ನೇಪಾಳದಂತೆ ಕರ್ನಾಟಕ & ಭಾರತದಲ್ಲೂ ಸದ್ದಿಲ್ಲದೆ ಸೋಷಿಯಲ್ ಮೀಡಿಯಾ ಅಭಿಯಾನ!
ನೇಪಾಳದಲ್ಲಿ ಮಹಾಕ್ರಾಂತಿ ಆಗಿರುವ ಬಗ್ಗೆ ಈಗ ನಿಮಗೆಲ್ಲರಿಗೂ ತಿಳಿದೇ ಇದೆ. ಇದೀಗ ನೇಪಾಳದಂತೆ ಕರ್ನಾಟಕ ಹಾಗೂ ಭಾರತದಲ್ಲೂ ಸೋಷಿಯಲ್ ಮೀಡಿಯಾ ಅಭಿಯಾನವೊಂದು ಶುರುವಾಗಿದೆ. ನೇಪಾಳದಲ್ಲಿ ಯುವ ಸಮೂಹ Gen Z Generation ನಿಂದ ಹೊಸ ಕ್ರಾಂತಿ ನಡೆಯಿತು. ಇದನ್ನು Gen Z ಅಭಿಯಾನ ಎಂದೇ ಕರೆಯಲಾಗುತ್ತದೆ. ಇದೇ ರೀತಿಯ ಅಭಿಯಾನವೊಂದು ಕರ್ನಾಟಕ ಹಾಗೂ ಭಾರತದಲ್ಲಿ ಸದ್ದಿಲ್ಲದೆ ಶುರುವಾಗಿದೆ. ಕರ್ನಾಟಕದ ರಾಜಕಾರಣಿಗಳು ದೇಶದಲ್ಲೇ ಶ್ರೀಮಂತರಿದ್ದಾರೆ ಎನ್ನುವ ವರದಿಯೊಂದು ಈಚೆಗೆ ಬಂದಿತ್ತು (ಶ್ರೀಮಂತ ಸಚಿವರಲ್ಲಿ / ಶಾಸಕರಲ್ಲಿ 8 ಜನ ಕರ್ನಾಟಕದವರು) ಇದೂ ಸಹ ಹೊಸ ಅಭಿಯಾನಕ್ಕೆ ಕಾರಣವಾಗಿದೆ.
ಹೌದು ನೇಪಾಳದಲ್ಲಿ ಕೇವಲ ಸೋಷಿಯಲ್ ಮೀಡಿಯಾ ಬ್ಯಾನ್ ಮಾತ್ರ ಕಾರಣಕ್ಕೆ ತೀವ್ರ ಪ್ರತಿಭಟನೆ ನಡೆದಿರಲಿಲ್ಲ. ಹಲವು ಕಾರಣಗಳಿಗೆ ನೇಪಾಳದಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಅದಕ್ಕೂ ಮೊದಲು ಸೋಷಿಯಲ್ ಮೀಡಿಯಾದಲ್ಲಿ ಕೆಲವೊಂದು ಪ್ರಮುಖ ಅಭಿಯಾನಗಳು ನಡೆದಿದ್ದವು. ಅದರಲ್ಲಿ ರಾಜಕರಾಣಿಗಳ ಐಷಾರಾಮಿ ಜೀವನ ಹಾಗೂ ಅವರ ಮಕ್ಕಳ ಜೀವನದ ಬಗ್ಗೆಯೂ ಹೆಚ್ಚು ಚರ್ಚೆಗಳು ನಡೆದಿದ್ದವು. ಇದೂ ಸಹ ಅಲ್ಲಿ ಅಭಿಯಾನವ ಸ್ವರೂಪವನ್ನು ಪಡೆದುಕೊಂಡಿತ್ತು. ಇದೀಗ ಅದೇ ಮಾದರಿ ಕರ್ನಾಟಕ ಮತ್ತು ಭಾರತದಲ್ಲೂ ನಡೆದಿದೆ.

