ಮಂಗಗಳಿಗೆ ಪಾಠ ಕಲಿಸಲು ಕರಡಿ ವೇಷ ಹಾಕುವ ವ್ಯಕ್ತಿ, ಇಲ್ಲಿದೆ ನೋಡಿ ವಿಚಿತ್ರ ಗೆಟಪ್ | Sircilla District
ಮಂಗಗಳ ಕಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ, ಅದರಲ್ಲೂ ರೈತರು ತಮ್ಮ ಅರ್ಧ ಬೆಳೆಯನ್ನೇ ಈ ರೀತಿಯಾಗಿ ಕಳೆದುಕೊಳ್ಳುವ ಆತಂಕದಲ್ಲಿ ಇದ್ದಾರೆ. ಇದರ ಜೊತೆಗೆ ಜನರ ಮೇಲೆ ಮಂಗಗಳ ದಾಳಿ ಬೇರೆ ಭಯ ಹುಟ್ಟಿಸುತ್ತಿದೆ. ಇದು ಒಂದು ಜಾಗದ ಸಮಸ್ಯೆ ಅಲ್ಲ, ಇಡೀ ಇಂಡಿಯಾದಲ್ಲಿ ಈ ರೀತಿಯ ಸಮಸ್ಯೆ ರೈತರನ್ನು ಕಾಡುತ್ತಲೇ ಇದೆ. ಅದರಲ್ಲೂ ತೋಟಗಾರಿಕಾ ಬೆಳೆಗಳು ಇದ್ದರೆ ಕಥೆ ಮುಗಿಯಿತು ಅಂತಾನೇ ಅರ್ಥ. ತೋಟಗಳಿಗೆ ಹಿಂದೆ & ಮುಂದೆ ಯೋಚನೆ ಮಾಡದೆ ದಾಳಿ ಮಾಡಿಬಿಡುತ್ತದೆ ಮಂಗಗಳ ಗುಂಪು. ಹೀಗಿದ್ದಾಗಲೇ ಇಲ್ಲೊಬ್ಬ ವ್ಯಕ್ತಿ ಕೋತಿಗಳನ್ನ ಓಡಿಸಲು & ರೈತರ ಬೆಳೆ ರಕ್ಷಣೆಗೆ ಏನು ಮಾಡಿದ್ದಾರೆ ಗೊತ್ತಾ?
ಕರ್ನಾಟಕದ ನೆರೆಯ ರಾಜ್ಯ ತೆಲಂಗಾಣದಲ್ಲಿ ಕೋತಿಗಳನ್ನು ಓಡಿಸಲು ವಿಚಿತ್ರ ಪ್ರಯೋಗವನ್ನು ಮಾಡಲಾಗಿದೆ. ಮಂಗಗಳ ಹಾವಳಿಗೆ ಬ್ರೇಕ್ ಹಾಕಲು & ಆ ಮೂಲಕ ರೈತರಿಗೆ ನೆಮ್ಮದಿ ನೀಡಲು ಖುದ್ದು ಗ್ರಾಮದ ಜನಪ್ರತಿನಿಧಿಯೇ ಅಖಾಡಕ್ಕೆ ಇಳಿದಿರುವ ವಿಶೇಷ ಘಟನೆ ಗಮನ ಸೆಳೆಯುತ್ತಿದೆ. ಗಂಭೀರಾವೇಪೇಟೆ ಮಂಡಲದ ನಾಗಂಪೇಟ ಗ್ರಾಮದ ಸರಪಂಚ್ ರಾಜಿರೆಡ್ಡಿ ಈ ರೀತಿ ವಿಚಿತ್ರವಾದ ಪ್ರಯೋಗಕ್ಕೆ ಕೈಹಾಕಿ, ಇಡೀ ಇಂಡಿಯಾದಲ್ಲಿ ಸೌಂಡ್ ಮಾಡುತ್ತಿದ್ದಾರೆ. ಸರಪಂಚ್ ರಾಜಿರೆಡ್ಡಿ ಮಾಡಿರುವ ಐಡಿಯಾ ಸಿಕ್ಕಾಪಟ್ಟೆ ಯಶಸ್ಸು ಕೂಡ ಕೊಟ್ಟಿದ್ದು, ಕೋತಿಗಳ ಹಾವಳಿಯಿಂದಲೇ ಮುಕ್ತಿ ನೀಡುತ್ತಿದೆಯಂತೆ.

ಕೋತಿಗಳಿಂದ ಸಿಕ್ಕಾಪಟ್ಟೆ ಕಿರಿಕ್!
