ಟಾಯ್ಲೆಟ್ ಮುಂದೆ ಸೆಲ್ಫಿ: ಸ್ವಚ್ಛಭಾರತಕ್ಕೆ ಹೊಸ ಐಡಿಯಾ!
ಸೀತಾಪುರ, ಮೇ 26: "ನಿಮ್ಮ ಮನೆಯ ಟಾಯ್ಲೆಟ್ ಮುಂದೆ ಸೆಲ್ಫಿ ತೆಗೆದುಕೊಂಡು ಬನ್ನಿ" ಎಂದು ವಿಭಿನ್ನ ಐಡಿಯಾವನ್ನು ಉತ್ತರ ಪ್ರದೇಶದ ಸಿತಾಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ನೀಡಿದ್ದಾರೆ.
ಸ್ವಚ್ಛ ಭಾರತದತ್ತ ಇದೊಂದು ವಿನೂತನ ಹೆಜ್ಜೆ ಎಂದು ಅವರು ಬಣ್ಣಿಸಿದ್ದಾರೆ. ಎಲ್ಲಾ ಸರ್ಕಾರಿ ಉದ್ಯೋಗಿಗಳೂ ತಮ್ಮ ಮನೆಯ ಟಾಯ್ಲೆಟ್ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡು ಬಂದು ತೋರಿಸುವ ಟಾಸ್ಕ್ ಇದು. ಪ್ರತಿ ಮನೆಯಲ್ಲಿಯೂ ಶೌಚಾಲಯ ಇದೆಯೇ ಇಲ್ಲವೇ ಎಂಬುದನ್ನು ತಿಳಿಯಲು ಮಾಡಿದ ಉಪಾಯ ಇದು.

ಸಿತಾಪುರ ಜಿಲ್ಲೆಯನ್ನು ಬಯಲುಮಲವಿಸರ್ಜನೆ ಮುಕ್ತ ಜಿಲ್ಲೆಯನ್ನಾಗಿ ಮಾಡುವ ಪಣತೊಟ್ಟಿರುವ ಜಿಲ್ಲಾ ಮ್ಯಾಜಿಸ್ಟ್ರೇಟ್ ಇಂಥದೊಂದು ವಿನೂತನ ಕೆಲಸಕ್ಕೆ ಕೈಹಾಕಿದ್ದಾರೆ.
ಸೆಲ್ಫಿ ತೆಗೆದುಕೊಳ್ಳದೆ ಬಂದವರ ಒಂದು ತಿಂಗಳ ಸಂಬಳವನ್ನು ತಡೆಹಿಡಿಯಲಾಗುವುದು ಎಂದು ಮ್ಯಾಜಿಸ್ಟ್ರೇಟ್ ಖಡಕ್ ಆಗಿ ಹೇಳಿದ್ದಾರಂತೆ!












Click it and Unblock the Notifications