ನೇಪಾಳದಲ್ಲಿ ತೀವ್ರ ಪ್ರತಿಭಟನೆ ಶುರುವಾಗವುದಕ್ಕೂ ಮುಂಚೆ ಹಲವು ದಿನಗಳಿಂದ ಅಲ್ಲಿನ ಸೋಷಿಯಲ್ ಮೀಡಿಯಾದಲ್ಲಿ ನೇಪಾಳದ ರಾಜಕಾರಣಿಗಳ ಐಷಾರಾಮಿ ಜೀವನ ಹಾಗೂ ಅವರ ಮಕ್ಕಳು ಹೇಗೆ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ವಿಮಾನಗಳಲ್ಲಿ ಬಂದಿಳುಯುತ್ತಿದ್ದಾರೆ, ದುಬಾರಿ ಬ್ಯಾಗ್ ಮತ್ತು ಬಟ್ಟೆಗಳನ್ನು ಬಳಸುತ್ತಿದ್ದಾರೆ ಎನ್ನುವುದು ಚರ್ಚೆ ಆಗುತ್ತಿತ್ತು.
ಅಲ್ಲದೇ ರಾಜಕಾರಣಿಗಳ ಮಕ್ಕಳು ಯಾವ ರೀತಿ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎನ್ನುವುದು ಚರ್ಚೆ ಆಗುತ್ತಿತ್ತು. ನೇಪಾಳದಲ್ಲಿ ಇತ್ತೀಚಿನ ವರ್ಷಗಳಲ್ಲಿ ಬಡತನವು ಹೆಚ್ಚಾಗಿದೆ. ನಿರುದ್ಯೋಗ ಪ್ರಮಾಣವು ಶೇ 19% ರಿಂದ 20 ಪ್ರತಿಶತ ಹೆಚ್ಚಳವಾಗಿದೆ. ಅಲ್ಲದೇ ನೇಪಾಳದ ಜನ ಉದ್ಯೋಗಕ್ಕಾಗಿ ಭಾರತ ಸೇರಿದಂತೆ ನೆರೆಯ ರಾಷ್ಟ್ರಗಳಿಗೆ ವಲಸೆ ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು.
ಈ ಎಲ್ಲಾ ವಿಷಯಗಳು ನೇಪಾಳದ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಅದೇ ಮಾದರಿಯ ಚರ್ಚೆ ಇದೀಗ ಕರ್ನಾಟಕ ಮತ್ತು ಭಾರತದಲ್ಲೂ ನಡೆದಿದೆ. ದೇಶದಲ್ಲಿ ಹಿಂದೂ ಮತ್ತು ಮುಸ್ಲಿಂ ಗಲಭೆ, ಕೋಮುಗಲಭೆ ಹಾಗೂ ಸಂಘರ್ಷಗಳು ಏರ್ಪಟ್ಟು ಎರಡೂ ಸಮುದಾಯಗಳ ನಡುವೆ ಗಲಾಟೆಗಳು ನಡೆದು, ಜಾತಿ - ಜಾತಿಗಳ ನಡುವೆ ಗಲಾಟೆ ನಡೆದು ಜನ ಸಾವನ್ನಪ್ಪುವಾಗ ಸಾಮಾನ್ಯ ಜನರು ಹಾಗೂ ರಾಜಕಾರಣಿಗಳ ಮಕ್ಕಳ ಜೀವನವನ್ನು ಹೋಲಿಕೆ ಮಾಡಿ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ.
एक तरफ़ भाजपा नेताओं के बच्चे मलाई खा रहे हैं, और हमारे देश के बच्चे डंडे खा रहे हैं !
— Neha Yadav🦋 (@nehayadavjnp) September 13, 2025
: प्रशांत भूषण, वरिष्ठ वकील
उनके बच्चे vs आपके बच्चे https://t.co/xtMzDPrm2C
ಕರ್ನಾಟಕ ಮಾತ್ರವಲ್ಲ ರಾಷ್ಟ್ರೀಯ ಮಟ್ಟದಲ್ಲೂ ಈ ಬೆಳವಣಿಗೆ ನಡೆದಿದೆ. ಭಾರತದ ರಾಜಕಾರಣಿಗಳ ಐಷಾರಾಮಿ ಜೀವನ ಹಾಗೂ ಜನ ಸಾಮಾನ್ಯರ ಜೀವನ ಹೇಗಿದೆ, ರಾಜಕಾರಣಿಗಳ ಮಕ್ಕಳು ಹೇಗೆ ಬ್ಯೂಸಿನೆಸ್ ಮಾಡುತ್ತಿದ್ದಾರೆ ಹಾಗೂ ಯಾವ ದೇಶದಲ್ಲಿ ಏನು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ರಾಜಕಾರಣಿಗಳ ಮಕ್ಕಳು ಯಾರೂ ಬೀದಿಗೆ ಇಳಿದು ಪ್ರತಿಭಟನೆ ಮಾಡುತ್ತಿಲ್ಲ. ಯಾರೂ ಸಹ ಕೇಸರಿ ಶಾಲು ಅಥವಾ ಯಾವುದೇ ಪಕ್ಷದ ಶಾಲು ಹಾಕಿಕೊಂಡು ಬೀದಿಗೆ ಇಳಿದು ಪ್ರತಿಭಟನೆ ಮಾಡುತ್ತಿಲ್ಲ. ಪೊಲೀಸರಿಂದ ಲಾಠಿಏಟು ತಿನ್ನುತ್ತಿಲ್ಲ ಎನ್ನುವ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.
