರುಸು-ಮುರುಸು ತಂದಿತ್ತು ಎಂದರು. ಹಾಗಾಗಿ, ಅವರು ನನ್ನನ್ನು ಪದಚ್ಯುತಿಗೊಳಿಸುವ ಬಗ್ಗೆ ಅಂದೇ ಆಲೋಚಿಸಿರಬಹುದು''.

ಸ್ಮೃತಿ ಇರಾನಿಗೆ ಅಸಮಾಧಾನ
''ಇದಾದ ನಂತರ, ಇತ್ತೀಚೆಗೆ ಬಿಡುಗಡೆಯಾದ 'ಇಂದು ಸರ್ಕಾರ್' ಚಿತ್ರವನ್ನು ಬೇಗನೇ ಬಿಡುಗಡೆ ಮಾಡಬೇಕೆಂದು ಸೂಚಿಸಿದರು. ಆದರೆ, ಆ ಚಿತ್ರದಲ್ಲಿ ನನಗೆ ಕೆಲವಾರು ಆಕ್ಷೇಪಣೆಗಳು ಕಂಡಿದ್ದರಿಂದಾಗಿ ಆ ಚಿತ್ರವನ್ನು ನಾನು ಕೆಲ ದಿನಗಳ ಕಾಲ ತಡೆ ಹಿಡಿದಿದ್ದೆ. ಇದು ಅವರನ್ನು ಕೆರಳಿಸಿತು. ಹೀಗಾಗಿ, ಅವರು ನನ್ನ ಪದಚ್ಯುತಿಗೆ ಪ್ರಯತ್ನ ಪಟ್ಟಿರಬಹುದು''.

ಸಂಪೂರ್ಣ ನಿರ್ಧಾರ ಸ್ಮೃತಿ ಇರಾನಿ ಅವರದ್ದೇ
''ಲೇಖಕಿ ಹಾಗೂ ಚಿತ್ರ ನಿರ್ಮಾಪಕಿ ಏಕ್ತಾ ಕಪೂರ್ ಅವರ ಉಡ್ತಾ ಪಂಜಾಬ್ ಚಿತ್ರದ ಬಗ್ಗೆ ನಾನು ಹೆಚ್ಚು ಖಡಕ್ಕಾಗಿ ನಡೆದುಕೊಂಡಿದ್ದರಿಂದಲೇ ಏಕ್ತಾ ಕಪೂರ್ ಅವರ ಶಿಫಾರಸಿನಿಂದಲೇ ಸ್ಮೃತಿ ಇರಾನಿ ನನ್ನನ್ನು ಸೆನ್ಸಾರ್ ಮಂಡಳಿ ಅಧ್ಯಕ್ಷರ ಹುದ್ದೆಯಿಂದ ನನ್ನನ್ನು ತೆಗೆದುಹಾಕಿಸಿದ್ದಾರೆಂದು ಹೇಳಲಾಗುತ್ತಿದೆ. ಆದರೆ, ನನಗೆ ಏಕ್ತಾ ಕಪೂರ್ ಬಗ್ಗೆ ಅನುಮಾನಗಳಿಲ್ಲ. ಆದರೆ, ನನಗೆ ಸಂಪೂರ್ಣವಾಗಿ ಅನುಮಾನವಿರುವುದು ಸ್ಮೃತಿ ಇರಾನಿ ಮೇಲೆಯೇ''.
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications