ಮೋದಿ ವಿರುದ್ಧ 100 ಕೋಟಿ ಕೇಸ್ ಹಾಕಲು ಸಿದ್ದರಾಮಯ್ಯ ನೋಟಿಸ್
ಬೆಂಗಳೂರು,ಮೇ 7: ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ಸಿದ್ದರಾಮಯ್ಯ ಸೀದಾ ರೂಪಯ್ಯ ಸರ್ಕಾರ 10 ಪರ್ಸೆಂಟ್ ಕಮಿಷನ್ ಸರ್ಕಾರ, ನಂಗಾನಾಚ್ ಸರ್ಕಾರ ಸಿಎಂ ಸಿದ್ದರಾಮಯ್ಯ ಉಬ್ಲೋ ವಾಚ್ ಪ್ರಕರಣ ಎಂಬ ಮೋದಿ ಆರೋಪ ವಿಚಾರ ವಿಚಾರವಾಗಿ ಮುಖ್ಯಮಮತ್ರಿ ಸಿದ್ದರಾಮಯ್ಯ ಅವರು ಮೋದಿ ವಿರುದ್ಧ ನೂರು ಕೋಟಿ ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ.
'ನಿಜ ಹೇಳಿ ಮೋದಿ' ಎಂದು ಮತ್ತೆ ಪಂಚ ಪ್ರಶ್ನೆ ಎಸೆದ ಸಿದ್ದರಾಮಯ್ಯ
ಈ ಕುರಿತು ವಿ ಎಸ್ ಉಗ್ರಪ್ಪ ಮಾತನಾಡಿ, ನನ್ನ ಕಕ್ಷಿದಾರ ಮೇಲೆ ಇಲ್ಲಸಲ್ಲದ ಆರೋಪ ಮಾಡಿದ್ದಾರೆ.ಕರ್ನಾಟಕಕ್ಕೆ ಮೋದಿ ಬಂದ ಸಂದರ್ಭದಲ್ಲಿ ನನ್ನ ಕಕ್ಷಿದಾರ ಮೇಲೆ ಆರೋಪ ಮಾಡಿದ್ದಾರೆ. ಸೀದಾ ರೂಪಯ್ಯ ಸರ್ಕಾರ ಸೇರಿದಂತೆ ಅನೇಕ ಆರೋಪಗಳು ಮಾಡಿದ್ದಾರೆ ನನ್ನ ಕಕ್ಷಿದಾರರ ತೇಜೋವಧೆ ಮಾಡಿದ್ದಾರೆ ಹೀಗಾಗಿ ಬಿಜೆಪಿ , ಮೋದಿ, ಅಮಿತ್ ಶಾ ,ಯಡಿಯೂರಪ್ಪ ಮೇಲೆ ನೂರು ಕೋಟಿ ಮಾನನಷ್ಟ ಮೊಕದ್ದಮೆ ಹಾಕುತ್ತಿದ್ದೇವೆ ಈಗಾಗಲೇ ನೋಟಿಸ್ ಕಳುಹಿಸಿ ಕೊಡಲಾಗಿದೆ.
ಆಧಾರ ರಹಿತವಾದ ಆರೋಪ ಮಾಡಿದ್ದಾರೆ ಬಿಜೆಪಿ ನಾಯಕರು ಬಹಿರಂಗ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.