-
ಮಕ್ಕಳ ಮೊಬೈಲ್ ಬಳಕೆ: ನಿಷೇಧಕ್ಕಿಂತ ಡಿಜಿಟಲ್ ಪೇರಂಟಿಂಗ್ ಅಗತ್ಯ ಎಂದು ತಜ್ಞರ ಸಲಹೆ -
Tamarind Cultivation: ಹೊಸಪೇಟೆ ಹುಣಸೆ ಘಟಕಕ್ಕೆ ವಿಶ್ವಬ್ಯಾಂಕ್ ಉನ್ನತ ಮಟ್ಟದ ತಂಡ ಭೇಟಿ, ರೈತರಿಗೆ ಗುಡ್ನ್ಯೂಸ್ ನಿರೀಕ್ಷೆ -
Abhishek Sharma: 'ಅಭಿಷೇಕ್ ಶರ್ಮಾ ಒಬ್ಬ ಬ್ಲೈಂಡ್ ಸ್ಲಾಗರ್': ರೊಚ್ಚಿಗೆದ್ದ ಅಭಿಮಾನಿಗಳು -
Gold Rate Today: ಕರ್ನಾಟಕದ ಬೆಂಗಳೂರಿನಲ್ಲಿ ಬಂಗಾರ ದರ ಇಳಿಕೆ: ಇಲ್ಲಿದೆ ಮಾರ್ಚ್ 6ರ ದರಪಟ್ಟಿ -
Oil Import: ತೈಲ ಆಮದಿಗೆ ವಿದೇಶಗಳ ಅನುಮತಿ ಬೇಕಿಲ್ಲ: ಭಾರತದ ಸ್ವತಂತ್ರ ಇಂಧನ ನೀತಿ ಹೊಂದಿದೆ -
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಬಜೆಟ್ನಲ್ಲಿ ಹೊಸ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ -
Jacob Bethell: ಟೀಂ ಇಂಡಿಯಾ ವಿರುದ್ಧ ಸೋತರೂ ಕನ್ನಡಿಗರ ಮನಗೆದ್ದ 22 ವರ್ಷದ ಜೇಕಬ್ ಬೆಥೆಲ್ -
ರಕ್ಷಿತ್ ಶೆಟ್ಟಿ ಪೋಸ್ಟ್ ವೈರಲ್, ರಶ್ಮಿಕಾ ಮಂದಣ್ಣ ಬಗ್ಗೆ ಚರ್ಚೆ ಶುರು... Rashmika Mandanna -
ಸಂಜು ನಿಜವಾದ ಮ್ಯಾಚ್ ವಿನ್ನರ್, ವಿಶ್ವದ ನಂ.1 ಟಿ20 ಬ್ಯಾಟರ್ ಅಭಿಷೇಕ್ ಮೇಲೆ ನಂಬಿಕೆಯಿಡಿ: ರವಿಶಾಸ್ತ್ರಿ ಮಹತ್ವದ ಸಲಹೆ -
ಮೊಟ್ಟೆ ಬೆಲೆ ಭಾರಿ ಕುಸಿತ, ಕೋಟಿ ಕೋಟಿ ರೂಪಾಯಿ ಕಳೆದುಕೊಳ್ಳುತ್ತಿರುವ ರೈತರು... Operation Roaring Lion -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕರ್ನಾಟಕ ಬಜೆಟ್ 2026: ನಮ್ಮ ಮೆಟ್ರೋ 41 ಕಿ.ಮೀ ಹೆಚ್ಚುವರಿ ಮಾರ್ಗ ಶೀಘ್ರವಾಗಿ ಪೂರ್ಣ












Click it and Unblock the Notifications