ಗ್ರಾಮದಲ್ಲಿ ಕೋತಿಗಳು ಸಾಕಷ್ಟು ತೊಂದರೆ ಕೊಡುವುದು, ರೈತರು ಇದರಿಂದ ಸಮಸ್ಯೆ ಎದುರಿಸಿ ಪರದಾಡುತ್ತಿರುವ ರೀತಿ ನೋಡಿದ್ದ ರಾಜಿರೆಡ್ಡಿ ಪಕ್ಕಾ ಪ್ಲಾನ್ ಒಂದನ್ನ ಮಾಡಿದ್ದರು. ಮಂಗಗಳು ಬೆಳೆ ಹಾನಿ ಮಾಡುವ & ಮನೆಗಳಿಗೆ ನುಗ್ಗುವ ಬಗ್ಗೆ ಗ್ರಾಮಸ್ಥರಿಂದ ನಿರಂತರ ದೂರು ಕೇಳಿಬರುತ್ತಲೇ ಇತ್ತು. ಈ ಕಾರಣಕ್ಕೆ ಗ್ರಾಮದ ಪ್ರಜೆಗಳು, ಪ್ರಮುಖವಾಗಿ ಮಕ್ಕಳು ಹಾಗೂ ಹಿರಿಯರು ಹೊರಗಡೆ ಹೋಗಲು ಹಿಂದೆ & ಮುಂದೆ ಯೋಚಿಸುವ ಪರಿಸ್ಥಿತಿ ಇತ್ತು. ಕೊನೆಗೆ ಇದನ್ನೆಲ್ಲಾ ನೋಡಿ, ನೋಡಿ ಮಹತ್ವದ ನಿರ್ಧಾರಕ್ಕೆ ಬಂದ ಸರಪಂಚ್ ರಾಜಿರೆಡ್ಡಿ, ತಾವೇ ಕರಡಿ ವೇಷ ಧರಿಸಿ ಕೋತಿಗಳ ಹಾವಳಿ ನಿಯಂತ್ರಣಕ್ಕೆ ಮುಂದಾದರು.
ಕಾಡಿಗೆ ಓಡಿ ಹೋದ ಮಂಗಗಳ ಗುಂಪು
ಕರಡಿ ರೀತಿ ವೇಷ ಧರಿಸಿ ಗ್ರಾಮದ ಬೀದಿಗಳು ಮತ್ತು ಹೊಲಗಳಲ್ಲಿ ಓಡಾಡುತ್ತಾ, ಮಂಗಗಳಿಗೆ ಭಯ ಹುಟ್ಟಿಸಲು ಶುರು ಮಾಡಿದ್ದರು. ಹೀಗೆ ಊರಿಗೆ ಕರಡಿ ಬಂದಿದೆ ಎಂಬಂತೆ ಭಾಸವಾಗಿ, ಕೋತಿಗಳ ಗ್ಯಾಂಗ್ ಪಕ್ಕದಲ್ಲೇ ಇರುವ ಕಾಡಿಗೆ ಓಡಿ ಹೋಗಲು ಶುರು ಮಾಡಿದೆ. ಈ ಮೂಲಕ ಹಳ್ಳಿಯಲ್ಲಿ ಇದ್ದ ದೊಡ್ಡ ಸಮಸ್ಯೆಗೆ, ಮಂಗಗಳ ಹಾವಳಿಗೆ ಬ್ರೇಕ್ ಬಿದ್ದಂತೆ ಆಗಿದೆ. ಹೀಗಾಗಿ ಈಗಲೂ ಇದೇ ರೀತಿ ಸರಪಂಚ್ ರಾಜಿರೆಡ್ಡಿ ಕರಡಿ ವೇಷ ಧರಿಸಿ ಕೋತಿಗಳನ್ನು ಊರಿಂದ ಕಾಡಿಗೆ ಓಡಿಸುತ್ತಿದ್ದಾರೆ.
ಈ ಮೂಲಕ ಗ್ರಾಮದ ಜನರ ಪಾಲಿಗೆ ರಾಜಿರೆಡ್ಡಿ ಹೀರೋ ಆಗಿದ್ದಾರೆ. ಆದರೆ ಇದು ತಾತ್ಕಾಲಿಕ ಪರಿಹಾರ ಆಗಿದ್ದು, ಮಂಗಗಳ ಸಮಸ್ಯೆಗೆ ಶಾಶ್ವತ ಪರಿಹಾರ ಬೇಕು ಎಂಬುದು ಸ್ಥಳೀಯರ ಆಗ್ರಹ ಆಗಿದೆ. ಸರ್ಕಾರ ಈ ಕೂಡಲೇ ಇದನ್ನು ಗಮನಿಸಿ, ಸೂಕ್ತ ಪರಿಹಾರ ಒದಗಿಸಲಿ ಎಂದು ಜನರು ಮನವಿ ಮಾಡುತ್ತಿದ್ದಾರೆ. ಇಷ್ಟೆಲ್ಲದರ ನಡುವೆ ಸರಪಂಚ್ ರಾಜಿರೆಡ್ಡಿ ಮಾಡುತ್ತಿರುವ ಈ ಕೆಲಸ ಇಡೀ ದೇಶದ ಗಮನ ಸೆಳೆಯುತ್ತಿದ್ದು, ಎಲ್ಲೆಲ್ಲೂ ವೈರಲ್ ಆಗುತ್ತಿದೆ. ಹಾಗೇ ತಮ್ಮ ಊರಿನವರ ಯೋಗಕ್ಷೇಮಕ್ಕಾಗಿ ಇಷ್ಟು ಕಷ್ಟಪಡುತ್ತಿರುವ ಸರಪಂಚ್ ರಾಜಿರೆಡ್ಡಿ ಅವರಿಗೆ, ವ್ಯಾಪಕ ಬೆಂಬಲ ಕೂಡ ಇಡೀ ದೇಶಾದ್ಯಂತ ಇದೀಗ ವ್ಯಕ್ತವಾಗುತ್ತಿದೆ.
-
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Asha Bosle Net Worth: ದೇಶ-ವಿದೇಶಗಳಲ್ಲಿ ರೆಸ್ಟೊರೆಂಟ್ಸ್, ನೂರಾರು ಕೋಟಿ ಒಡತಿ ಆಶಾ ಭೋಸ್ಲೆ ಒಟ್ಟು ಆಸ್ತಿ ವಿವರ ಹೀಗಿದೆ












Click it and Unblock the Notifications